ಆ್ಯಪ್ನಗರ

ಕೊರೊನಾ ಸೋಂಕಿನ 5 ತಿಂಗಳ ಮಗು, 83 ವರ್ಷದ ವೃದ್ದರಿಗೂ ಮರುಜನ್ಮ ನೀಡಿದ ಕಾರವಾರ ಆಸ್ಪತ್ರೆ!

ಕಾರವಾರದ ಮೆಡಕಲ್‌ ಕಾಲೇಜು ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರನ್ನೂ ಕೊರೊನಾದಿಂದ ರಕ್ಷಿಸಿ ಮರುಜನ್ಮ ನೀಡಿದೆ. 5 ತಿಂಗಳ ಮಗು ಹಾಗೂ 83 ವರ್ಷದ ವೃದ್ದರೊಬ್ಬರನ್ನ ಸೋಂಕು ಮುಕ್ತಗೊಳಿಸಿದೆ.

Vijaya Karnataka Web 23 Jun 2020, 3:37 pm
ಕಾರವಾರ: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿದ್ದರೆ ಉತ್ತರ ಕನ್ನಡದಂತಹ ಜಿಲ್ಲೆ ಪುಟ್ಟ ಶಿಶುಗಳಿಂದ ಹಿಡಿದು ವಯೋವೃದ್ದರವರೆಗೆ ಎಲ್ಲರಿಗೂ ಪುನರ್ಜನ್ಮ ನೀಡುತ್ತಾ ಗಮನ ಸೆಳೆಯುತ್ತಿದೆ. ಕಾರವಾರ ಮೆಡಿಕಲ್‌ ಕಾಲೇಜಿನಲ್ಲಿ 83 ವರ್ಷದ ವೃದ್ದರೊಬ್ಬರು ಗುಣಮುಖರಾಗಿದ್ದರೆ.
Vijaya Karnataka Web karvar hospital


ಕೊರೊನಾದಿಂದ ಬಳಲುತ್ತಿದ್ದ 5 ತಿಂಗಳ ಮಗುವನ್ನು ಸೋಂಕು ಮುಕ್ತಗೊಳಿಸಲಾಗಿದೆ. ರೋಗಿಗಳಿಗೆ ಚಿಕಿತ್ಸೆ ಮಾತ್ರವಲ್ಲ ಆತ್ಮವಿಶ್ವಾಸವನ್ನೂ ಮೂಡಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ ಎನ್ನತ್ತಾರೆ ಕಾಲೇಜಿನ ಡೀನ್‌ ಡಾ.ಗಜಾನನ ನಾಯಕ ಅವರು. ಇಲ್ಲಿ ಚಿಕಿತ್ಸೆ ಪಡೆದ ಶೇ. 60ಕ್ಕೂ ಹೆಚ್ಚು ಸೋಂಕಿತರು ಎಂಟು, ಹತ್ತು ದಿನದೊಳಗೆ ಗುಣಮುಖರಾಗುತ್ತಿದ್ದಾರೆ.

ಕೊರೊನಾ ಸೋಂಕು ತಗುಲಿ 14 ದಿನಗಳವರೆಗೂ ವೈರಾಣು ದೇಹದಲ್ಲಿ ಇರುತ್ತದೆ. ಆದರೆ ಜಿಲ್ಲೆಯಲ್ಲಿ ಪ್ರಸ್ತುತ 100ಕ್ಕೂ ಹೆಚ್ಚು ಸೋಂಕಿತರು ಗರಿಷ್ಟ 10 ದಿನಗಳೊಳಗೆ ಗುಣಮುಖರಾಗಿದ್ದಾರೆ. ಅಲ್ಲದೇ ಶೇ. 99ರಷ್ಟು ಸೋಂಕಿತರು ಚಿಕಿತ್ಸೆ ಮುಗಿಯುವವರೆಗೂ ರೋಗ ಲಕ್ಷಣರಹಿತರಾಗಿಯೇ ಗುಣಮುಖರಾಗುತ್ತಿದ್ದಾರೆ ಎಂದು ಡೀನ್‌ ತಿಳಿಸಿದ್ದಾರೆ.

ಅಶಿಸ್ತೇ ಕೊರೊನಾ ಮೂಲ..! ಸೋಂಕಿತರಲ್ಲಿ ಶೇ.50ರಷ್ಟು ಜನ ಮಾಸ್ಕ್‌ ಧರಿಸುತ್ತಿರಲಿಲ್ಲ..

ವೈರಸ್‌ಗಳಲ್ಲೂ ಇದೆ ವ್ಯತ್ಯಾಸ!ದುಬೈ ಮತ್ತು ಮಹಾರಾಷ್ಟ್ರದಿಂದ ಸೋಂಕು ತಗುಲಿಸಕೊಂಡು ಬಂದವರು ಮತ್ತು ಅವರ ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾದವರು, ದುಬೈ-ಮಹಾರಾಷ್ಟ್ರ ಹೊರತಾಗಿ ಇತರ ಪ್ರದೇಶಗಳಲ್ಲಿ ಸೋಂಕು ತಗುಲಿಸಿಕೊಂಡವರು. ಇವರೆಲ್ಲರಲ್ಲಿ ವೈರಾಣು ವೃದ್ದಿಸುವ ಪ್ರಮಾಣದಲ್ಲಿ ವ್ಯತ್ಯಾಸವಿದೆ. ದುಬೈ ಮತ್ತು ಮಹಾರಾಷ್ಟ್ರದಿಂದ ನೇರವಾಗಿ ಸೋಂಕು ತಗುಲಿಸಿಕೊಂಡು ಬಂದವರಲ್ಲಿ ವೈರಾಣು ವೃದ್ದಿಸುವ ವೇಗ (ಮ್ಯುಟೇಶನ್‌) ಹೆಚ್ಚಿದೆ. ಹಾಗಾಗಿ ನೇರವಾಗಿ ಸೋಂಕು ಹೊತ್ತು ಬಂದವರಿಗಿಂತ ಬೇರೆಯವರು ಬೇಗ ಗುಣಮುಖರಾಗುತ್ತಿರುವ ಸಂಭವ ಇದೆ ಎಂದು ವೈದ್ಯರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ