ಆ್ಯಪ್ನಗರ

ನೀರು ಪೂರೈಕೆ ಸಿಬ್ಬಂದಿ ಪ್ರತಿಭಟನೆ ಮುಕ್ತಾಯ

ಜೋಯಿಡಾ : ತಾಲೂಕಿನ ರಾಮನಗರದಲ್ಲಿ ನೀರು ಪೂರೈಸುವ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರಂಭಿಸಿದ್ದ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ.

Vijaya Karnataka 25 Jan 2019, 5:00 am
ಜೋಯಿಡಾ : ತಾಲೂಕಿನ ರಾಮನಗರದಲ್ಲಿ ನೀರು ಪೂರೈಸುವ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರಂಭಿಸಿದ್ದ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ.
Vijaya Karnataka Web water supply staff protest expiration
ನೀರು ಪೂರೈಕೆ ಸಿಬ್ಬಂದಿ ಪ್ರತಿಭಟನೆ ಮುಕ್ತಾಯ


ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದ್ದಾರೆ. ಮೂಲಕ ಕೊನೆಗೊಂಡಿದೆ.

ಕಳೆದ ಒಂದು ವಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಬಿಡುವ ಸಿಬ್ಬಂದಿ ಸಮರ್ಪಕ ವೇತನ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ನೀರು ಪೂರೈಸದೇ ಪ್ರತಿಭಟಿಸುತ್ತಿದ್ದರು. ರಾಮನಗರ ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆ ನಡೆಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಭಟನಾ ನಿರತ ಸಿಬ್ಬಂದಿಗಳನ್ನು ಸಮಾಧಾನ ಪಡಿಸಿ ಅವರನ್ನು ಕಾಯಂ ಗೊಳಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ, ತಿಂಗಳಿಗೆ 6 ಸಾವಿರ ಹಾಗೂ ಬಾಕಿ ನೀಡಬೇಕಿರುವ ನಾಲ್ಕು ತಿಂಗಳ ಸಂಬಳವನ್ನು 5 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ ಮೇಲೆ ಸಿಬ್ಬಂದಿ ಪ್ರತಿಭಟನೆ ಕೈ ಬಿಟ್ಟರು.

ಜಿ.ಪಂ. ಸದಸ್ಯ ಸಂಜಯ ಹಣಬರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ತಾನಾಜಿ ವಾಡಿಕರ, ರಾಮನಗರ ಗ್ರಾ.ಪಂ. ಅಧ್ಯಕ್ಷ ವಿನೋದ ದೇಸಾಯಿ, ರಾಮನಗರ ತಾ.ಪಂ. ಸದಸ್ಯ ಶರತ್‌ಚಂದ್ರ ಗುರ್ಜರ, ಗ್ರಾ.ಪಂ. ಉಪಾಧ್ಯಕ್ಷೆ ರೇವತಿ ಬಾಮೈಕರ, ಗ್ರಾ.ಪಂ. ಸದಸ್ಯರಾದ ಶಿವಾಜಿ ಗೋಸಾವಿ, ರಾಜೇಶ ಕೊರಡಕರ, ಮಂಗಲಾ ದೇಸಾಯಿ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ