ಆ್ಯಪ್ನಗರ

ಮತದಾನ ಜಾಗೃತಿ ಜಾಥಾ

ಯಲ್ಲಾಪುರ : ತಾಲೂಕಿನ ಕೋಟೆಮನೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.

Vijaya Karnataka 11 Apr 2019, 5:00 am
ಯಲ್ಲಾಪುರ : ತಾಲೂಕಿನ ಕೋಟೆಮನೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.
Vijaya Karnataka Web voting awareness jatha
ಮತದಾನ ಜಾಗೃತಿ ಜಾಥಾ


ಕೋಟೆಮನೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿದ ಈ ಜಾಥಾದಲ್ಲಿ ಚುನಾವಣಾ ಅಧಿಕಾರಿಗಳು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಶಿಕ್ಷ ಕರು, ಊರ ನಾಗರಿಕರು, ಬುಡಕಟ್ಟು ಸಿದ್ದಿ ಸಮುದಾಯದ ಮಹಿಳೆಯರು, ಪುರುಷರು ಪಾಲ್ಗೊಂಡಿದ್ದರು. ವಿವಿಧ ವೇಷ ಭೂಷಣಗಳನ್ನು ತೊಟ್ಟ ಪಾತ್ರಧಾರಿಗಳು, ಬಣ್ಣದ ಧಿರಿಸು ತೊಟ್ಟ ಚಿಣ್ಣರು ಜಾಥಾದಲ್ಲಿ ಭಾಗಿಯಾದರು. ಅಮೂಲ್ಯವಾದ ಮತವನ್ನು ತಪ್ಪದೇ ಚಲಾಯಿಸಬೇಕು ಎಂಬ ಮುಂತಾದ ಘೋಷಣೆಗಳನ್ನು ಕೂಗಲಾಯಿತು.

ಜಾಥಾದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ರುದ್ರೇಶ್‌, ತಹಸೀಲ್ದಾರ ಶಂಕರ ಜಿ.ಎಸ್‌, ತಾ.ಪಂ.ಇ.ಓ. ಪದ್ಮಜಾ ಪಾಟೀಲ್‌, ಸೆಕ್ಟರ್‌ ಅಧಿಕಾರಿಗಳಾದ ಕೃಷ್ಣಕಾಂತ ನಾಯಕ, ಶಂಕರಪ್ಪಾ ಅರಿಕಟ್ಟಿ, ಪ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿ ಬಾಲಸುಬ್ರಹ್ಮಣ್ಯ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ