ಆ್ಯಪ್ನಗರ

ಯಕ್ಷಗಾನ ಉಳಿಯಲು ಸಂಘಟಕರು ಬೇಕು

ಸಿದ್ದಾಪುರ : ಯಕ್ಷಗಾನ ಕಲೆ ಹಾಗೂ ಕಲಾವಿದರು ಉಳಿಯಬೇಕಾದರೆ ಸಂಘಟಕರು ಬೇಕು ಹಾಗೂ ಮನೆಯಲ್ಲಿನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಯಕ್ಷಗಾನ ಹಾಗೂ ತಾಳಮದ್ದಲೆæಯನ್ನು ನಡೆಸುವ ಮೂಲಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಹೇಳಿದರು.

Vijaya Karnataka 9 Dec 2019, 5:00 am
ಸಿದ್ದಾಪುರ : ಯಕ್ಷಗಾನ ಕಲೆ ಹಾಗೂ ಕಲಾವಿದರು ಉಳಿಯಬೇಕಾದರೆ ಸಂಘಟಕರು ಬೇಕು ಹಾಗೂ ಮನೆಯಲ್ಲಿನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಯಕ್ಷಗಾನ ಹಾಗೂ ತಾಳಮದ್ದಲೆæಯನ್ನು ನಡೆಸುವ ಮೂಲಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಹೇಳಿದರು.
Vijaya Karnataka Web yakshagana needs organizers to stay
ಯಕ್ಷಗಾನ ಉಳಿಯಲು ಸಂಘಟಕರು ಬೇಕು


ಶುಕ್ರವಾರ ಸಿದ್ದಾಪುರದ ಸೂರ್ಯಪುತ್ರ ನಿವಾಸದ ಪ್ರವೇಶದ ಅಂಗವಾಗಿ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಲೆæಯಲ್ಲಿಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇದೇ ವೇಳೆಯಲ್ಲಿಮತ್ತೋರ್ವ ಭಾಗವತ ಸತೀಶ ಹೆಗಡೆ ದಂಟಕಲ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆಯೋಜಕರಾದ ನಾಗರಾಜ ಆಚಾರ್ಯ, ಶೈಲಾ ಆಚಾರ್ಯ, ಗಣೇಶ ಆಚಾರ್ಯ, ಉಮೇಶ ಆಚಾರ್ಯ ಹಾಗೂ ನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

ನಂತರ ಯಕ್ಷಚಂದನ ದಂಟಕಲ್‌ ಹಾಗೂ ಅತಿಥಿ ಕಲಾವಿದರಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿರಾಘವೇಂದ್ರ ಆಚಾರ್ಯ ಜನ್ಸಾಲೆ, ಸತೀಶ ಹೆಗಡೆ ದಂಟಕಲ್‌, ಶಂಕರ್‌ ಭಾಗವತ್‌ ಯಲ್ಲಾಪುರ, ವಿN್ನೕಶ್ವರ ಗೌಡ ಕೆಸರಕೊಪ್ಪ ಸಹಕರಿಸಿದರು.

ಮುಮ್ಮೇಳದಲ್ಲಿಅರುಣ ಬೆಂಕ್ಟಳ್ಳಿ ಸಾಗರ (ವಾಲಿ), ಮಂಜು ಗೋರಮನೆ (ರಾಮ), ಗಣಪತಿ ಹೆಗಡೆ ಗುಂಜಗೋಡ (ಸುಗ್ರೀವ), ಎಂ.ಆರ್‌.ಹೆಗಡೆ ದಂಟಕಲ್‌(ಹನುಮಂತ), ಸುಜಾತಾ ಹೆಗಡೆ ದಂಟಕಲ್‌(ತಾರೆ) ಪಾತ್ರ ನಿರ್ವಹಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ