ಆ್ಯಪ್ನಗರ

ಅಮೂಲ್ಯ ಸಮಯವನ್ನು ಕಲಿಕೆಗೆ ಬಳಸಿ

ಶಿರಸಿ : ನಗರದ ವಿಶ್ವಭಾರತಿ ಪ್ಲೇ ಸ್ಕೂಲ್‌ನಲ್ಲಿ ಮಕ್ಕಳಿಂದ ಹಾಗೂ ಪಾಲಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Vijaya Karnataka 14 Feb 2019, 5:00 am
ಶಿರಸಿ : ನಗರದ ವಿಶ್ವಭಾರತಿ ಪ್ಲೇ ಸ್ಕೂಲ್‌ನಲ್ಲಿ ಮಕ್ಕಳಿಂದ ಹಾಗೂ ಪಾಲಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
Vijaya Karnataka Web use precious time for learning
ಅಮೂಲ್ಯ ಸಮಯವನ್ನು ಕಲಿಕೆಗೆ ಬಳಸಿ


ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಗರಸಭಾ ಸದಸ್ಯೆ ವೀಣಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆಯರು ತಮ್ಮ ಅಮೂಲ್ಯ ಸಮಯವನ್ನು ಒಳ್ಳೆಯ ಕಲಿಕೆ, ಕಾರ್ಯಗಳಿಗೆ ಬಳಸಬೇಕು ಎಂದರು. ಚಂದನ ಶಾಲೆ ಕಾರ್ಯದರ್ಶಿ ಎಲ್‌.ಎಂ. ಹೆಗಡೆ ಮಾತನಾಡಿದರು.

ವಿಶ್ವಭಾರತಿ ಪ್ಲೇ ಸ್ಕೂಲ್‌ ಅಧ್ಯಕ್ಷೆ ವೀಣಾ ಹೆಗಡೆ, ಶಿಕ್ಷ ಕರುಗಳಾದ ಸಂಧ್ಯಾ ಹೆಗಡೆ, ಪುಷ್ಪಾ ಹಾಗೂ ಕಲಾ ಉಪಸ್ಥಿತರಿದ್ದರು. ಸಿಂಧು ಭಟ್ಟ ನಿರೂಪಿಸಿದರು. ಇದೇ ಸಂದರ್ಭದಲ್ಲಿ ದೃಷ್ಟಿ ವಿಕಲತೆ ಹೊಂದಿದ್ದರೂ ಕಳೆದ ಸುಮಾರು 17 ವರ್ಷಗಳಿಂದ ತಾವೇ ಫಿನಾಯಿಲ್‌ ತಯಾರಿಸಿ ನಗರಾದ್ಯಂತ ಸಂಚರಿಸಿ ಕಾಲೋನಿಗಳಲ್ಲಿ ಮಾರಾಟ ಮಾಡುತ್ತ ಸ್ವಾವಲಂಬಿ ಜೀವನ ನಡೆಸುತ್ತಿರುವ ಶೇಡಿಕುಳಿಯ ವಿನಾಯಕ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ