ಆ್ಯಪ್ನಗರ

ಮೀನುಗಾರನ ಮನೆಗೆ ಸಚಿವ ಭೇಟಿ

ಗೋಕರ್ಣ: ತ್ರಿಭುಜ ಬೋಟ್‌ನಲ್ಲಿದ್ದ ಕುಮಟಾ ತಾಲೂಕು ಮಾದನಗೇರಿಯ ಸತೀಶ್‌ ಈಶ್ವರ ಹರಿಕಂತ್ರ ಮನೆಗೆ ಸಚಿವ ಅನಂತ್‌ ಕುಮಾರ್‌ ಹೆಗಡೆ ಇವರು ಭೇಟಿ ನೀಡಿ ಧರ್ಯ ತುಂಬಿದರು. ನಂತರ ಮನೆಯವರೊಂದಿಗೆ ಮಾತನಾಡಿದ ಸಚಿವರು ಸರಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳು ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ.

Vijaya Karnataka 22 Jan 2019, 5:00 am
ಗೋಕರ್ಣ: ತ್ರಿಭುಜ ಬೋಟ್‌ನಲ್ಲಿದ್ದ ಕುಮಟಾ ತಾಲೂಕು ಮಾದನಗೇರಿಯ ಸತೀಶ್‌ ಈಶ್ವರ ಹರಿಕಂತ್ರ ಮನೆಗೆ ಸಚಿವ ಅನಂತ್‌ ಕುಮಾರ್‌ ಹೆಗಡೆ ಇವರು ಭೇಟಿ ನೀಡಿ ಧರ್ಯ ತುಂಬಿದರು. ನಂತರ ಮನೆಯವರೊಂದಿಗೆ ಮಾತನಾಡಿದ ಸಚಿವರು ಸರಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳು ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ.
Vijaya Karnataka Web visit the fishermans home minister
ಮೀನುಗಾರನ ಮನೆಗೆ ಸಚಿವ ಭೇಟಿ


ಸಮುದ್ರದಲ್ಲೂ ಹೆಲಿಕಾಪ್ಟರ್‌ ಮತ್ತು ತಟ ರಕ್ಷ ಣಾ ಪಡೆಗಳ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಮೀನುಗಾರರು ಜೀವಂತ ಇದ್ದಾರೆ ಎಂಬ ಅಚಲ ವಿಶ್ವಾಸ ನಮ್ಮ ಸರಕಾರಕ್ಕಿದೆ. ಅವರ ಪತ್ತೆಗೆ ಅವಿರತ ಪ್ರಯತ್ನ ನಡೆದಿದ್ದು ಶೀಘ್ರವೇ ನಿರೀಕ್ಷಿತ ಫಲ ಎದರುನೋಡುತ್ತಿದ್ದೇವೆ ಎಂದರು. ನಂತರ ಸಚಿವರಿಗೆ ತದಡಿ ಮೀನುಗಾರರ ಪರವಾಗಿ ಗೋಪಾಲ ಹೊಸ್ಕಟ್ಟಾ ಹಾಗೂ ಉಮಾಕಾಂತ ಹೊಸ್ಕಟ್ಟಾ ಮನವಿ ನೀಡಿದರು. ಆನಂದು ಕವರಿ, ಮಂಜುನಾಥ ಜನ್ನು, ಗೋಕರ್ಣ ಗ್ರಾ.ಪಂ ಉಪಾಧ್ಯಕ್ಷ ಶೇಖರ ನಾಯ್ಕ ಪ್ರಮುಖರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ