ಆ್ಯಪ್ನಗರ

ಜನತಾಕಾಲೋನಿಗೆ ತಹಸೀಲ್ದಾರ್‌ ಭೇಟಿ

ಸಿದ್ದಾಪುರ : ಪಟ್ಟಣದ ವಾರ್ಡ್‌ನಂ 12 ರ ಜನತಾಕಾಲೋನಿ ಭಾಗದ ಸುಮಾರು 59 ಮನೆಯ 229 ಮತದಾರರು ತಮ್ಮ ಭಾಗದ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಮನವಿಯನ್ನು ತಹಸೀಲ್ದಾರರಿಗೆ ನೀಡಿದ್ದರು.

Vijaya Karnataka 16 May 2019, 5:00 am
ಸಿದ್ದಾಪುರ : ಪಟ್ಟಣದ ವಾರ್ಡ್‌ನಂ 12 ರ ಜನತಾಕಾಲೋನಿ ಭಾಗದ ಸುಮಾರು 59 ಮನೆಯ 229 ಮತದಾರರು ತಮ್ಮ ಭಾಗದ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಮನವಿಯನ್ನು ತಹಸೀಲ್ದಾರರಿಗೆ ನೀಡಿದ್ದರು.
Vijaya Karnataka Web visit tahsildar to janakaloka
ಜನತಾಕಾಲೋನಿಗೆ ತಹಸೀಲ್ದಾರ್‌ ಭೇಟಿ


ತಹಸೀಲ್ದಾರ್‌ ಗೀತಾ ಸಿ.ಜಿ. ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಕ್ಷ ಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಗಿ ಹೇಳಿದರಲ್ಲದೆ ಪಪಂ ಮುಖ್ಯಾಧಿಕಾರಿ ಸತೀಶ ಗುಡ್ಡೆಯವರನ್ನು ಸ್ಥಳಕ್ಕೆ ಕರೆಸಿ ಪರ್ಯಾಯ ನೀರಿನ ವ್ಯವಸ್ಥೆ ಮಾಡುವುದರ ಜತೆಗೆ ರಸ್ತೆ, ಗಟಾರದ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.

ಇದರಿಂದ ಸಮಾಧಾನಗೊಂಡ ಸಾರ್ವಜನಿಕರು ಮತದಾನ ಮಾಡುವುದಾಗಿ ತಿಳಿಸಿದರು. ನಮ್ಮ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಭಂಡಾರಿ,ಗಣಪತಿ ಮಡಿವಾಳ,ಶನೇಶ್ವರ ಮಡಿವಾಳ,ಬಾಬು,ನಾಗರಾಜ,ಜಟ್ಟಪ್ಪ ಮೊಗೇರ,ಆನಂದ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ