ಆ್ಯಪ್ನಗರ

ಮುಕ್ತ ವಿವಿಗೆ ಯುಜಿಸಿ ಮಾನ್ಯತೆ

ಕಾರವಾರ :ಮೂರು ವರ್ಷಗಳಿಂದ ಮಾನ್ಯತೆಯಿಲ್ಲದೇ ಸ್ತಬ್ಧವಾಗಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನೀಡಿದ್ದು, 2018-19ನೇ ಸಾಲಿನ ಪ್ರವೇಶಗಳು ಆರಂಭವಾಗಿದೆ ಎಂದು ಕರಾಮುವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.

Vijaya Karnataka 16 Sep 2018, 5:00 am
ಕಾರವಾರ :ಮೂರು ವರ್ಷಗಳಿಂದ ಮಾನ್ಯತೆಯಿಲ್ಲದೇ ಸ್ತಬ್ಧವಾಗಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನೀಡಿದ್ದು, 2018-19ನೇ ಸಾಲಿನ ಪ್ರವೇಶಗಳು ಆರಂಭವಾಗಿದೆ ಎಂದು ಕರಾಮುವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.
Vijaya Karnataka Web ugc recognized open source
ಮುಕ್ತ ವಿವಿಗೆ ಯುಜಿಸಿ ಮಾನ್ಯತೆ


ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19 ನೇ ಸಾಲಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಪುರ್ನಜನ್ಮ ಸಿಕ್ಕಿದೆ. ಈಗ ಬಿಎ.,ಬಿಕಾಂ, ಬಿಲಿಬ್‌, ಎಂಎ ಕನ್ನಡ , ಇಂಗ್ಲಿಷ್‌, ಹಿಂದಿ, ಉರ್ದು, ಪ್ರಾಚೀನ ಇತಿಹಾಸ, ಪುರಾತತ್ವ ಅಧ್ಯಯನ, ಎಂಎ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ, ಎಂಕಾಂ, ಎಂಎಸ್ಸಿ ಪರಿಸರ ವಿಜ್ಞಾನ ಈ ವಿಷಯಗಳಲ್ಲಿ ಪ್ರವೇಶ ಪಡೆಯಬಹುದು ಎಂದರು.

2015 ರಿಂದ 2017ರವರಗೆ ಯುಜಿಸಿ ಮಾನ್ಯತೆ ಪಡೆಯದೇ 95 ಸಾವಿರ ವಿದ್ಯಾರ್ಥಿಗಳು ಕಷ್ಟ ಅನುಭವಿಸಿದರು. ಈಗ ಹೊರ ರಾಜ್ಯದಲ್ಲಿ ಮುಕ್ತ ವಿವಿ ಕೇಂದ್ರಗಳನ್ನು ಹೊಂದಿಲ್ಲ. ಅಲ್ಲದೇ ಪ್ರಾಂಚಸ್ಸಿಗಳ ಮೂಲಕ ಕೋರ್ಸಗೆ ಅಡ್ಮಿಶನ್‌ ಪಡೆಯುವಂತಿಲ್ಲ ಎಂದು ಯುಜಿಸಿ ನಿಯಮ ಹೇರಿದೆ. ಯುಜಿಸಿ ಹಾಕಿದ ನಿಯಮಾನುಸಾರ ಮುಕ್ತ ವಿವಿ ಕಾರ್ಯರಂಭ ಮಾಡಿದೆ. ಆಡ್ಮಿಶನ್‌ ಸಹ ಜುಲೈ ಮತ್ತು ಜನೇವರಿಯಲ್ಲಿ ಮಾತ್ರ ಮಾಡುವಂತೆ ಯುಜಿಸಿ ಹೇಳಿದೆ. ಈ ವರ್ಷ ಪ್ರವೇಶದ ದಿನವನ್ನು ಒಂದು ತಿಂಗಳು ವಿಸ್ತರಿಸುವಂತೆ ಮನವಿ ಮಾಡಲಾಗುವುದು ಎಂದ ಅವರು 2017ರಲ್ಲಿ ಸುಪ್ರೀಂಕೋರ್ಟ್‌ ಹಾಗೂ ಸಂಸತ್ತು ವಿವಿ ಪ್ರವೇಶಕ್ಕೆ ಸಂಬಂಧಿಸಿದಂತೆ ರೇಗುಲೇಶನ್‌ ಮಾಡಿದೆ. ಕಾನೂನು ಬದ್ಧತೆಯಂತೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಬಿಇಡಿ, ಎಂಸ್ಸಿ, ಎಂಬಿಎಗೆ ಅನುಮತಿ ಸಿಕ್ಕಿಲ್ಲ. 12 ಕೋರ್ಸ್‌ಗಳಿಗೆ ಅನುಮತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಹಳೆಯ ಶುಲ್ಕ ಪದ್ಧತಿ:

2012-13ರಲ್ಲಿ ಇದ್ದ ಶುಲ್ಕ ಪದ್ಧತಿ ಉಳಿಸಿಕೊಳ್ಳಲಾಗಿದೆ. 5000 ರೂ.ದಲ್ಲಿ ಪದವಿ ಮತ್ತು 7000 ರೂ.ದಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದಾಗಿದೆ. ಆಲ್‌ ಲೈನ್‌ನಲ್ಲಿ ಪ್ರವೇಶ ಅರ್ಜಿ ಮತ್ತು ಶುಲ್ಕ ತುಂಬುವ ಪದ್ಧತಿ ಜಾರಿಯಲ್ಲಿ ತರಲಾಗುತ್ತಿದೆ ಎಂದು ಪ್ರೊ. ಡಿ.ಶಿವಲಿಂಗಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ