ಆ್ಯಪ್ನಗರ

ಪ್ರಾಣ ಹೋದರೂ ನೀರು ಬಿಡೆವು

ಕುಮಟಾ : ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿಸಿ ''ಉತ್ತರ ಕನ್ನಡ ಉಳಿಸಿ'' ಹೊರಾಟ ಸಮಿತಿಯಿಂದ ಶುಕ್ರವಾರ ಇಲ್ಲಿಯ ಗಿಬ್‌ ವೃತ್ತದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ''ಪ್ರಾಣ ಹೋದರೂ ನೀರು ಬಿಡೆವು'' ಎಂಬ ಘೊಷಣೆಗಳು ಮೊಳಗಿದವು. ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಬಿಡಲು ಕೊಡುವುದಿಲ್ಲ ಎಂದು ಎಂದು ಪ್ರತಿಭಟನಾಕಾರರು ಪಣತೊಟ್ಟರು.

Vijaya Karnataka 27 Jul 2019, 5:00 am
ಕುಮಟಾ : ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿಸಿ ''ಉತ್ತರ ಕನ್ನಡ ಉಳಿಸಿ'' ಹೊರಾಟ ಸಮಿತಿಯಿಂದ ಶುಕ್ರವಾರ ಇಲ್ಲಿಯ ಗಿಬ್‌ ವೃತ್ತದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ''ಪ್ರಾಣ ಹೋದರೂ ನೀರು ಬಿಡೆವು'' ಎಂಬ ಘೊಷಣೆಗಳು ಮೊಳಗಿದವು. ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಬಿಡಲು ಕೊಡುವುದಿಲ್ಲ ಎಂದು ಎಂದು ಪ್ರತಿಭಟನಾಕಾರರು ಪಣತೊಟ್ಟರು.
Vijaya Karnataka Web KWR-PHT 26 KMT 1


ಗಿಬ್‌ ವೃತ್ತದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಸಮಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸುರಿಯುತ್ತಿರುವ ಭಾರಿ ಮಳೆಯಲ್ಲೂ ಜನರ ಆಕ್ರೋಶದ ಮುಗಿಲು ಮುಟ್ಟಿತ್ತು. ಈ ಬಾರಿಯ ನೀರಿನ ಬರಕ್ಕೆ ಕರಾವಳಿ ತತ್ತರಿಸಿತ್ತು. ಅಘನಾಶಿನಿ ಹಾಗೂ ಶರಾವತಿ ಕರಾವಳಿ ಭಾಗದ ಜನರ ಜೀವ ನದಿಗಳು. ರೈತರು, ಮೀನುಗಾರರು, ಕೃಷಿಕರು ಈ ನದಿಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಈ ನದಿಗಳಲ್ಲಿ ವಿಶಿಷ್ಟವಾದ ಮೀನಿನ ಸಂತತಿ ಕಾಣ ಬಹುದಾಗಿದೆ. ಈ ನದಿಗಳು ಇಲ್ಲಿಯ ಜೀವನಾಡಿ. ಇಂತಹ ವಿಶಿಷ್ಟ ಮತ್ತು ಅತ್ಯಂತ ಪುರಾತನ ಇತಿಹಾಸವುಳ್ಳ ನದಿಗಳ ನೀರನ್ನು ಬಿಡಲು ಸಾಧ್ಯವೇ ಇಲ್ಲ.

ಉತ್ತರ ಕನ್ನಡ ಜಿಲ್ಲೆ ಕೈಗಾ, ನೌಕಾನೆಲೆ, ಜಲವಿದ್ಯುತ್‌ ಮುಂತಾದ ಹಲವು ಯೋಜನೆಗಳಿಂದ ಹಾನಿ ಅನುಭವಿಸುತ್ತಿದೆ. ಇನ್ನು ಜೀವ ನದಿಗಳ ಒಡಲಿಗೆ ಕೈ ಹಾಕಿದರೇ ತಾಯಿಯ ಒಡಲು ಬಗೆದಂತೆ. ತಾಯಿಗೆ ಅನ್ಯಾಯವಾದಾಗ ಮಕ್ಕಳು ಸಿಡಿದೆದ್ದು ಜೀವದ ಹಂಗು ತೊರೆದು ಹೋರಾಟಕ್ಕೆ ಇಳಿಯುತ್ತಾರೆ. ಅಂತಿಮವಾಗಿ ರಕ್ತದ ಕೋಡಿಯನ್ನಾದರು ಹರಿಸಿ ತಾಯಿ ರಕ್ಷ ಣೆಗೆ ಮುಂದಾಗುತ್ತಾರೆ. ಹೀಗಾಗಿ ರಕ್ತವನ್ನಾದರು ಕೊಟ್ಟೆವು ಜಿಲ್ಲೆಯ ಹನಿ ನೀರನ್ನು ಯಾವ ಕಾರಣಕ್ಕೂ ಬಿಟ್ಟ ಕೊಡುವದಿಲ್ಲ ಎಂದು ಹೋರಾಟಗಾರರು ಶಪಥ ಮಾಡಿದರು.

ಗಿಬ್‌ ವೃತ್ತದ ಮೂಲಕ ಮೆರವಣೆಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಸುಭಾಷ ಮೈದಾನದಲ್ಲಿ ಸಭೆ ಸೇರಿ ನಂತರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಉಳಿಸಿ ಹೊರಾಟ ಸಮಿತಿಯ ಅಧ್ಯಕ್ಷ ಎಮ್‌.ಜಿ.ಭಟ್ಟ, ಕಾನೂನು ಸಲಹೆಗಾರ ಆರ್‌.ಜಿ. ನಾಯ್ಕ, ಜಿ ಪಂ. ಸದಸ್ಯ ಶಿವಾನಂದ ಹೆಗಡೆ ಕಡತೊಕಾ, ಡಾ. ಜಿ.ಜಿ.ಹೆಗಡೆ, ಸುರೇಶ ಭಟ್ಟ, ಜಿ.ಪಂ.ಸದಸ್ಯ ರತ್ನಾಕರ ನಾಯ್ಕ, ಭುವನ ಭಾಗವತ ಮಾತನಾಡಿ, 2012ರಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು, ಸಚಿವರು, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಈ ಯೋಜನೆ ಬಗ್ಗೆ ಇನ್ನು ಚಕಾರವೆತ್ತಿಲ್ಲ. ಜಿಲ್ಲೆಯಲ್ಲಿ ಮಾರಕ ಯೋಜನೆಗಳನ್ನು ಮುಗ್ಧ ಜನರ ಮೇಲೆ ಹೇರಲಾಗುತ್ತದೆ. ಹೀಗಾಗಿ ಇಂತಹ ಬಲವಂತದ ಯೋಜನೆಗಳು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆಯನ್ನು ಕೈ ಬಿಡಬೇಕೆಂದು ಬಲವಾಗಿ ಒತ್ತಾಯಿಸಿದರು.

ಡಿವೈಎಸ್‌ಪಿ ವೆಲಂಟೈನ ಡಿಸೊಜಾ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಇ.ಸಿ. ಸಂಪತ ಬಿಗಿ ಭದ್ರತೆ ಕೈಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ