ಆ್ಯಪ್ನಗರ

ಜನರ ಮೇಲೆ ದಬ್ಬಾಳಿಕೆ ಸಲ್ಲ

ಭಟ್ಕಳ : ತಾಲೂಕಿನ ನವಾಯತ್‌ ಕಾಲೋನಿಯಲ್ಲಿ ವಿ ದಿ ಪಿಪಲ್‌ ಆಫ್‌ ಇಂಡಿಯಾ ಹೆಸರಿನಲ್ಲಿಸಿಎಎ, ಎನ್‌ಆರ್‌ಸಿ ವಿರೋಧಿ ಮಹಿಳೆಯರ ಪ್ರತಿಭಟನಾ ಸಮಾವೇಶ ಸೋಮವಾರ ಸಂಜೆ ನಡೆಯಿತು.

Vijaya Karnataka 11 Mar 2020, 5:00 am
ಭಟ್ಕಳ : ತಾಲೂಕಿನ ನವಾಯತ್‌ ಕಾಲೋನಿಯಲ್ಲಿ ವಿ ದಿ ಪಿಪಲ್‌ ಆಫ್‌ ಇಂಡಿಯಾ ಹೆಸರಿನಲ್ಲಿಸಿಎಎ, ಎನ್‌ಆರ್‌ಸಿ ವಿರೋಧಿ ಮಹಿಳೆಯರ ಪ್ರತಿಭಟನಾ ಸಮಾವೇಶ ಸೋಮವಾರ ಸಂಜೆ ನಡೆಯಿತು.
Vijaya Karnataka Web tyranny over people
ಜನರ ಮೇಲೆ ದಬ್ಬಾಳಿಕೆ ಸಲ್ಲ


ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ದೆಹಲಿಯ ಕಾನೂನು ವಿದ್ಯಾರ್ಥಿನಿ ಸ್ವಾತಿ ಖನ್ನಾ, ಈ ದೇಶದಲ್ಲಿಪ್ರಜಾ ಪ್ರಭುತ್ವ ಇದೆ, ಇದು ರಾಜ ಪ್ರಭುತ್ವ ರಾಷ್ಟ್ರ ಅಲ್ಲ, ನಮ್ಮ ಸಂವಿಧಾನವನ್ನು ಇಲ್ಲಿನ ಜನರಿಗಾಗಿ ರಚಿಸಿಕೊಂಡಿದ್ದಾಗಿದೆ ಎಂದರು.

ಜನರ ಮೇಲಿನ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ. ಎನ್‌ಪಿಆರ್‌ ಮಾಹಿತಿ ಸಂಗ್ರಹಕಾರರು ನಮ್ಮ ಮನೆಗೆ ದಾಖಲೆಯನ್ನು ನೋಡಲು ಬರುವುದಿಲ್ಲ, ಬದಲಾಗಿ ನಮ್ಮ ಮಾಹಿತಿಯನ್ನು ಸಂಗ್ರಹಿಸಲು ಬರುತ್ತಿದ್ದಾರೆ. ನಾವು ಕಾಗದವನ್ನೂ ನೀಡುವುದಿಲ್ಲ, ಮಾಹಿತಿಯನ್ನೂ ನೀಡುವುದಿಲ್ಲಎಂದರು.

ಮಹಿಳೆ ಸಿದ್ಧವಾಗಬೇಕು : ಸುಮಯ್ಯ ನೊಮಾನಿ ಮಾತನಾಡಿ, ಭಾರತ ದೇಶ ಐತಿಹಾಸಿಕ ಕಾಲಘಟ್ಟದ ನಿರ್ಣಯ ಹಂತಕ್ಕೆ ಬಂದು ನಿಂತುಕೊಂಡಿದ್ದು, ಮುಂಬರುವ ಸವಾಲುಗಳನ್ನು ಎದುರಿಸಲು ಮಹಿಳೆಯರು ಸಿದ್ಧರಾಗಿರಬೇಕು. ದೇಶದಲ್ಲಿಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಇಲ್ಲಿನ್ಯಾಯ ಎಂಬುದು ಮರೀಚಿಕೆಯಾಗುತ್ತಿದೆ. ಎಷ್ಟೇ ಕಷ್ಟ ಬಂದರೂ ದೇಶವನ್ನು ಮತ್ತೊಮ್ಮೆ ಒಡೆಯಲು ಬಿಡುವುದಿಲ್ಲಎಂದರು.

ಬಿಬಿ ರುಖಿಯಾ ಕುರಾನ್‌ ಪಠಿಸಿದರು. ಸನಿಲಾ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ನಬಿರಾ ಮೊಹತೇಶಮ್‌ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿಸೀಮಾ ಕಾಶೀಮ್‌ಜಿ, ಖಮರುನ್ನಿಸಾ ಮುನಿರಿ, ಸಾಜಿದಾ ಅಂಜುಮನ್‌, ರುಫೆದಾ ರುಕ್ನುದ್ದೀನ್‌, ಮೊಯಿನಾ ಬಾತಿನ್‌, ಬತೂಲ್‌ ಶಬಾನ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ