ಆ್ಯಪ್ನಗರ

ಮಾದರಿ ವಿಧಾನಸಭೆ ಮಾಡುವ ಜವಾಬ್ದಾರಿ: ಸ್ವೀಕರ್ ವಿಶ್ವೇಶ್ವರ ಹೆಗಡೆ

ಹೊಸದಾಗಿ ಬಿಜೆಪಿ ಸರಕಾರ ರಚನೆಯಾದ ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವಿರೋಧವಾಗಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

Vijaya Karnataka Web 4 Aug 2019, 11:45 am
ಶಿರಸಿ: ಕರ್ನಾಟಕ ವಿಧಾನಸಭಾಧ್ಯಕ್ಷನಾಗಿ ಸದನವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ, ದೇಶ ಮಟ್ಟದಲ್ಲಿ ಮಾದರಿ ವಿಧಾನಸಭೆ ಮಾಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
Vijaya Karnataka Web Vishweshwara Hegde


ವಿಧಾನಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ನಗರದಲ್ಲಿ ಸ್ವಂತ ಕಚೇರಿಗೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಹಿರಿಯರು ಇದ್ದಾರೆ. ಅನುಭವಿಗಳ ದೊಡ್ಡ ತಂಡವಿದೆ. ಎಲ್ಲರ ಸಲಹೆ ಪಡೆದು ನಾಡಿನ ಜನತೆಯ ಧ್ವನಿಗೆ ಧ್ವನಿ ಆಗುವ ರೀತಿಯಲ್ಲಿ ಸದನವನ್ನು ಮುನ್ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದರು.

‌ವರಿಷ್ಠರು ಹಿರಿಯರಿಂದ ಸಭಾಧ್ಯಕ್ಷ ಸ್ಥಾನ ದೊರೆತಿದೆ. ಹಾಗೆಯೇ ಸದನದ ಎಲ್ಲಾ ಸದಸ್ಯರು ಸೇರಿ ಸರ್ವಾನುಮತದಿಂದ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ನನ್ನ ಕ್ಷೇತ್ರದ ಜನರನ್ನು ಅಭಿನಂದಿಸುತ್ತೇನೆ . ಇಲ್ಲಿ ಆಯ್ಕೆಯಾದ ಪರಿಣಾಮ ಈ ಸ್ಥಾನ ದೊರಕಿದೆ ಎಂದ ಅವರು, ಸದನ ಜನರ ಸಮಸ್ಯೆಗೆ ಉತ್ತರ ದೊರಕಿಸುವ ವೇದಿಕೆ ಆಗಬೇಕು. ಕರ್ನಾಟಕದ ಜನತೆಯ ಒಳಿತಿಗಾಗಿ ಚರ್ಚಿಸುವ ವೇದಿಕೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

ಸದನದಲ್ಲಿ ಸಾಕಷ್ಟು ಸಮಾಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇನೆ. ಸರ್ಕಾರದ ಜೊತೆ ಮಾತನಾಡಿ ಸದನ ಹೆಚ್ಚು ದಿನ ನಡೆಯುವಂತೆ ನೋಡಿಕೊಳ್ಳುತ್ತೇನೆ. ಹೆಚ್ಚೆಚ್ಚು ಜನರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ