ಆ್ಯಪ್ನಗರ

ಧರ್ಮಾಂಗದ ದಿಗ್ವಿಜಯ ತಾಳಮದ್ದಳೆ ಪ್ರದರ್ಶನ

ಹೊನ್ನಾವರ : ತಾಲೂಕು ಕರ್ನಾಟಕ ಕ್ರಾಂತಿರಂಗ, ಕಾರವಾರದ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗ ಮಾಸ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರಭಾತ ನಗರದ ಕರ್ನಾಟಕ ಕ್ರಾಂತಿರಂಗದ ಕಾರ್ಯಾಲಯದಲ್ಲಿ ಧರ್ಮಾಂಗದ ದಿಗ್ವಿಜಯ ತಾಳಮದ್ದಳೆ ಪ್ರದರ್ಶನ ಲೋಕದ ಸಮಸ್ತರ ಹಿತವೇ ನಮ್ಮ ಹಿತ ಸಂದೇಶ ಸಾರಿತು.

Vijaya Karnataka 28 May 2019, 5:00 am
ಹೊನ್ನಾವರ : ತಾಲೂಕು ಕರ್ನಾಟಕ ಕ್ರಾಂತಿರಂಗ, ಕಾರವಾರದ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗ ಮಾಸ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರಭಾತ ನಗರದ ಕರ್ನಾಟಕ ಕ್ರಾಂತಿರಂಗದ ಕಾರ್ಯಾಲಯದಲ್ಲಿ ಧರ್ಮಾಂಗದ ದಿಗ್ವಿಜಯ ತಾಳಮದ್ದಳೆ ಪ್ರದರ್ಶನ ಲೋಕದ ಸಮಸ್ತರ ಹಿತವೇ ನಮ್ಮ ಹಿತ ಸಂದೇಶ ಸಾರಿತು.
Vijaya Karnataka Web KWR-27 HNR 1
ಹೊನ್ನಾವರದ ಕರ್ನಾಟಕ ಕ್ರಾಂತಿರಂಗ ಕಾರ್ಯಾಲಯದಲ್ಲಿ ಧರ್ಮಾಂಗದ ದಿಗ್ವಿಜಯ ತಾಳಮದ್ದಳೆ ನಡೆಯಿತು.


ಇಡಗುಂಜಿ ಗಣೇಶ ಯಾಜಿ ಇವರ ಭಾಗವತಿಕೆ ಮತ್ತು ಕಡತೋಕಾ ಶ್ರೀಪಾದ ಭಟ್ಟ ಇವರ ಮದ್ದಳೆಗಾರಿಕೆ ಮತ್ತು ಭಾಗವತಿಕೆ ಯಕ್ಷ ಗಾನದ ಪರಂಪರೆಯ ನೆನಪುಗಳ ಸಿಹಿ ನೀಡಿತು. ಇವರಿಗೆ ಮದ್ದಳೆ ವಾದಕರಾಗಿ ಹರಿಕೇರಿ ಪಿ.ಕೆ.ಹೆಗಡೆ ಮತ್ತು ಜನಾರ್ದನ ಶೆಟ್ಟಿ ಸಹಕರಿಸಿದರು.

ಧರ್ಮಾಂಗದನ ಪಾತ್ರಧಾರಿ ಎಮ್‌.ಎಮ್‌.ಹೆಗಡೆ, ಜನ ಮೆಚ್ಚಿಸಲು ಮಾಡುವ ದಿಗ್ವಿಜಯದ ಮಹತ್ವ ತಿಳಿಸಿದರು. ಭರತನ ಪಾತ್ರಧಾರಿ ಜಿ.ಎನ್‌.ಹೆಗಡೆ ಪ್ರಜಾಪಾಲನೆಯಲ್ಲಿ ರಾಜನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮನ ಮೆಚ್ಚುವ ರೀತಿಯಲ್ಲಿ ಹೇಳಿದರು. ನಾರದನ ಪಾತ್ರಧಾರಿ ಡಾ.ಎಸ್‌.ಡಿ.ಹೆಗಡೆ ದೇಶ ಹಿತಕ್ಕಾಗಿ ನಡೆಸುವ ಯುದ್ಧಗಳು ಲೋಕ ಕಂಟಕವಾದವು. ಜಗತ್ತಿನಲ್ಲಿ ಲೋಕದ ಸಮಸ್ತರ ಹಿತವನ್ನು ಸಾರಿದ ಏಕೈಕ ರಾಷ್ಟ್ರ ಭಾರತ. ಯುದ್ಧದ ಕಥೆಗಳ ಮೂಲಕ ಜನರಲ್ಲಿ ಯುದ್ಧ ವಿರೋಧಿ ನೀತಿ ಸಾರುತ್ತಿರುವ ಪುರಾಣ ಮಹಾಕಾವ್ಯಗಳ ಅಂತರಂಗ ತೆರೆದಿಟ್ಟರು.

ಬಲಿಯ ಪಾತ್ರಧಾರಿ ಮೂಡ್ಕಣಿ ಉದಯ ನಾಯ್ಕ, ತಮ್ಮ ವೀರೋಚಿತ ಅರ್ಥಗಾರಿಕೆಯಿಂದ ಸಭಿಕರ ಮೆಚ್ಚುಗೆ ಪಡೆದರು. ಹಡಿನಬಾಳ ಶ್ರೀಪಾದ ಭಟ್ಟ, ಕ್ರೋಧದ ಅನಾಹುತಗಳನ್ನು ಪರಮಾತ್ಮನ ಪಾತ್ರದ ಮೂಲಕ ವಿವೇಚಿಸಿ ವಿವರಿಸಿದರು.

ಆರಂಭದಲ್ಲಿ ಪ್ರಸಿದ್ಧ ಭಾಗವತ ದಿ. ನೆಬ್ಬೂರು ನಾರಾಯಣ ಹೆಗಡೆ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಾ. ಎಸ್‌.ಡಿ.ಹೆಗಡೆ ಸ್ವಾಗತಿಸಿದರು. ಎಮ್‌.ಎಮ್‌.ಹೆಗಡೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ