ಆ್ಯಪ್ನಗರ

ಯಾರು ಅನರ್ಹ ತೀರ್ಪು ಡಿ.9ಕ್ಕೆ

ಮುಂಡಗೋಡ : ನಾನು ಅನರ್ಹನೇ.. ರಮೇಶ ಕುಮಾರ ಅನರ್ಹರೇ.. ಎನ್ನುವುದು ಡಿಸೆಂಬರ್‌ 9ರಂದು ಜನತಾ ನ್ಯಾಯಾಲಯದಲ್ಲಿತೀರ್ಪು ಬರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರು ವಾಗ್ದಾಳಿ ನಡೆಸಿದರು.

Vijaya Karnataka 24 Nov 2019, 5:00 am
ಮುಂಡಗೋಡ : ನಾನು ಅನರ್ಹನೇ.. ರಮೇಶ ಕುಮಾರ ಅನರ್ಹರೇ.. ಎನ್ನುವುದು ಡಿಸೆಂಬರ್‌ 9ರಂದು ಜನತಾ ನ್ಯಾಯಾಲಯದಲ್ಲಿತೀರ್ಪು ಬರುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರು ವಾಗ್ದಾಳಿ ನಡೆಸಿದರು.
Vijaya Karnataka Web who is ineligible for judgment 9
ಯಾರು ಅನರ್ಹ ತೀರ್ಪು ಡಿ.9ಕ್ಕೆ


ಅವರು ಶನಿವಾರ ಇಂದೂರ ಜಿ.ಪಂ. ಕ್ಷೇತ್ರದ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿಚುನಾವಣಾ ಪ್ರಚಾರ ನಡೆಸಿ ನಂತರ ಇಂದೂರಿನಲ್ಲಿಮಾತನಾಡಿದರು.

ನಾನು ಒಬ್ಬನೇ ಬಂದಿಲ್ಲ, ನನ್ನ ಸಂಸಾರ ದೊಡ್ಡದು. ಜಿ.ಪಂ., ತಾ.ಪಂ., ನಗರಸಭೆ, ಎಪಿಎಂಸಿ ಸೇರಿದಂತೆ ವಿವಿಧ ಸಂಸ್ಥೆಗಳ ನೂರಾರು ಜನಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದೇನೆ. ಅವರು ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕೆಂದು ಮನವಿ ಮಾಡಿದರು ಎಂದರು.

ಬಿಜೆಪಿ ಮತ್ತು ನನ್ನ ಬೆಂಬಲಿಗರ ಮಧ್ಯ ಇರುವ ಅಸಮಾಧಾನ 80 ಪ್ರತಿಶತ ಸಮಾನ ಆಗಿದೆ. ಮುಂದೆ ಎಲ್ಲವೂ ಸರಿ ಆಗುತ್ತದೆ. ಹಿಂದೆ ಬಿಜೆಪಿಯಿಂದ ವಿ.ಎಸ್‌.ಪಾಟೀಲರನ್ನು ಗೆಲ್ಲಿಸಿದ್ದರೆ 105 ಶಾಸಕರು ಆಗುತ್ತಿದ್ದರು. ನನ್ನನ್ನು ಗೆಲ್ಲಿಸಿದ್ದಕ್ಕೆ ಬಿಜೆಪಿ ಸರಕಾರ ಬಂತು, ಈಗ ಮತ್ತೆ ಗೆಲ್ಲಿಸಿದರೆ ಸರಕಾರ ಉಳಿಯುತ್ತದೆ ಎಂದರು. ರಾಜೀನಾಮೆ ಕೊಡಲು ಗುಂಡಿಗೆ ಬೇಕು ಒಂದು ಉದ್ದೇಶಕ್ಕೆ ಕೊಟ್ಟಿದ್ದೇನೆ ಎಂದರು.

ನಾನು ರಾಜೀನಾಮೆ ಕೊಟ್ಟರೆ ಪಾಪ, ನಮ್ಮ ನಾಯಕರಾದ ದೇಶಪಾಂಡೆ ಅವರು ಕೊಟ್ಟರೆ ಪುಣ್ಯವೇ ? ಎಂದು ಗೇಲಿ ಮಾಡಿದರು. ಸಭೆಯಲ್ಲಿಹೆಬ್ಬಾರ ಬೆಂಬಲಿಗರು, ಬಿಜೆಪಿ ಪ್ರಮುಖರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ