ಆ್ಯಪ್ನಗರ

ಹದ ಮಳೆ ಕೃಷಿಗೆ ಕಳೆ

ಯಲ್ಲಾಪುರ : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸ್ವಲ್ಪ ಇಳಿಮುಖವಾಗಿದ್ದ ಮಳೆ ಈಗ ಎರಡು ದಿನಗಳಿಂದ ಮತ್ತೆ ಜೋರಾಗಿದೆ. ಹದ ಮಳೆ ಸುರಿಯುತ್ತಿರುವುದರಿಂದ ಕೃಷಿಕರು ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

Vijaya Karnataka 5 Jul 2020, 5:00 am
ಯಲ್ಲಾಪುರ : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸ್ವಲ್ಪ ಇಳಿಮುಖವಾಗಿದ್ದ ಮಳೆ ಈಗ ಎರಡು ದಿನಗಳಿಂದ ಮತ್ತೆ ಜೋರಾಗಿದೆ. ಹದ ಮಳೆ ಸುರಿಯುತ್ತಿರುವುದರಿಂದ ಕೃಷಿಕರು ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
Vijaya Karnataka Web 01553 YLP 2_24
ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದ ಹೊಲವೊಂದರಲ್ಲಿಭತ್ತದ ಸಸಿ ನಾಟಿ ಕಾರ್ಯ ಭರದಿಂದ ನಡೆದಿರುವುದು.


ತಾಲೂಕಿನಲ್ಲಿಸುಮಾರು 4250 ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶವಿದ್ದು, ಈ ಬಾರಿಯ ಮುಂಗಾರು ಸರಿಯಾದ ಸಮಯಕ್ಕೆ ಶುರುವಾದ ಕಾರಣ ಬೀಜ ಬಿತ್ತನೆ ಕಾರ್ಯವು ಯಾವುದೇ ಅಡ್ಡಿ,ಆತಂಕ ಇಲ್ಲದೇ ನಡೆದ ಪರಿಣಾಮ ಪ್ರಸಕ್ತ ಭತ್ತದ ಸಸಿಗಳು ನಾಟಿ ಮಾಡುವ ಹಂತಕ್ಕೆ ಬಂದಿದ್ದು, ರೈತರು ನಾಟಿ ಕಾರ್ಯದ ಭರಾಟೆಯಲ್ಲಿದ್ದಾರೆ. ಈ ವರ್ಷ ಅಪರೂಪಕ್ಕೆ ಎಂಬಂತೆ ಪ್ರಾರಂಭದಿಂದಲೇ ಭತ್ತದ ಬೀಜ ಭಿತ್ತನೆ ಕಾರ್ಯಕ್ಕೆ ಹಾಗೂ ಸಸಿ ನಾಟಿ ಕಾರ್ಯಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ರೈತರ ಮೊಗದಲ್ಲಿಮಂದಹಾಸ ಮೂಡಿದೆ.

ಕಾರ್ಮಿಕರ ಕೊರತೆ : ಪ್ರಸಕ್ತ ಹಂಗಾಮಿನಲ್ಲಿಭತ್ತದ ನಾಟಿ ಕಾರ್ಯ ಜೋರಾಗಿ ನಡೆಯುತ್ತಿದ್ದರೂ,ಕೆಲವೆಡೆ ಈ ಕಾರ್ಯ ಸ್ವಲ್ಪ ವಿಳಂಬವಾಗುತ್ತಿದೆ. ಗ್ರಾಮೀಣ ಭಗದಲ್ಲಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿ ಕಂಡುಬಂದಿದ್ದು, ನಾಟಿ ಕಾರ್ಯಕ್ಕೆ ತುಸು ಅಡಚಣೆ ಉಂಟುಮಾಡಿದೆ. ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೆಲವೆಡೆ ಯಾಂತ್ರೀಕೃತ ನಾಟಿ ಕಾರ್ಯ ಕೈಗೊಂಡಿದ್ದು, ಇದು ಕೆಲ ಮಟ್ಟಿನಲ್ಲಿಉಪಯುಕ್ತವಾಗಿದೆ. ಯಾಂತ್ರೀಕೃತ ನಾಟಿಗೆ ಕೆಲವು ರೈತರು ಅನಾಸಕ್ತಿ ತೋರುತ್ತಿದ್ದು, ಸಾಂಪ್ರದಾಯಿಕ ನಾಟಿಯತ್ತಲೇ ಹೆಚ್ಚು ಒಲವು ತೋರುತ್ತಿರುವುದು ಕಂಡುಬರುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ