ಆ್ಯಪ್ನಗರ

ಟಿಕೆಟ್‌ ಆಕಾಂಕ್ಷಿಗಳ ರಾಜಧಾನಿ ಸುತ್ತಾಟ

ಶಿರಸಿ : ಸಾರ್ವತ್ರಿಕ ಚುನಾವಣೆಯ ಟಿಕೆಟ್‌ ಆಕಾಂಕ್ಷೆಗಳು ಕ್ಷೇತ್ರದಲ್ಲಿ ಸುತ್ತಾಡಿಕೊಂಡು ಇರುವ ಕಾಲ ಇದಲ್ಲ. ಅಂತೆಯೇ ಅನೇಕ ಆಕಾಂಕ್ಷಿಗಳು ರಾಜಧಾನಿಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.

Vijaya Karnataka 23 Mar 2018, 5:00 am
ಶಿರಸಿ : ಸಾರ್ವತ್ರಿಕ ಚುನಾವಣೆಯ ಟಿಕೆಟ್‌ ಆಕಾಂಕ್ಷೆಗಳು ಕ್ಷೇತ್ರದಲ್ಲಿ ಸುತ್ತಾಡಿಕೊಂಡು ಇರುವ ಕಾಲ ಇದಲ್ಲ. ಅಂತೆಯೇ ಅನೇಕ ಆಕಾಂಕ್ಷಿಗಳು ರಾಜಧಾನಿಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
Vijaya Karnataka Web wander the capital of the ticket aspirants
ಟಿಕೆಟ್‌ ಆಕಾಂಕ್ಷಿಗಳ ರಾಜಧಾನಿ ಸುತ್ತಾಟ


ರಾಜ್ಯದ ರಾಜಧಾನಿ ಮಾತ್ರವಲ್ಲ. ಕೆಲವು ಆಕಾಂಕ್ಷಿಗಳು ರಾಷ್ಟ್ರದ ರಾಜಧಾನಿಗೂ ಮಹದಾಸೆಯಿಂದ ಹೋಗಿಬರುತ್ತಿದ್ದಾರೆ.

ರಾಷ್ಟ್ರಮಟ್ಟದ ಹೈಕಮಾಂಡ್‌ ಹಿಡಿತ ಹೆಚ್ಚಾಗಿರುವ ಕಾಂಗ್ರೆಸ್‌ ಪಕ್ಷ ದಲ್ಲಿ ಹೀಗೆ ದೆಹಲಿಯ ಕದ ತಟ್ಟಿದವರಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಶಿರಸಿ ಸಿದ್ದಾಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿ ಮೊನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿದ್ದಾರೆ.

ಇದೇ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ನಿವೇದಿತ್‌ ಅಳ್ವಾ ಮತ್ತು ಕುಮಟಾ ಕ್ಷೇತ್ರದ ಆಕಾಂಕ್ಷಿ ಆರ್‌.ಎಚ್‌ . ನಾಯ್ಕ ಅವರೂ ಸಹ ದೆಹಲಿಯಲ್ಲಿ ಹೈಕಮಾಂಡ್‌ ಭೇಟಿಯಾಗಿರುವ ಬಗ್ಗೆ ಪಕ್ಷ ದ ಮೂಲ ತಿಳಿಸುತ್ತದೆ.

ಇನ್ನೊಂದೆಡೆ, ರಾಜಧಾನಿ ಬೆಂಗಳೂರನ್ನು ಸಂಪರ್ಕ ಮಾಡುತ್ತಿರುವ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಇನ್ನೂ ಉದ್ದವಿದೆ.

ಪಕ್ಷ ದ ನಿಯಮಾವಳಿಯಂತೆ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿಯೇ ಟಿಕೆಟಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಅಂತೆಯೇ, ಈಗಾಗಲೇ ,20 ರಷ್ಟು ಆಕಾಂಕ್ಷಿಗಳು ರಾಜಧಾನಿಗೆ ತೆರಳಿ ಅರ್ಜಿ ಕೊಟ್ಟು ಬಂದಿದ್ದಾರೆ.

ಇವರಲ್ಲಿ ಆರು ಕ್ಷೇತ್ರಗಳ ಪೈಕಿ ಮೂರ್ನಾಲ್ಕು ಕ್ಷೇತ್ರಕ್ಕೆ ಮಾತ್ರ ಕೆಲವರಷ್ಟೇ ತೀವ್ರ ಪ್ರಯತ್ನ ನಡೆಸುವವರಿದ್ದು ಮತ್ತೆ ಮತ್ತೆ ಬೆಂಗಳೂರು ಸುತ್ತಾಟ ಮಾಡಬೇಕಾಗಿದೆ.

ಬಿಜೆಪಿಯಲ್ಲೂ ಸುತ್ತಾಟ : ಕಾಂಗ್ರೆಸ್‌ ಪಕ್ಷ ಕ್ಕೆ ಹೋಲಿಸಿದ ಬಿಜೆಪಿಯಲ್ಲಿ ಹೀಗೆ ರಾಜಧಾನಿ ಗೆ ಎಡತಾಕುವವರ ಸಂಖ್ಯೆ ಕಡಿಮೆ ಎನ್ನಬಹುದು. ಅದಕ್ಕೆ ಬಿಜೆಪಿ ವರಿಷ್ಟರು ಹೆಚ್ಚು ಬೆಲೆ ಕೊಡುವುದಿಲ್ಲ ಎನ್ನುವದೂ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ ರಾಜಧಾನಿಗೆ ಹೋಗಿ ಅರ್ಜಿ ಸಲ್ಲಿಸಬೇಕಾದ ನಿಯಮಾವಳಿಯೂ ಬಿಜೆಪಿ ಯಲ್ಲಿ ಇಲ್ಲವೆನ್ನುತ್ತಾರೆ ಪಕ್ಷದ ಮುಖಂಡರು. ಅದರೂ ಇತ್ತೀಚಿಗೆ ಪಕ್ಷ ಸೇರಿ ಆಕಾಂಕ್ಷಿಯಾದವರು ತಮ್ಮ ರೂಢಿಯಂತೆ ಬೆಂಗಳೂರು ಭೇಟಿ ಮಾಡುತ್ತಿದ್ದಾರೆಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ