ಆ್ಯಪ್ನಗರ

ಯಕ್ಷ ಗಾನ ನಮ್ಮ ಸಂಸ್ಕೃತಿಯ ಜೀವಾಳ

ಹೊನ್ನಾವರ : ತಾಲೂಕಿನ ಹೊಸಾಕುಳಿಯಲ್ಲಿ ಶ್ರೀ ಉಮಾಮಹೇಶ್ವರ ಯಕ್ಷ ಗಾನ ಕಲಾವರ್ದಕ ಸಂಘದ 40ನೇ ಜನ್ಮದಿನದ ಅಂಗವಾಗಿ ಸ್ನೇಹ ಸಮ್ಮೇಲನ, ಸನ್ಮಾನ, ಯಕ್ಷ ಗಾನ ಕಾರ್ಯಕ್ರಮಗಳು ನಡೆದವು.

Vijaya Karnataka 26 May 2019, 5:00 am
ಹೊನ್ನಾವರ : ತಾಲೂಕಿನ ಹೊಸಾಕುಳಿಯಲ್ಲಿ ಶ್ರೀ ಉಮಾಮಹೇಶ್ವರ ಯಕ್ಷ ಗಾನ ಕಲಾವರ್ದಕ ಸಂಘದ 40ನೇ ಜನ್ಮದಿನದ ಅಂಗವಾಗಿ ಸ್ನೇಹ ಸಮ್ಮೇಲನ, ಸನ್ಮಾನ, ಯಕ್ಷ ಗಾನ ಕಾರ್ಯಕ್ರಮಗಳು ನಡೆದವು.
Vijaya Karnataka Web yaksha gana is the life of our culture
ಯಕ್ಷ ಗಾನ ನಮ್ಮ ಸಂಸ್ಕೃತಿಯ ಜೀವಾಳ


ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವಿದ್ವಾಂಸ ಸುಬ್ರಹ್ಮಣ್ಯ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಮಾ ಮಹೇಶ್ವರ ಯಕ್ಷ ಗಾನ ಕಲಾವರ್ಧಕ ಸಂಘ ಕಳೆದ 42 ವರ್ಷಗಳಿಂದ ಪ್ರತಿ ವರ್ಷ ಸರಣಿ ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸುತ್ತ ತಾಳಮದ್ದಲೆಯ ಆಸಕ್ತಿಯನ್ನು ಜನ ಮಾನಸದಲ್ಲಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದರು.

ಹಿರಿಯ ಭಾಗವತ ಕಡತೋಕಾದ ಲಕ್ಷ್ಮೀನಾರಾಯಣ ಭಾಗವತ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಯಕ್ಷ ಗಾನ ನಮ್ಮ ಸಂಸ್ಕೃತಿಯ ಜೀವಾಳ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಡತೋಕಾ ಗೋಪಾಲಕೃಷ್ಣ ಭಾಗವತ, ಎಸ್‌.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಎಂ.ಆರ್‌.ನಾಯಕ, ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನಾಯಕ ಆರ್‌.ಭಟ್ಟ ಪಾಲ್ಗೊಂಡಿದ್ದರು. ಯಕ್ಷ ಗಾನ ಹಿರಿಯ ಕಲಾವಿದ ಮಣ್ಣಿಗೆ ತಿಮ್ಮಣ್ಣ ಯಾಜಿ ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಹೆಬ್ಬಾರ್ತಕೇರಿ ಎನ್‌.ಎಂ.ಹೆಗಡೆ ಸನ್ಮಾನಪತ್ರ ವಾಚಿಸಿದರು. ನೀಲಕೋಡ ಗೋವಿಂದ ಭಟ್ಟ ಅಭಿನಂದನಾ ನುಡಿಗಳನ್ನಾಡಿದರು.

ಸಂಘದ ಅಧ್ಯಕ್ಷ ಹರಿಕೇರಿ ಡಾ. ಜಿ.ಕೆ.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುಡಾರೆ ಎಸ್‌.ಎಂ.ಹೆಗಡೆ ಸುದೀರ್ಘಕಾಲದಿಂದ ಸಂಘ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡಿದರು. ಸಂಘದ ಉಪಾಧ್ಯಕ್ಷ ಹೆಬ್ಬಾರ್ತಕೇರಿ ಜಿ.ಎಂ.ಹೆಗಡೆ ವಂದಿಸಿದರು. ಕಾಸ್ಕಂಡ ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಯುವ ಕಲಾವಿದರಿಂದ ಎಂ.ಜಿ.ಬರವಣಿ ವಿರಚಿತ ರಾಜಾ ಹೃತಧ್ವಜ ಯಕ್ಷ ಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಬೆಳ್ಳಿಮನೆ ಕೃಷ್ಣ ಹೆಗಡೆ, ಧರ್ಮಶಾಲಾ ಗಜಾನನ ಹೆಗಡೆ, ಇಡಗುಂಜಿ ಗಣೇಶ ಯಾಜಿ, ಕರ್ಕಿ ಮಂಜುನಾಥ ಭಂಡಾರಿ, ಹರಿಕೇರಿ ಪಿ.ಕೆ.ಹೆಗಡೆ, ಹಂದಿಮುಲ್ಲೆ ಗಣಪತಿ ಹೆಗಡೆ, ನಯನ ಕುಮಾರ ಕಣ್ಣಿ ಪಾಲ್ಗೊಂಡಿದ್ದರು.

ಮುಮ್ಮೇಳದಲ್ಲಿ ಅಂಸಳ್ಳಿ ಈಶ್ವರ ಭಟ್ಟ, ಬೇರೊಳ್ಳಿ ವಿನಯ ಭಟ್‌, ಕೊಂಡದಕುಳಿ ಲಕ್ಷ್ಮಿಕಾಂತ ಹೆಗಡೆ, ಗುಡ್ಡೇಬಾಳ ಹರಿಶ್ಚಂದ್ರ ಹೆಗಡೆ, ನಾಗರಾಜ ದೇವಿಮಕ್ಕಿ, ಪಾಂಡು ಸಂಡಳ್ಳಿ, ಗುಮ್ಮೆಕೇರಿ ಎಂ.ಆಯ್‌.ಹೆಗಡೆ, ಉಳ್ಗೆರೆ ಸತೀಶ ಭಟ್ಟ ಹರಿಕೇರಿ ಕೃಷ್ಣ ಹೆಗಡೆ, ಗುಡ್ಡೇಬಾಳ ಗಜಾನನ ಹೆಗಡೆ, ಮಕ್ಕಿ ಶ್ರೀಪಾದ ಭಟ್ಟ, ಹೆಬ್ಬಾರ್ತಕೇರಿ ಶ್ರೀಪಾದ ಹೆಗಡೆ, ಸೀಗಡಿ ಗಣೇಶ ಹೆಗಡೆ, ಹಡಿನಬಾಳ ಶ್ರೀಶ ಹೆಗಡೆ, ಮುಗ್ವಾ ದರ್ಶನ ಭಟ್ಟ, ರವಿಕಿರಣ ಜಳವಳ್ಳಿ, ಪ್ರಸನ್ನ ಹರಿಕೇರಿ, ಮಯೂರ ಹರಿಕೇರಿ, ಸುಬ್ರಾಯ ಹೆಬ್ಬಾರ್ತಕೇರಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಸಿದ್ಧ ಯಕ್ಷ ಗಾನ ಭಾಗವತ ನೆಬ್ಬೂರು ನಾರಾಯಣ ಭಾಗವತ, ಯಕ್ಷ ಗಾನ ಕಲಾವಿದ ಹುಡÜಗೋಡು ಚಂದ್ರಹಾಸ ನಾಯ್ಕ, ನಿವೃತ್ತ ಯೋಧ ಹಾಗೂ ಕಂದಾಯ ಇಲಾಖಾಧಿಕಾರಿ ಮುಡಾರೆ ದೀಪಕ ಹೆಗಡೆ ಇವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ದಿನದ ಯಕ್ಷ ಗಾನ ಕಾ¿åರ್‍ಕ್ರಮವನ್ನು ಕಲಾ ಚೇತನ ದಿ. ನೆಬ್ಬೂರು ನಾರಾಯಣ ಭಾಗವತ ಹಾಗೂ ದಿ. ಹುಡಗೋಡು ಚಂದ್ರಹಾಸ ನಾಯ್ಕ ಇವರಿಗೆ ಸಮರ್ಪಣೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ