ಆ್ಯಪ್ನಗರ

ವಿವೇಕಾನಂದ ಸೇವಾ ಕೇಂದ್ರದ ಉದ್ಘಾಟನೆ ಇಂದು

ಹೊನ್ನಾವರ : ಪಟ್ಟಣದ ಲಕ್ಷ್ಮೀನಾರಾಯಣ ನಗರದ ಕೃಷ್ಣಕಲ್ಪದಲ್ಲಿ ಕೃಷ್ಣಾನಂದ ಕಾಮತರ ಸ್ಮರಣಾರ್ಥ ನಿರ್ಮಿಸಿದ ವಿವೇಕಾನಂದ ಸೇವಾ ಕೇಂದ್ರದ ಉದ್ಘಾಟನೆ ಜೂ.2 ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಇಲ್ಲಿಯ ಯುವಬ್ರಿಗೇಡ್‌ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

Vijaya Karnataka 2 Jun 2019, 5:00 am
ಹೊನ್ನಾವರ : ಪಟ್ಟಣದ ಲಕ್ಷ್ಮೀನಾರಾಯಣ ನಗರದ ಕೃಷ್ಣಕಲ್ಪದಲ್ಲಿ ಕೃಷ್ಣಾನಂದ ಕಾಮತರ ಸ್ಮರಣಾರ್ಥ ನಿರ್ಮಿಸಿದ ವಿವೇಕಾನಂದ ಸೇವಾ ಕೇಂದ್ರದ ಉದ್ಘಾಟನೆ ಜೂ.2 ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಇಲ್ಲಿಯ ಯುವಬ್ರಿಗೇಡ್‌ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web vivekananda seva center inaugurated today
ವಿವೇಕಾನಂದ ಸೇವಾ ಕೇಂದ್ರದ ಉದ್ಘಾಟನೆ ಇಂದು


ಉದ್ಘಾಟನಾ ಸಮಾರಂಭದಲ್ಲಿ ಕಾರವಾರ ರಾಮಕೃಷ್ಣಾಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿ, ತುಳಸಿದಾಸ ಕಾಮತ ಹಾಗೂ ಯುವಾಬ್ರಿಗೇಡ್‌ನ ರಾಜ್ಯ ಸಂಚಾಲಕ ಚಂದ್ರಶೇಖರ ಕೆ.ಎಸ್‌. ಪಾಲ್ಗೊಳ್ಳುವರು. ವಿವೇಕಾನಂದ ಸೇವಾಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ ಯೋಗ ಶಿಬಿರ ಹಾಗೂ ಸಂಜೆ ಭಗವದ್ಗೀತೆ ಶಿಕ್ಷ ಣ ನಡೆಯುತ್ತದೆ. ಇದರ ಜೊತೆ ಮಹಿಳೆಯರಿಗೆ ಉಚಿತ ತರಬೇತಿ ಹಾಗೂ ಪ್ರತೀ ತಿಂಗಳ ಕೊನೆಯ ಭಾನುವಾರದಂದು ವ್ಯಕ್ತಿತ್ವ ವಿಕಸನದ ಕುರಿತು ಮಾರ್ಗದರ್ಶನ ಹಾಗೂ ಇನ್ನೂ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಸೇವೆಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದೆ.

ಯುವಾ ಬ್ರಿಗೇಡ್‌ ಸಮಾಜಮುಖಿ ಕಾರ್ಯಗಳನ್ನು ಪ್ರಾರಂಭದಿಂದಲೂ ಮಾಡಿಕೊಂಡು ಬರುತ್ತಿದ್ದು, ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಕಾರವಾರ ರಾಮಕೃಷ್ಣಾಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿಯವರ ಮಾರ್ಗದರ್ಶನದಂತೆ ಯುವಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರ ಸಹಯೋಗದಲ್ಲಿ, ಜೋತ್ಸ್ನಾ ಕಾಮತರ ಆಶಯದಂತೆ ಅವರ ಪತಿ ಕೃಷ್ಣಾನಂದ ಕಾಮತರ ಸ್ಮರಣಾರ್ಥ ನಿರ್ಮಿಸಿದ ಕೃಷ್ಣಕಲ್ಪದಲ್ಲಿ ವಿವೇಕಾನಂದ ಸೇವಾಕೇಂದ್ರದ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ