ಕಾರವಾರ : ರಾಜ್ಯದ ಮಂಗಳೂರಿನಿಂದ ಮಹಾರಾಷ್ಟ್ರದ ಮುಂಬಯಿವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಾಗಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಬಂಡೆಗಲ್ಲುಗಳ ಮಧ್ಯೆ ಹರಸಾಹಸ ಪಟ್ಟು ಸುರಂಗ ಕೊರೆಯಲಾಗಿದೆ.
ಕಳೆದ ತಿಂಗಳು ಅಲಿಗದ್ದಾದಿಂದ ಲಂಡನ್ ಬ್ರಿಡ್ಜ್ ತನಕ ಸಾಗಿರುವ 370 ಮೀ. ಉದ್ದದ ಸುರಂಗ ಮಾರ್ಗವು ಕೇವಲ 34 ಮೀ. ಮಾತ್ರ ಕೊರೆಯುವುದು ಬಾಕಿ ಉಳಿದಿತ್ತು. ಭಾನುವಾರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸಾಗುವಂತೆ,ಪ್ರಾಥಮಿಕ ಹಂತದ ಸುರಂಗ ಕೊರೆಯುವ ಕಾರ್ಯ ಸಂಪೂರ್ಣಗೊಂಡಿದೆ. ಜೆಸಿಬಿಗಳಿಂದ ಇನ್ನಷ್ಟು ಅಗಲಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಸುರಂಗದೊಳಗೆ ವಿದ್ಯುದ್ದೀಪ ಅಳವಡಿಸಿ ಕಾಮಗಾರಿ ನಡೆಯುತ್ತಿದ್ದು, ನೆಲ ಸಮತಟ್ಟು ಮಾಡಲಾಗುತ್ತಿದೆ. ಇನ್ನು ಸುರಂಗಕ್ಕೆ ಸುರಕ್ಷ ತೆ ದೃಷ್ಟಿಯಿಂದ ಉಕ್ಕಿನ ರಾಡ್ಗಳ ಕಮಾನಿನ ಪರದೆ ಅಳವಡಿಸಬೇಕಾಗಿದೆ. ಬಳಿಕ ಇಲ್ಲಿ ಅಳವಡಿಸಲಾಗುವ ದಪ್ಪವಾದ ಗಟ್ಟಿಮುಟ್ಟು ಉಕ್ಕಿನ ರಾಡ್ಗಳ ಕಮಾನಿಗೆ ಕಾಂಕ್ರಿಟೀಕರಣಗೊಳಿಸುವುದೊಂದು ಬಾಕಿ ಇದೆ. ಬಹತೇಕ ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಬಹುದು ಎಂದು ಇಲ್ಲಿನ ಜೆಸಿಬಿ ನಿರ್ವಾಹಕ ಸಂದೀಪ್ ಭಿಕಾಜಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ತೆರೆದ ಭಾಗದ 120 ಮೀ.ಅಂತರ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ವ್ಯಾಪ್ತಿಯಲ್ಲಿ ಸುಮಾರು 750 ಮೀ. ಉದ್ದದ ಏಕೈಕ ಸುರಂಗಮಾರ್ಗ ಕಾರವಾರದಲ್ಲಿ ಮಾತ್ರ ನಿರ್ಮಾಣಗೊಳ್ಳುತ್ತಿದ್ದು, ಕಳೆದ ಐದು ವರ್ಷಗಳಿಂದ ಕಾಮಗಾರಿ ಅವ್ಯಾಹತವಾಗಿ ನಡೆಯುತ್ತಿದೆ.
ಬಿಣಗಾದಿಂದ ಲಂಡನ್ ಬ್ರಿಡ್ಜ್ ತನಕ 750 ಮೀ. ಉದ್ದ ದ್ವಿ ಪಥದಲ್ಲಿ ಸಾಗುವ ಈ ಸುರಂಗ ಮಾರ್ಗದ ನಡುವೆ ಅಲಿಗದ್ದಾದಲ್ಲಿ 120 ಮೀ.ಅಂತರದ ತೆರೆದ ಭಾಗ ಬರುತ್ತದೆ. ಮೊದಲ ಸುರಂಗ ಮಾರ್ಗ ಬಿಣಗಾ ಬಳಿ ಆರಂಭಗೊಂಡು, ಅಲ್ಲಿಂದ ಸುಮಾರು 310 ಮೀ. ಸಾಗಿ ಅಲಿಗದ್ದಾ ಬಳಿ ಮುಕ್ತಾಯಗೊಳ್ಳುತ್ತದೆ. 120 ಮೀ. ತೆರೆದ ಭಾಗ ದಾಟಿ ಅಲಿಗದ್ದಾದ ಉತ್ತರ ಭಾಗದಿಂದ 370 ಮೀ. ಉದ್ದದ ಈ ಸುರಂಗ ಮಾರ್ಗವು ಜಿಲ್ಲಾಧಿಕಾರಿ ಬಂಗ್ಲೆ ಅಡಿಯಿಂದ ನೇರವಾಗಿ ಲಂಡನ್ ಬ್ರಿಡ್ಜ್ ಹತ್ತಿರ ಕೊನೆಗೊಳ್ಳುತ್ತದೆ.
20 ಮೀ.ಬಾಕಿ
ಬಿಣಗಾ ಬಳಿಯಿಂದ ಆರಂಭಗೊಳ್ಳುವ ಸುರಂಗ ಸಂಪೂರ್ಣವಾಗಿದೆ. ಸಧ್ಯ ಅಲ್ಲಿ ರಸ್ತೆ ಮತ್ತು ಸುರಂಗದ ಗೋಡೆಗಳಿಗೆ ಕಾಂಕ್ರಿಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸುರಂಗ ಮಾರ್ಗದ ಬಹುತೇಕ ಭಾಗ ಬಂಡೆಗಲ್ಲುಗಳ ಮೂಲಕ ಹಾದುಹೋಗುತ್ತದೆ. ಬಿಣಗಾ ಮತ್ತು ಅಲಿಗದ್ದಾ ಎರಡೂ ಕಡೆ ಸುರಂಗದಲ್ಲಿ ಬಂಡೆಗಲ್ಲುಗಳ ಸಂದಿಗಳಿಂದ ಅನೇಕ ಎಡರುತೊಡರುಗಳನ್ನು ಎದುರಿಸಿ ಹರಸಾಹಸದೊಂದಿಗೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ. ಈಗ ಉಳಿದಿರುವ ಇನ್ನೊಂದು ಭಾಗದ 20 ಮೀ. ಉದ್ದ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ಹತ್ತು-ಹದಿನೈದು ದಿನಗಳಲ್ಲಿ ಮುಗಿಯಬಹುದು ಎಂದು ಕಾರ್ಮಿಕರ ಪ್ರಮುಖರು ತಿಳಿಸುತ್ತಾರೆ.
ಸುರಕ್ಷಿತ ಕ್ರಮಕ್ಕೆ ಒತ್ತಾಯ
ಸುರಂಗ ಹೊರ ಬೀಳುವ ಲಂಡನ್ ಬ್ರಿಡ್ಜ್ ಬಳಿ ಬಂಡೆಗಲ್ಲುಗಳನ್ನು ರಾಶಿ ಹಾಕಲಾಗಿದ್ದು, ಇಲ್ಲಿನ ತಿರುವಿನಲ್ಲಿ ಅಪಘಾತಗಳು ಉಂಟಾಗುವುದು ಜಾಸ್ತಿ. ಪ್ರತಿದಿನ ವಾಹನ ದಟ್ಟಣೆ ಇರುವುದರಿಂದ ನಿರ್ಲಕ್ಷ ತೋರಿದರೂ ವಾಹನ ಪರಸ್ಪರ ಬಡಿದುಕೊಳ್ಳುವ ಸಾಧ್ಯತೆ ಹೆಚ್ಚು. ಜತೆಗೆ ಇಲ್ಲಿ ಕಾಮಗಾರಿ ನಡೆಯುವಾಗ ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಮತ್ತು ಅಪಘಾತ ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ನಾಗರಾಜ ಎಚ್. ಅವರು ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ಅಲಿಗದ್ದಾದಿಂದ ಲಂಡನ್ ಬ್ರಿಡ್ಜ್ ತನಕ ಸಾಗಿರುವ 370 ಮೀ. ಉದ್ದದ ಸುರಂಗ ಮಾರ್ಗವು ಕೇವಲ 34 ಮೀ. ಮಾತ್ರ ಕೊರೆಯುವುದು ಬಾಕಿ ಉಳಿದಿತ್ತು. ಭಾನುವಾರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸಾಗುವಂತೆ,ಪ್ರಾಥಮಿಕ ಹಂತದ ಸುರಂಗ ಕೊರೆಯುವ ಕಾರ್ಯ ಸಂಪೂರ್ಣಗೊಂಡಿದೆ. ಜೆಸಿಬಿಗಳಿಂದ ಇನ್ನಷ್ಟು ಅಗಲಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಸುರಂಗದೊಳಗೆ ವಿದ್ಯುದ್ದೀಪ ಅಳವಡಿಸಿ ಕಾಮಗಾರಿ ನಡೆಯುತ್ತಿದ್ದು, ನೆಲ ಸಮತಟ್ಟು ಮಾಡಲಾಗುತ್ತಿದೆ. ಇನ್ನು ಸುರಂಗಕ್ಕೆ ಸುರಕ್ಷ ತೆ ದೃಷ್ಟಿಯಿಂದ ಉಕ್ಕಿನ ರಾಡ್ಗಳ ಕಮಾನಿನ ಪರದೆ ಅಳವಡಿಸಬೇಕಾಗಿದೆ. ಬಳಿಕ ಇಲ್ಲಿ ಅಳವಡಿಸಲಾಗುವ ದಪ್ಪವಾದ ಗಟ್ಟಿಮುಟ್ಟು ಉಕ್ಕಿನ ರಾಡ್ಗಳ ಕಮಾನಿಗೆ ಕಾಂಕ್ರಿಟೀಕರಣಗೊಳಿಸುವುದೊಂದು ಬಾಕಿ ಇದೆ. ಬಹತೇಕ ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಬಹುದು ಎಂದು ಇಲ್ಲಿನ ಜೆಸಿಬಿ ನಿರ್ವಾಹಕ ಸಂದೀಪ್ ಭಿಕಾಜಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ತೆರೆದ ಭಾಗದ 120 ಮೀ.ಅಂತರ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ವ್ಯಾಪ್ತಿಯಲ್ಲಿ ಸುಮಾರು 750 ಮೀ. ಉದ್ದದ ಏಕೈಕ ಸುರಂಗಮಾರ್ಗ ಕಾರವಾರದಲ್ಲಿ ಮಾತ್ರ ನಿರ್ಮಾಣಗೊಳ್ಳುತ್ತಿದ್ದು, ಕಳೆದ ಐದು ವರ್ಷಗಳಿಂದ ಕಾಮಗಾರಿ ಅವ್ಯಾಹತವಾಗಿ ನಡೆಯುತ್ತಿದೆ.
ಬಿಣಗಾದಿಂದ ಲಂಡನ್ ಬ್ರಿಡ್ಜ್ ತನಕ 750 ಮೀ. ಉದ್ದ ದ್ವಿ ಪಥದಲ್ಲಿ ಸಾಗುವ ಈ ಸುರಂಗ ಮಾರ್ಗದ ನಡುವೆ ಅಲಿಗದ್ದಾದಲ್ಲಿ 120 ಮೀ.ಅಂತರದ ತೆರೆದ ಭಾಗ ಬರುತ್ತದೆ. ಮೊದಲ ಸುರಂಗ ಮಾರ್ಗ ಬಿಣಗಾ ಬಳಿ ಆರಂಭಗೊಂಡು, ಅಲ್ಲಿಂದ ಸುಮಾರು 310 ಮೀ. ಸಾಗಿ ಅಲಿಗದ್ದಾ ಬಳಿ ಮುಕ್ತಾಯಗೊಳ್ಳುತ್ತದೆ. 120 ಮೀ. ತೆರೆದ ಭಾಗ ದಾಟಿ ಅಲಿಗದ್ದಾದ ಉತ್ತರ ಭಾಗದಿಂದ 370 ಮೀ. ಉದ್ದದ ಈ ಸುರಂಗ ಮಾರ್ಗವು ಜಿಲ್ಲಾಧಿಕಾರಿ ಬಂಗ್ಲೆ ಅಡಿಯಿಂದ ನೇರವಾಗಿ ಲಂಡನ್ ಬ್ರಿಡ್ಜ್ ಹತ್ತಿರ ಕೊನೆಗೊಳ್ಳುತ್ತದೆ.
20 ಮೀ.ಬಾಕಿ
ಬಿಣಗಾ ಬಳಿಯಿಂದ ಆರಂಭಗೊಳ್ಳುವ ಸುರಂಗ ಸಂಪೂರ್ಣವಾಗಿದೆ. ಸಧ್ಯ ಅಲ್ಲಿ ರಸ್ತೆ ಮತ್ತು ಸುರಂಗದ ಗೋಡೆಗಳಿಗೆ ಕಾಂಕ್ರಿಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸುರಂಗ ಮಾರ್ಗದ ಬಹುತೇಕ ಭಾಗ ಬಂಡೆಗಲ್ಲುಗಳ ಮೂಲಕ ಹಾದುಹೋಗುತ್ತದೆ. ಬಿಣಗಾ ಮತ್ತು ಅಲಿಗದ್ದಾ ಎರಡೂ ಕಡೆ ಸುರಂಗದಲ್ಲಿ ಬಂಡೆಗಲ್ಲುಗಳ ಸಂದಿಗಳಿಂದ ಅನೇಕ ಎಡರುತೊಡರುಗಳನ್ನು ಎದುರಿಸಿ ಹರಸಾಹಸದೊಂದಿಗೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ. ಈಗ ಉಳಿದಿರುವ ಇನ್ನೊಂದು ಭಾಗದ 20 ಮೀ. ಉದ್ದ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ಹತ್ತು-ಹದಿನೈದು ದಿನಗಳಲ್ಲಿ ಮುಗಿಯಬಹುದು ಎಂದು ಕಾರ್ಮಿಕರ ಪ್ರಮುಖರು ತಿಳಿಸುತ್ತಾರೆ.
ಸುರಕ್ಷಿತ ಕ್ರಮಕ್ಕೆ ಒತ್ತಾಯ
ಸುರಂಗ ಹೊರ ಬೀಳುವ ಲಂಡನ್ ಬ್ರಿಡ್ಜ್ ಬಳಿ ಬಂಡೆಗಲ್ಲುಗಳನ್ನು ರಾಶಿ ಹಾಕಲಾಗಿದ್ದು, ಇಲ್ಲಿನ ತಿರುವಿನಲ್ಲಿ ಅಪಘಾತಗಳು ಉಂಟಾಗುವುದು ಜಾಸ್ತಿ. ಪ್ರತಿದಿನ ವಾಹನ ದಟ್ಟಣೆ ಇರುವುದರಿಂದ ನಿರ್ಲಕ್ಷ ತೋರಿದರೂ ವಾಹನ ಪರಸ್ಪರ ಬಡಿದುಕೊಳ್ಳುವ ಸಾಧ್ಯತೆ ಹೆಚ್ಚು. ಜತೆಗೆ ಇಲ್ಲಿ ಕಾಮಗಾರಿ ನಡೆಯುವಾಗ ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಮತ್ತು ಅಪಘಾತ ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ನಾಗರಾಜ ಎಚ್. ಅವರು ಒತ್ತಾಯಿಸಿದ್ದಾರೆ.