ಆ್ಯಪ್ನಗರ

ನೀರು, ವಿದ್ಯುತ್‌ ಮಿತ ಬಳಕೆ ಮಾಡಿ

ಜೊಯಿಡಾ : ನಾಡಿಗೆ ಬೆಳಕನ್ನು ನೀಡುವ ಜೊಯಿಡಾ ತಾಲೂಕಿನಲ್ಲಿಯೇ ಹಲವು ಗ್ರಾಮಗಳು ವಿದ್ಯುತ್‌ ಬೆಳಕನ್ನು ಕಾಣದೇ ಕತ್ತಲೆಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಗಾಳಿ, ನೀರು, ಬೆಂಕಿ ಹಾಗೂ ವಿದ್ಯುತ್‌ ಇದರ ಬಳಕೆ ಮಿತಿಮೀರಿದರೆ ಅನಾಹುತಗಳಾಗುತ್ತವೆ. ಆದ್ದರಿಂದ ಇವುಗಳನ್ನು ಮಿತವಾಗಿ ಬಳಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್‌.ಎಸ್‌.ಅಂಗಡಿ ಹೇಳಿದರು.

Vijaya Karnataka 14 Dec 2022, 5:54 pm
ಜೊಯಿಡಾ : ನಾಡಿಗೆ ಬೆಳಕನ್ನು ನೀಡುವ ಜೊಯಿಡಾ ತಾಲೂಕಿನಲ್ಲಿಯೇ ಹಲವು ಗ್ರಾಮಗಳು ವಿದ್ಯುತ್‌ ಬೆಳಕನ್ನು ಕಾಣದೇ ಕತ್ತಲೆಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಗಾಳಿ, ನೀರು, ಬೆಂಕಿ ಹಾಗೂ ವಿದ್ಯುತ್‌ ಇದರ ಬಳಕೆ ಮಿತಿಮೀರಿದರೆ ಅನಾಹುತಗಳಾಗುತ್ತವೆ. ಆದ್ದರಿಂದ ಇವುಗಳನ್ನು ಮಿತವಾಗಿ ಬಳಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಸ್‌.ಎಸ್‌.ಅಂಗಡಿ ಹೇಳಿದರು.
Vijaya Karnataka Web drinking water
(ಸಾಂದರ್ಭಿಕ ಚಿತ್ರ)


ಅವರು ಶುಕ್ರವಾರ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹೆಸ್ಕಾಂ ಜೊಯಿಡಾ ಶಾಖೆಯ ಸಹಯೋಗದಲ್ಲಿ ನಡೆದ ವಿದ್ಯುತ್‌ ಸಂರಕ್ಷ ಣೆ ಮತ್ತು ಸುರಕ್ಷ ತೆ ಕುರಿತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

1270 ಮೆ.ವ್ಯಾ. ವಿದ್ಯುತ್‌ನ್ನು ಉತ್ಪಾದಿಸುವ ಜೊಯಿಡಾ ತಾಲೂಕು ಕೇವಲ 3ರಿಂದ 4 ಮೆ.ವ್ಯಾ. ವಿದ್ಯುತ್‌ನ್ನು ಬಳಸಿಕೊಳ್ಳುತ್ತಿದೆ ಎಂದು ವಿವರಿಸಿದರು.

ಮಳೆ, ಗಾಳಿ, ದಿನ, ರಾತ್ರಿ ಎನ್ನದೇ ಜನರಿಗೆ ಬೇಳಕನ್ನು ನೀಡಲು ಹೆಸ್ಕಾಂ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದೆ. ಸಮಾಜ ಅವರನ್ನು ಗೌರವಭಾವನೆಯಿಂದ ನೋಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯುತ್‌ ಸಂರಕ್ಷ ಣೆ ಮತ್ತು ಸುರಕ್ಷ ತೆ ಕುರಿತು ಚಿತ್ರ ಪ್ರದರ್ಶನ ನೀಡುತ್ತಾ ಮಾತನಾಡಿದ ದಾಂಡೇಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಮಲ್ಯ, ಸಾಮಾಜಿಕ ನ್ಯಾಯ ತತ್ವದ ಆಧಾರದಲ್ಲಿ ವಿವಿಧ ಹಂತದ ವಿದ್ಯುತ್‌ ದರವನ್ನು ಸರಕಾರ ನಿಗದಿ ಪಡಿಸುತ್ತದೆ. ವಿದ್ಯುತ್‌ ಕ್ಷೇತ್ರದಲ್ಲಿ ಉತ್ಪಾದನೆ, ಪ್ರಸರಣೆ ಹಾಗೂ ವಿತರಣೆ ಮೂರು ಅಂಗಗಳಿದ್ದು, ಕರ್ನಾಟಕದಲ್ಲಿ ಕೆ.ಪಿ.ಟಿ.ಸಿ.ಎಲ್‌. ಶೇ.60ರಷ್ಟು ವಿದ್ಯುತ್ತನ್ನು ಪೂರೈಸುತ್ತಿದೆ. ಪ್ರತಿ ದಿನ ಕರ್ನಾಟಕದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮೆ.ವ್ಯಾಟ್‌ ವಿದ್ಯುತ್‌ ಶಕ್ತಿಯ ಬೇಡಿಕೆ ಇದೆ ಎಂದರು.

ಜೊಯಿಡಾ ಶಾಖಾಧಿಕಾರಿ ಕಾವೇರಿ ಕಲ್ಯಾಣಿ ಮಾತನಾಡಿ, ಜೊಯಿಡಾ ಕ್ಷೇತ್ರದಲ್ಲಿ 8 ಗ್ರಾ.ಪಂ.ಗಳ 22 ಹಳ್ಳಿಗಳು ಬರುತ್ತಿದ್ದು, 6679 ಸ್ಥಾವರ, 246 ಪರಿವರ್ತಕಗಳಿವೆ ಎಂದು ಮಾಹಿತಿ ನೀಡಿದರು.

ಬಿ.ಜಿ.ವಿ.ಎಸ್‌. ಪಿಯು ಕಾಲೇಜು, ಶ್ರೀರಾಮ ಪ್ರೌಢ ಶಾಲೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯುತ್‌ ಶಕ್ತಿಯ ಮೂಲ, ಉಪಯೋಗ, ಸಂರಕ್ಷ ಣೆ, ಸುರಕ್ಷ ತೆ ಹಾಗೂ ಅದರ ಬಳಕೆಯ ಕುರಿತು ಮಾಹಿತಿಯನ್ನು ನೀಡಲಾಯಿತು.

ಹೆಸ್ಕಾಂ ಇಲಾಖೆಯ ತಾಂತ್ರಿಕ ಸಹಾಯಕ ಎಂಜಿನಿಯರ ವೆಂಕಟೇಶ, ದಾಂಡೇಲಿ ನಗರ ಶಾಖಾಧಿಕಾರಿ ಪರಶುರಾಮ ಹೆಬ್ಬಾರ, ರಾಮನಗರ ಶಾಖಾಧಿಕಾರಿ ಶೀತಲ ಭೂಪತಿ, ಹೆಸ್ಕಾಂ ಇಲಾಖೆಯ ಸಿಬ್ಬಂದಿ, ಜೊಯಿಡಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ