ಆ್ಯಪ್ನಗರ

ಬಾಳಿಗಾ ಕಾಲೇಜಿನಲ್ಲಿ ವನಮಹೋತ್ಸವ

ಕುಮಟಾ : ಪಟ್ಟಣದ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಸ್‌.ರವೀಂದ್ರನ್‌ ಸಸಿ ನೆಟ್ಟು ಚಾಲನೆ ನೀಡಿದರು.

Vijaya Karnataka 17 Jun 2019, 5:00 am
ಕುಮಟಾ : ಪಟ್ಟಣದ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಸ್‌.ರವೀಂದ್ರನ್‌ ಸಸಿ ನೆಟ್ಟು ಚಾಲನೆ ನೀಡಿದರು.
Vijaya Karnataka Web vanamahotsav at baliga college
ಬಾಳಿಗಾ ಕಾಲೇಜಿನಲ್ಲಿ ವನಮಹೋತ್ಸವ


ನಂತರ ಮಾತನಾಡಿದ ಅವರು, ವಿಕಾಸ ಗ್ರಾಮೀಣ ಬ್ಯಾಂಕ್‌ ಮೊದಲಿನಿಂದಲೂ ಪರಿಸರ ಸ್ನೇಹಿಯಾಗಿದೆ. ಬ್ಯಾಂಕ್‌ ಲಕ್ಷ ವೃಕ್ಷ ಯೋಜನೆಯನ್ನು ಆರಂಭಿಸಿದೆ. ಬಾಗಲಕೋಟೆ ಮುಂತಾದ ಪ್ರದೇಶಗಳಲ್ಲಿ ಕೆರೆಗಳನ್ನು ಹೂಳೆತ್ತಿ ನೀರು ತುಂಬಿಸುವ ಕಾರ್ಯ ಮಾಡಿದ್ದೇವೆ. ಕುಮಟಾದಲ್ಲಿಯೂ ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

ಅಂಕಣಕಾರ ಪ್ರೊ.ವಿಷ್ಣು ಜೋಶಿ ಅವರು ಪುಸ್ತಕ ಸಂಸ್ಕೃತಿಯ ಉಜ್ಜೀವನ ಕಾರ್ಯಕ್ರಮದನ್ವಯ ತಾವು ಬರೆದ 'ಝಲಕುಗಳು' ಪುಸ್ತಕವನ್ನು ಎಸ್‌. ರವೀಂದ್ರನ್‌ ಅವರಿಗೆ ನೀಡಿದರು. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಉಮೇಶ ಶಾಸ್ತ್ರಿ ಹಾಗೂ ಪಿಯುಸಿ ವಿಭಾಗದ ಪ್ರಾಚಾರ್ಯೆ ವೀಣಾ ಕಾಮತ್‌ ಮಾತನಾಡಿದರು. ಕೆ.ವಿ.ಜಿ.ಬಿ. ಬ್ಯಾಂಕಿನ ಪ್ರಧಾನ ಕಚೇರಿಯ ಹಿರಿಯ ವ್ಯವಸ್ಥಾಪಕ ಜಿ.ಎಸ್‌. ಭಾಗ್ವತ್‌ ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು. ಉಲ್ಲಾಸ ಗುನಗಾ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ