ಆ್ಯಪ್ನಗರ

ಮಕ್ಕಳು ಬರದಿದ್ದರೂ ಹಾಜರಿ ಹಾಕುವುದೇಕೆ?

ಮುಂಡಗೋಡ: ಅಂಗನವಾಡಿಗೆ ಮಕ್ಕಳು ಬಾರದಿದ್ದರೂ ಅವರ ಹಾಜರಾತಿಯನ್ನು ಹಾಕಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ತಾ.ಪಂ.ಸದಸ್ಯ ರಮೇಶ ರಾಯ್ಕರ ಕೆಡಿಪಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗೆ ತಿಳಿಸಿದರು.

Vijaya Karnataka 6 Dec 2018, 5:00 am
ಮುಂಡಗೋಡ: ಅಂಗನವಾಡಿಗೆ ಮಕ್ಕಳು ಬಾರದಿದ್ದರೂ ಅವರ ಹಾಜರಾತಿಯನ್ನು ಹಾಕಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ತಾ.ಪಂ.ಸದಸ್ಯ ರಮೇಶ ರಾಯ್ಕರ ಕೆಡಿಪಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗೆ ತಿಳಿಸಿದರು.
Vijaya Karnataka Web why do children attend though
ಮಕ್ಕಳು ಬರದಿದ್ದರೂ ಹಾಜರಿ ಹಾಕುವುದೇಕೆ?


ಬುಧವಾರ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ತಮ್ಮ ಇಲಾಖೆಯವ ಪ್ರಗತಿ ಪರಿಶೀಲನೆ ಬಗ್ಗೆ ಸಭೆ ಮಾಹಿತಿ ನೀಡುತ್ತಿರುವಾಗ ತಾಪಂ. ಸದಸ್ಯ ರಮೇಶ ರಾಯ್ಕರ ಮಾತನಾಡಿ ಗೌಳಿ ಸಮುದಾಯದವರು ವಾಸವಾಗಿರುವ ಬಡ್ಡಿಗೇರಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು ಇಲ್ಲಿ 60ಮಕ್ಕಳ ಹಾಜರಾತಿಯಿದೆ ಆದರೆ ಪ್ರತಿದಿನ 35ರಷ್ಟು ಮಕ್ಕಳು ಮಾತ್ರ ಅಂಗನವಾಡಿ ಕೆಂದ್ರಕ್ಕೆ ಬರುತ್ತವೆ ಉಳಿದ ಮಕ್ಕಳು ಅಂಗನವಾಡಿಗೆ ಬರುವುದಿಲ್ಲ ಆದರೆ ಪ್ರತಿದಿನವೂ ಅಂಗನವಾಡಿಯಲ್ಲಿ 60ಮಕ್ಕಳು ಹಾಜರಾತಿ ಹಾಕಲಾ ಗುತ್ತದೆ ಹೀಗೆ ಸುಳ್ಳು ಹಾಜರಾತಿ ಹಾಕಿ ಮಕ್ಕಳಿಗೆ ನೀಡುವ ಆಹಾರವನ್ನು ಅಂಗನವಾಡಿಯ ವರು ತೆಗೆದುಕೊಂಡು ಹೋಗುವ ಬಗ್ಗೆ ಸಂಶಯ ಮೂಡುತ್ತಿದೆ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಆಗ ತಾಪಂ.ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್‌ ಮಾತನಾಡಿ ಮಳಗಿ ಭಾಗದಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿದ್ದು ಈ ಬಗ್ಗೆ ತಾವೂ ವಿಶೇಷ ಕಾಳಜಿ ವಹಿಸಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ನಾನೇ ಅಂಗನವಾಡಿ ಕೆಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಸಿಡಿಪಿಒ ಹೇಳಿದರು. ನಂತರ ತಾಲೂಕಿನ ಕೆಲವಡೆ ನೂತನ ಅಂಗನವಾಡಿಗಳ ಅವಶ್ಯಕತೆಯಿದ್ದು ನೂತನ ಅಂಗನವಾಡಿ ಮಂಜೂರಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗೆ ಸಭೆಯಲ್ಲಿ ಸೂಚಿಸಲಾಯಿತು.

ಅಂತರ್ಜಾತಿ ವಿವಾಹವಾದರೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಸಹಾಯ ಧನವನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಿಲ್ಲ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಅಂತರ್ಜಾತಿ ವಿವಾಹ ಆದವರಿಗೆ ಸಹಾಯ ಧನ ನೀಡಲು ಸಾಧ್ಯವಾಗಲಿಲ್ಲ. ಇದೀಗ ಹಣ ಬಿಡುಗಡೆಯಾಗಿದ್ದು ಈ ವಾರದಲ್ಲಿ ಹಣ ನಿಡಲಾಗುವುದು ಎಂದು ಸಮಾಜ ಕಲ್ಯಾಣ ಅಧಿಕಾರಿ ಸಭೆಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿ ದಯಾನಂದ ಮಾತನಾಡಿ ಮಳೆಗಾಲ ಮುಗಿದಿದ್ದು ರಾಜ್ಯ ಹೆದ್ದಾರಿ ಹಾಗೂ ಗ್ರಾಮಾಂತರ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು. ಎರಡು ವರ್ಷದಿಂದ ಈಚೆಗೆ ಮಾಡಿರುವ ರಸ್ತೆಗಳು ಹಾಳಾಗಿದ್ದು ಅವುಗಳ ನಿರ್ವಹಣೆ ಅವಧಿ ಮುಗಿದಿಲ್ಲ. ಈ ಬಗ್ಗೆ ಗುತ್ತಿಗೆದಾರಿಗೆ ತಿಳಿಸಿ ರಸ್ತೆ ದುರಸ್ತಿ ಪಡಿಸುವಂತೆ ಜಿ.ಪಂ.ಸದಸ್ಯ ಎಲ್‌.ಟಿ.ಪಾಟೀಲ ತಿಳಿಸಿದರು.

ಈ ವೇಳೆ ತಾಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಜಿ.ಪಂ.ಸದಸ್ಯೆ ಜಯಮ್ಮ ಹಿರಳ್ಳಿ, ತಾ.ಪಂ.ಉಪಾಧ್ಯಕ್ಷ ಕೃಷ್ಣರ್ಮೂ ನಾಡಿಗ್‌, ತಾ.ಪಂ.ಸದಸ್ಯರಾದ ರಮೇಶ ರಾಯ್ಕರ, ಜರೀನಾ ನಾಗರೋಳ್ಳಿ, ತಾ.ಪಂ.ಅಧಿಕಾರಿ ಮಂಜುನಾಥ ಸಾಳುಂಕೆ ಹಾಗೂ ಸದಸ್ಯರು ಇದ್ದರು.

ಶಿಸ್ತು ಕ್ರಮ ಜರುಗಿಸಿ : ತಾಲೂಕಿನ ಕೆಲವು ಗ್ರಾಮೀಣ ಶಾಲೆಗಳ ಶಿಕ್ಷ ಕರು ಶಾಲೆಗಳಿಗೆ ತಡವಾಗಿ ಹೋಗುತ್ತಾರೆ ಹಾಗೂ ಮತ್ತೆ ಕೆಲವರು ಶಾಲೆ ಅವಧಿ ಮುಗಿಯುವ ಮೊದಲೇ ಪಟ್ಟಣಕ್ಕೆ ಬಂದು ಓಡಾಡುತ್ತಿರುತ್ತಾರೆ. ಅಂತಹ ಶಿಕ್ಷ ಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಶಿಕ್ಷ ಣಾಧಿಕಾರಿ ಬಸವರಾಜಪ್ಪ ಅವರನ್ನು ಒತ್ತಾಯಿಸಲಾಯಿತು. ಈ ವೇಳೆ ಜಿ.ಪಂ.ಸದಸ್ಯ ಎಲ್‌.ಟಿ.ಪಾಟೀಲ ಮಾತನಾಡಿ ಶಿಕ್ಷ ಕರು ಶಾಲಾ ಅವಧಿಯಲ್ಲಿ ಪಟ್ಟಣದಲ್ಲಿ ಸಂಚರಿಸುವುದು ಕಂಡು ಬಂದರೆ ಅಂಥವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತಿಳಿಸಿದರು. ಶಿಕ್ಷ ಕರ ಕೊರತೆಯಿರುವ ಕಾರಣ ಸಿಆರ್‌ಪಿಗಳಿಗೆ ಪಾಠ ಮಾಡಲು ಸೂಚಿಸಿ ಎಂದರು. ನಂತರ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ಪರಿಶೀಲನೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ