ಆ್ಯಪ್ನಗರ

ಯಕ್ಷಗಾನ ಗಾರುಡಿಗ, ನೆಬ್ಬೂರು ನಾರಾಯಣ ಭಾಗವತ ದೈವಾಧೀನ

ಯಕ್ಷಗಾನದಲ್ಲಿ ಶ್ರೀರಾಮ ನಿರ್ಯಾಣ, ಶ್ರೀಕೃಷ್ಣ ಸಂಧಾನದ ಪದ್ಯಗಳು ಸೇರಿದಂತೆ ಅವರ ಕಂಠದಿಂದ ಹೊರ ಹೊಮ್ಮಿದ ಪದ್ಯಗಳು ನೆಬ್ಬೂರರ ಶೈಲಿಯೆಂದೇ ಪ್ರಸಿದ್ಧಿಯನ್ನು ಪಡೆದಿದ್ದವು. ಯಕ್ಷರಂಗದ ಮೇರು ಪ್ರತಿಭೆಗಳಾಗಿದ್ದ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಸಾಕಷ್ಟು ಪ್ರತಿಭೆಗಳಿಗೆ ಇವರು ಸಾಥಿಯಾಗಿದ್ದರು.

Vijaya Karnataka Web 11 May 2019, 3:54 pm
ಶಿರಸಿ: ಯಕ್ಷಗಾನ ಕಲಾ ಲೋಕದ ಗಾನ ಗಾರುಡಿಗ ಎಂದೇ ಕಲಾರಾಧಕರ ಮನಸಲ್ಲಿ ಅಚ್ಚಾಗಿ ಉಳಿದಿದ್ದ ಹಿರಿಯ ಭಾಗವತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹಣಗಾರು ಗ್ರಾಮದ ನಿವಾಸಿ ನೆಬ್ಬೂರು ನಾರಾಯಣ ಭಾಗವತರು (83) ಶನಿವಾರ ಬೆಳಗ್ಗೆ ದೈವಾಧೀನರಾದರು.
Vijaya Karnataka Web Nebbooru Narayana Bhagawatha


ಯಕ್ಷಗಾನದ ಭಾಗವತಿಕೆಯಲ್ಲಿ ರಾಜ್ಯದಾದ್ಯಂತ ತನ್ನದೇ ಛಾಪು ಮೂಡಿಸಿದ್ದ ಭಾಗವತರು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದರು.

ನೆಬ್ಬೂರು ನಾರಾಯಣ ಭಾಗವತರು


ಯಕ್ಷಗಾನದಲ್ಲಿ ಶ್ರೀರಾಮ ನಿರ್ಯಾಣ, ಶ್ರೀಕೃಷ್ಣ ಸಂಧಾನದ ಪದ್ಯಗಳು ಸೇರಿದಂತೆ ಅವರ ಕಂಠದಿಂದ ಹೊರ ಹೊಮ್ಮಿದ ಪದ್ಯಗಳು ನೆಬ್ಬೂರರ ಶೈಲಿಯೆಂದೇ ಪ್ರಸಿದ್ಧಿಯನ್ನು ಪಡೆದಿದ್ದವು. ಯಕ್ಷರಂಗದ ಮೇರು ಪ್ರತಿಭೆಗಳಾಗಿದ್ದ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಸಾಕಷ್ಟು ಪ್ರತಿಭೆಗಳಿಗೆ ಇವರು ಸಾಥಿಯಾಗಿದ್ದರು.

ದೇವರ ಪೂಜೆಗೆ ಹೂವಿಟ್ಟು ಬರುವಾಗ ದೇವರ ಪಾದ ಸೇರಿದರು:

ಯಕ್ಷಗಾನದ ಹಿಮ್ಮೇಳದ ದಿಗ್ಗಜ ಕಲಾವಿದರಲ್ಲಿ ಒಬ್ಬರಾಗಿದ್ದ ನೆಬ್ಬೂರು ನಾರಾಯಣ ಭಾಗವತರ ಇಹಲೋಕ ಯಾತ್ರೆ ಅಂತ್ಯಕ್ಕೆ ಹೃದಯಾಘಾತ ಕಾರಣವಾಯಿತು.

ಆಲಿಸಿ: ನೆಬ್ಬೂರು ನಾರಾಯಣ ಭಾಗವತರ ಕಂಠಸಿರಿ

ಹಣಗಾರ ಗ್ರಾಮದ ತಮ್ಮ ಮನೆಯಲ್ಲಿದ್ದ ನೆಬ್ಬೂರು ಭಾಗವತರು ಶನಿವಾರ ಬೆಳಗ್ಗೆ ಎಂದಿನಂತೆಯೇ ಮುಂಜಾನೆ ಎದ್ದು ದೇವರ ಅಲಂಕಾರಕ್ಕೆ ಹೂವು ಕೊಯ್ಯಲು ತೆರಳಿದ್ದರು. ಕೊಯ್ದ ಹೂವುಗಳನ್ನು ದೇವರ ಕೋಣೆಗೆ ತಂದಿಟ್ಟು ಮರಳುವಾಗ ಅವರು ಅಲ್ಲಿಯೇ ಕುಸಿದುಬಿದ್ದರು. ಇದನ್ನು ಗಮನಿಸಿದ ಅವರ ಪತ್ನಿ ಗಾಬರಿಗೊಂಡು ಅವರನ್ನು ಮೇಲೆತ್ತುವ ಪ್ರಯತ್ನ ಮಾಡಿದರು.

ಬದುಕಿನ ಭಾಗವತಿಕೆ ಮುಗಿಸಿದ ನೆಬ್ಬೂರು

ನಂತರ ಪಕ್ಕದ ಮನೆಯವರನ್ನು ಸಹಾಯಕ್ಕೆ ಕೂಗಿ ಕರೆದರು. ನಂತರ ವೈದ್ಯರನ್ನು ಮನೆಗೆ ಕರೆಸಲಾಯಿತು. ಆದರೆ ಅದಾಗಲೇ ನಾರಾಯಣ ಭಾಗವತರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಪ್ರಕಟಿಸಿದರು.

ಯಕ್ಷಕೋಗಿಲೆಯಾಗಿ ಯಕ್ಷಗಾನ ಆರಾಧಕರ ಹೃದಯಾಳದಲ್ಲಿ ನೆಲೆಸಿದ್ದ ಭಾಗವತರ ನಿಧನ ಯಕ್ಷ ಲೋಕಕ್ಕೆ ಅಪಾರ ನಷ್ಟವಾಗಿದೆ. ಎಂದು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ