ದಾಂಡೇಲಿ : ನಗರದ ವಿವಿಧೆಡೆ ಮತದಾನ ಜಾಗೃತಿ ಹಾಗೂ ಮತಯಂತ್ರ ಜಾಗೃತಿ ಕಾರ್ಯಕ್ರಮಗಳು ನಡೆದವು. ನಗರದ ತಹಸೀಲ್ದಾರ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ಡಾ.ಜಾಹೇದ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಬ್ಬಂದಿ ಭಾಗವಹಿಸಿದ್ದರು.
ನಗರದ ಸೆಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡಿತು. ನಂತರ ತಹಶೀಲ್ದಾರ ಕಾರ್ಯಾಲಯ, ನಗರಸಭೆ ಕಾರ್ಯಲಯ, ಪದವಿ ಕಾಲೇಜು, ಐ.ಟ.ಐ. ಕಾಲೇಜು, ಹೆಸ್ಕಾಂ ಕಚೇರಿ, ಬಸ್ ನಿಲ್ದಾಣದ ಬಳಿ ಸೇರಿದಂತೆ ವಿವಿಧೆಡೆ ಈ ಜಾಗೃತಿ ಕಾರ್ಯಕ್ರಮ ನಡೆಯಿತು.
ನಗರದ ಸೆಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡಿತು. ನಂತರ ತಹಶೀಲ್ದಾರ ಕಾರ್ಯಾಲಯ, ನಗರಸಭೆ ಕಾರ್ಯಲಯ, ಪದವಿ ಕಾಲೇಜು, ಐ.ಟ.ಐ. ಕಾಲೇಜು, ಹೆಸ್ಕಾಂ ಕಚೇರಿ, ಬಸ್ ನಿಲ್ದಾಣದ ಬಳಿ ಸೇರಿದಂತೆ ವಿವಿಧೆಡೆ ಈ ಜಾಗೃತಿ ಕಾರ್ಯಕ್ರಮ ನಡೆಯಿತು.