ಆ್ಯಪ್ನಗರ

ಮತದಾನ ಬಹಿಷ್ಕಾರ: ಅಧಿಕಾರಿಗಳಿಂದ ಮನವೊಲಿಕೆ

ಕಾರವಾರ : ಜಿಲ್ಲೆಯ ಕೆಲವೆಡೆ ಮೂಲ ಸೌಕರ್ಯಗಳನ್ನು ಈಡೇರಿಸದ ಕಾರಣ ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದವರನ್ನು ಅಧಿಕಾರಿಗಳು ಮನವೊಲಿಸಿ ಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 24 Apr 2019, 5:00 am
ಕಾರವಾರ : ಜಿಲ್ಲೆಯ ಕೆಲವೆಡೆ ಮೂಲ ಸೌಕರ್ಯಗಳನ್ನು ಈಡೇರಿಸದ ಕಾರಣ ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದವರನ್ನು ಅಧಿಕಾರಿಗಳು ಮನವೊಲಿಸಿ ಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web voting ban conviction by officials
ಮತದಾನ ಬಹಿಷ್ಕಾರ: ಅಧಿಕಾರಿಗಳಿಂದ ಮನವೊಲಿಕೆ


ಕಾರವಾರದ ಸದಾಶಿವಗಡದ ನಾಕುದಾಮೊಹಲ್ಲಾದ ಮತದಾರರು ಕೆಲ ದಿನಗಳ ಹಿಂದೆ ನೀರಿನ ಸಮಸ್ಯೆ ಪರಿಹಾರವಾಗದ್ದಕ್ಕೆ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಅಲ್ಲದೇ ಕೈಗಾ ಅಣುಸ್ಥಾವರ ಬಳಿಯ ಕುಚೇಗಾರ್‌ ಗ್ರಾಮದ ಮತದಾರರೂ ಸಹ ರಸ್ತೆ, ನೀರು ಮತ್ತಿತರ ಮೂಲ ಸೌಕರ್ಯಗಳು ಇಲ್ಲದ್ದಕ್ಕೆ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಈ ಎರಡೂ ಗ್ರಾಮಗಳಿಗೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಿದ್ದು ಮತದಾನ ಸುಸೂತ್ರವಾಗಿ ನಡೆಯಿತು.

ಯಲ್ಲಾಪುರ ತಾಲೂಕಿನ ಬೊಮ್ಮಡಿಕೊಪ್ಪ ಹಾಗೂ ಮುಂಡಗೋಡ ತಾಲೂಕಿನ ಅಟಬೈಲ್‌ ಕಂಚಿಕೊಪ್ಪ ಗ್ರಾಮಗಳಲ್ಲಿ ಸಹ ಮಂಗಳವಾರ ಬೆಳಗ್ಗೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದವರನ್ನು ಮನವೊಲಿಸಿದ ಅಧಿಕಾರಿಗಳು ಸುಸೂತ್ರವಾಗಿ ಮತದಾನ ನಡೆಯುವಲ್ಲಿ ಕ್ರಮ ಕೈಗೊಂಡಿದ್ದಾರೆ.

ದೂರಿಗೆ ಸ್ಪಂದನೆ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಕಂಟ್ರೋಲ್‌ ರೂಮ್‌ನ ದೂ.ಸಂ. 1950ಕ್ಕೆ ಮಂಗಳವಾರ ಸಂಜೆಯವರೆಗೂ ದೂರುಗಳು ಬರುತ್ತಿದ್ದವು. ಒಟ್ಟು 494 ದೂರುಗಳು ಬಂದಿದ್ದು, ಈ ಪೈಕಿ ಮಂಗಳವಾರ ಒಂದೇ ದಿನ 69 ದೂರುಗಳು ಬಂದಿದ್ದವು.

ಸಿ ವಿಜಿಲ್‌ನಲ್ಲಿ 203 ದೂರುಗಳು ಬಂದು ಅದರಲ್ಲಿ 83 ನೈಜ ದೂರುಗಳಾಗಿದ್ದು, 100 ನಿಮಿಷದಲ್ಲಿ ಅಟೆಂಡ್‌ ಮಾಡಲಾಗಿದೆ. 1077 ದೂರು ಕೋಶಕ್ಕೆ ಹಣ ಮತ್ತು ಮದ್ಯ ಸಾಗಣೆ ಬಗ್ಗೆ ದೂರು ದಾಖಲಾಗಿದೆ.

ಇಂದು ವಾಟ್ಸ ಆ್ಯಪ್‌ ದೂರುಗಳು 21 ಬಂದಿದ್ದವು. ಅಲ್ಲದೇ ಮತದಾನ ಬಹಿಷ್ಕಾರ, ನಿಧಾನ ಗತಿಯಲ್ಲಿ ಮತದಾನ, ಮುಂದೆ ಸಾಗದ ಸರದಿ ಮತ್ತು ಮತದಾರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಸುಮಾರು 100ಕ್ಕೂ ಹೆಚ್ಚು ದೂರುಗಳು ಬಂದಿದ್ದೂ ಅಲ್ಲದೇ ಮತದಾನ ಬಹಿಷ್ಕಾರ ಸಂಬಂಧ ಒಟ್ಟು 18 ಪ್ರಕರಣಗಳನ್ನು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ