ಆ್ಯಪ್ನಗರ

ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ: ಕೋಟಾ ಶ್ರೀನಿವಾಸ

ಯಲ್ಲಾಪುರ: ತಾಲೂಕಿನಲ್ಲಿಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಶಿವರಾಮ ಹೆಬ್ಬಾರ ಪರ ಬುಧವಾರ ವಿವಿಧೆಡೆ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.

Vijaya Karnataka 29 Nov 2019, 5:00 am
ಯಲ್ಲಾಪುರ: ತಾಲೂಕಿನಲ್ಲಿಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಶಿವರಾಮ ಹೆಬ್ಬಾರ ಪರ ಬುಧವಾರ ವಿವಿಧೆಡೆ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.
Vijaya Karnataka Web vote bjp for development kota srinivasa
ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ: ಕೋಟಾ ಶ್ರೀನಿವಾಸ


ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್‌. ಪಾಟೀಲ ನಂದೊಳ್ಳಿ, ಮಲವಳ್ಳಿ, ಬಾರೆ, ಕಿರವತ್ತಿ ಭಾಗದಲ್ಲಿಮತ ಯಾಚಿಸಿದರು. ನಂದೊಳ್ಳಿಯಲ್ಲಿನಡೆದ ಪ್ರಚಾರ ಸಭೆಯಲ್ಲಿಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಹಾಗೂ ಕೇಂದ್ರದಲ್ಲಿಬಿಜೆಪಿ ಸರಕಾರ ಇದ್ದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಸರಕಾರ ಉಳಿಯುವ ಅಗತ್ಯವಿದ್ದು, ಉಪಚುನಾವಣೆಯಲ್ಲಿಬಿಜೆಪಿ ಗೆಲುವು ಅವಶ್ಯವಾಗಿದೆ ಎಂದರು.

ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ನೇತೃತ್ವದ ತಂಡ ಶಾರದಾಗಲ್ಲಿಭಾಗದಲ್ಲಿಪ್ರಚಾರ ನಡೆಸಿದರು. ಹಲವು ಮುಖಂಡರು ಮಂಚಿಕೇರಿ, ಹಾಸಣಗಿ ಭಾಗದಲ್ಲಿಮತ ಯಾಚಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಸಿದ್ದಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿಪರಶುರಾಮ ಸಿದ್ದಿ ಅವರನ್ನು ವಿಕ್ರಮಾರ್ಜುನ ಹೆಗ್ಡೆ ಗೌರವಿಸಿದರು. ಕಾರ್ಕಳ ಶಾಸಕ ಸುನೀಲಕುಮಾರ ನೇತೃತ್ವದ ತಂಡ ಕಂಚಿಕೊಪ್ಪ, ಶಾನವಳ್ಳಿ, ಬೆಡಸಗಾಂವ ಭಾಗದಲ್ಲಿಪ್ರಚಾರ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ