ಆ್ಯಪ್ನಗರ

ಗಾಯದ ಮೇಲೆ ಬರೆ..!

ಕಾರವಾರ : ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ನಾಲ್ವರು ಗಾಯಗೊಂಡ ಸಂದರ್ಭದಲ್ಲಿಯೇ ಜೇನ್ನೊಣ ಹಠಾತ್‌ ದಾಳಿ ನಡೆಸಿ 8 ಜನರು ಆಸ್ಪತ್ರೆಗೆ ಸೇರುವಂತೆ ಮಾಡಿದ ಘಟನೆ ಶನಿವಾರ ಜೊಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ನಡೆದಿದೆ.

Vijaya Karnataka 29 Apr 2019, 5:00 am
ಕಾರವಾರ : ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ನಾಲ್ವರು ಗಾಯಗೊಂಡ ಸಂದರ್ಭದಲ್ಲಿಯೇ ಜೇನ್ನೊಣ ಹಠಾತ್‌ ದಾಳಿ ನಡೆಸಿ 8 ಜನರು ಆಸ್ಪತ್ರೆಗೆ ಸೇರುವಂತೆ ಮಾಡಿದ ಘಟನೆ ಶನಿವಾರ ಜೊಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ನಡೆದಿದೆ.
Vijaya Karnataka Web write on the wound
ಗಾಯದ ಮೇಲೆ ಬರೆ..!


ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಕುಟುಂಬವೊಂದು ಬೆಳಗಾವಿಗೆ ತೆರಳುತ್ತಿದ್ದರು. ಅವರ ಕಾರು ಜೊಯಿಡಾದ ಅಣಶಿ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಎರಡೂ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಆದರೆ ಅಪಘಾತದ ರಭಸಕ್ಕೆ ಒಂದು ಕಾರು ಪಕ್ಕದಲ್ಲಿದ್ದ ಮರವೊಂದಕ್ಕೆ ಬಡಿದಿತ್ತು. ಇದರ ಪರಿಣಾಮ ಸ್ವಲ್ಪ ಹೊತ್ತಿನ ಬಳಿಕ ಮರದಲ್ಲಿದ್ದ ಜೇನ್ನೊಣಗಳು ಹಠಾತ್‌ ದಾಳಿ ನಡೆಸಿದ್ದವು. ಜೇನ್ನೊಣಗಳ ಕಡಿತಕ್ಕೆ ಒಳಗಾದ ಒಟ್ಟು ಎಂಟು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ತಾಕುಲ ಮೂಲದ ಒಬ್ಬ ಮಹಿಳೆ ಜೇನು ಕಡಿತಕ್ಕೆ ತೀವ್ರ ಅಸ್ವಸ್ಥರಾಗಿದ್ದಾರೆ. ಒಬ್ಬ ಬಾಲಕ ಸೇರಿದಂತೆ ಇನೊಬ್ಬ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಎಲ್ಲರಿಗೂ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ