ಆ್ಯಪ್ನಗರ

ರಸ್ತೆ ತಿರುವಿನಲ್ಲಿಅಪಾಯಕಾರಿ ಕಂದರ

ಕುಮಟಾ : ತಾಲೂಕಿನಾದ್ಯಂತ ರಸ್ತೆಗಳ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಮುಖ ರಸ್ತೆಗಳಲ್ಲಿಜೀವಕ್ಕೆ ಅಪಾಯವೊಡ್ಡುವ ಕಂದರಗಳು ನಿರ್ಮಾಣಗೊಂಡಿದ್ದು, ಜನರು ಜೀವವನ್ನು ಕೈಯಲ್ಲಿಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ.

Vijaya Karnataka 6 Nov 2019, 5:00 am
ಕುಮಟಾ : ತಾಲೂಕಿನಾದ್ಯಂತ ರಸ್ತೆಗಳ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಮುಖ ರಸ್ತೆಗಳಲ್ಲಿಜೀವಕ್ಕೆ ಅಪಾಯವೊಡ್ಡುವ ಕಂದರಗಳು ನಿರ್ಮಾಣಗೊಂಡಿದ್ದು, ಜನರು ಜೀವವನ್ನು ಕೈಯಲ್ಲಿಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ.
Vijaya Karnataka Web useful ravine at road turn
ರಸ್ತೆ ತಿರುವಿನಲ್ಲಿಅಪಾಯಕಾರಿ ಕಂದರ


ಕುಮಟಾದಿಂದ ಕೂಜಳ್ಳಿ, ಚಂದಾವರ, ಮಾಸ್ತಿಕಟ್ಟಾ, ಶೇಡಿಕುಳಿ ಮಾರ್ಗವಾಗಿ ಸಂತೇಗುಳಿ, ಸಿದ್ದಾಪುರಕ್ಕೆ ಹೋಗುವ ಕೆಬಿಎಲ್‌ ರಸ್ತೆ ಮಧ್ಯದಲ್ಲಿಸಿಗುವ ಮಂಗನಹೊಳೆ ಸೇತುವೆಯ ಮುಂಭಾಗದ ಅಂಚಿನಲ್ಲಿಬೃಹತ್‌ ಪ್ರಮಾಣದ ಕಂದರ ನಿರ್ಮಾಣವಾಗಿದ್ದು, ಭಯ ಹುಟ್ಟಿಸುವಂತಾಗಿದೆ.

ಸೇತುವೆ ದಾಟುವ ತಿರುವಿನಲ್ಲಿರುವ ಈ ಕಂದರ ಬೈಕ್‌ ಸವಾರರು ಹಾಗೂ ಲಘು ವಾಹನ ಚಾಲಕರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿನಿರ್ಮಾಣಗೊಂಡಿದೆ. ಅನೇಕ ದಿನಗಳಿಂದ ಇಲ್ಲಿಗಂಭೀರ ಪರಿಸ್ಥಿತಿ ಉಂಟಾಗಿದ್ದು, ಜನರು ವಾಹನ ಸವಾರರಿಗೆ ಗೋಚರಿಸುವಂತೆ ಕಂದರದಲ್ಲಿಮರದ ಟೊಂಗೆ ಹಾಗೂ ಉಸುಕು ತುಂಬಿದ್ದಾರೆ. ಆದರೂ ಇದು ಪ್ರಯೋಜನಕ್ಕೆ ಬರುವಂತಿಲ್ಲ. ಗೊತ್ತಾಗದೇ ಸಣ್ಣಪುಟ್ಟ ಅಪಘಾತಗಳು ಇಲ್ಲಿಸಂಭವಿಸಿವೆ.

ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿಲ್ಲ : ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದರೂ, ಜನರ ಹಿತದೃಷ್ಟಿಯಿಂದ ಅಗತ್ಯವಾಗಿ ಆಗಬೇಕಾದ ಇಂತಹ ಕಾಮಗಾರಿಗಳ ಕಡೆಗೆ ಗಮನ ಹರಿಸುತ್ತಿಲ್ಲ. ಸರಕಾರ ರಸ್ತೆಗಳ ಮರು ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ ಎಂದು ಘೋಷಿಸಿದೆ. ಆದರೆ ರಸ್ತೆಗಳ ಪರಿಸ್ಥಿತಿ ಸುಧಾರಿಸಿರುವುದು ಎಲ್ಲಿಯೂ ಗೋಚರಿಸುತ್ತಿಲ್ಲ. ಜನರ ಸಮಸ್ಯೆಗಳ ಪರಿಹಾರಕ್ಕೆ ಮನಸ್ಸು ಮಾಡದ ಅಧಿಕಾರಿಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಕಾಮಗಾರಿಗಳ ಕಡೆಗೆ ವಿಶೇಷ ಗಮನ ಹರಿಸುತ್ತಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬಂದಿದೆ.

ಪಟ್ಟಣದ ರಸ್ತೆಗಳು ದುರಸ್ತಿ ಭಾಗ್ಯ ಕಾಣುತ್ತಿಲ್ಲ. ಹೀಗಿರುವಾಗ ಗ್ರಾಮೀಣ ರಸ್ತೆಗಳ ಪಾಡು ಕೇಳುವವರಿಲ್ಲ. ಅಳಿದುಳಿದ ಗುಣಮಟ್ಟದ ರಸ್ತೆಗಳು ಕಲ್ಲು, ಮಣ್ಣು ಸಾಗಣೆ ದಂಧೆಯಿಂದ ಹಾಳಾಗುತ್ತಿವೆ. ಲೊಕೋಪಯೋಗಿ ಇಲಾಖೆ ಗುಣಮಟ್ಟದ ರಸ್ತೆಗಳನ್ನು ಸಂರಕ್ಷಿಸಿಕೊಳ್ಳಲು ವಿಫಲವಾಗಿದೆ. ಸಾರ್ವಜನಿಕ ಆಸ್ತಿಗಳನ್ನು ಯಾರೂ ತಮ್ಮ ಸ್ವಾರ್ಥಕ್ಕಾಗಿ ಹಾಳು ಮಾಡುವಂತಿಲ್ಲ. ಆದರೆ ಸ್ವಾರ್ಥ ಮನೋಭಾವನೆಗಳಿಗೆ ರಸ್ತೆಗಳು ಕಳಚಿ ಹೋಗುವಂತಹ ಪರಿಸ್ಥಿತಿಗೆ ತಲುಪಿದ್ದರೂ, ಲೋಕೋಪಯೋಗಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಆದ ಕಾರಣ ಜನರ ಸುಗಮ ಓಡಾಟಕ್ಕೆ ರಸ್ತೆಗಳನ್ನು ತುರ್ತಾಗಿ ಮರು ನಿರ್ಮಾಣ ಮಾಡಬೇಕಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ