ಆ್ಯಪ್ನಗರ

ರಾತ್ರಿ ಪೂರ್ತಿ ಕಚೇರಿಯಲ್ಲೇ ಕಾದರು!

ಕುಮಟಾ : ಆಧಾರ್‌ ಕಾರ್ಡ್‌ನ ಟೋಕನ್‌ ಪಡೆಯಲೆಂದು ಅಂಚೆ ಪ್ರಧಾನ ಕಚೇರಿಗೆ ಬಂದ ದೂರದ ಹಳ್ಳಿಯವರು ಅಲ್ಲಿಯೇ ಸೋಮವಾರ ಒಂದು ರಾತ್ರಿ ಪೂರ್ತಿ ಕಳೆಯುವಂತಾಯಿತು.

Vijaya Karnataka 26 Jun 2019, 5:00 am
Vijaya Karnataka Web waiting in the office all night
ರಾತ್ರಿ ಪೂರ್ತಿ ಕಚೇರಿಯಲ್ಲೇ ಕಾದರು!
ಕುಮಟಾ : ಆಧಾರ್‌ ಕಾರ್ಡ್‌ನ ಟೋಕನ್‌ ಪಡೆಯಲೆಂದು ಅಂಚೆ ಪ್ರಧಾನ ಕಚೇರಿಗೆ ಬಂದ ದೂರದ ಹಳ್ಳಿಯವರು ಅಲ್ಲಿಯೇ ಸೋಮವಾರ ಒಂದು ರಾತ್ರಿ ಪೂರ್ತಿ ಕಳೆಯುವಂತಾಯಿತು.

ಸೋಮವಾರ ಟೋಕನ್‌ ಪಡೆಯಲು ತಾಲೂಕಿನ ದೂರದ ಹಳ್ಳಿಗಳಿಂದ ಪ್ರಧಾನ ಅಂಚೆ ಕಚೇರಿಗೆ ಜನರು ಆಗಮಿಸಿದ್ದರು. ಅಂಚೆ ಅಧಿಕಾರಿಗಳು ಮಧ್ಯಾಹ್ನದ ನಂತರ ಟೋಕನ್‌ ನೀಡುವುದನ್ನು ನಿರಾಕರಿಸಿದರು. ಟೋಕನ್‌ ಪಡೆಯಲು ಮುಂಜಾನೆ ಮಾತ್ರ ಸಮಯ ನಿಗದಿ ಪಡಿಸಿರುವುದು ಮುಗ್ಧ ಹಳ್ಳಿಯ ಜನರಿಗೆ ತಿಳಿಯದು. ಅಲ್ಲದೇ ಸಂಜೆಯಾಗಿದ್ದರಿಂದ ಊರುಗಳಿಗೆ ತೆರಳಿ ಮುಂಜಾನೆ ಬರಲು ಬಸ್‌ ವ್ಯವಸ್ಥೆ ಇಲ್ಲ. ಹೀಗಾಗಿ ವಿಧಿ ಇಲ್ಲದೇ ಜನರು ಅಂಚೆ ಕಚೇರಿ ಪ್ರವೇಶ ಬಾಗಿಲಿನ ರಾರ‍ಯಂಪ್‌ನಲ್ಲೇ ರಾತ್ರಿ ಇಡೀ ಕುಳಿತು ಬೆಳಗು ಮಾಡಿದರು. ಅಂತೂ ಮಂಗಳವಾರ ಜನರಿಗೆ ಟೋಕನ್‌ ಭಾಗ್ಯ ಲಭಿಸಿತು.

ಸದ್ಯ ಕುಮಟಾದಲ್ಲಿ ಅಂಚೆ ಪ್ರಧಾನ ಕಚೇರಿಯಲ್ಲಿ ಮಾತ್ರ ಆಧಾರ್‌ ಕಾರ್ಡ್‌ ಮಾಡಲಾಗುತ್ತಿದೆ. ಆದರೆ ಅಂಚೆ ಅಧಿಕಾರಿಗಳ ಬಿಗಿ ಧೋರಣೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕು ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ನೀಡುವ ಪ್ರಕ್ರಿಯೆ ಸ್ಥಗಿತಗೊಂಡು ವರ್ಷಗಳೇ ಕಳೆದವು. ಹತ್ತಿರದ ಕೂಜಳ್ಳಿಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಕಾರ್ಡ್‌ ಮಾಡುತ್ತಿದ್ದರೂ ಟೋಕನ್‌ ಕೊಡುವುದಿಲ್ಲವೆಂದು ಜನರು ದೂರಿದ್ದಾರೆ.

ಅಂಚೆ ಕಚೇರಿಯಲ್ಲಿ 15 ಜನರಿಗೆ ಮಾತ್ರ ದಿವಸದ ಆಧಾರ್‌ ಟೋಕನ್‌ ನೀಡಲಾಗುತ್ತದೆ. ಇನ್ನೂ ಬಹಳಷ್ಟು ಆಧಾರ್‌ ಮಾಡಿಸುವ ಜನರಿರುವುದರಿಂದ ಸಮಸ್ಯೆ ಬಗೆ ಹರಿಯುವ ಲಕ್ಷ ಣಗಳಿಲ್ಲ. ಅಧಿಕಾರಿಗಳು ತುರ್ತು ಪರಾರ‍ಯಯ ವ್ಯವಸ್ಥೆ ಹಾಗೂ ಸುಲಭವಾಗಿ ಕಾರ್ಡ್‌ ಕೊಡುವ ವ್ಯವಸ್ಥೆ ಮಾಡಬೇಕಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ