ಆ್ಯಪ್ನಗರ

ಅದ್ಧೂರಿ ಸುವರ್ಣ ಮಹೋತ್ಸವಕ್ಕೆ ನಿರ್ಣಯ

ಕುಮಟಾ : ಹತ್ತಿರದ ಮಲ್ಲಾಪುರ ಗುರುಪ್ರಸಾದ್‌ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆ ಶಾಲೆಯ ಸಭಾಭವನದಲ್ಲಿಭಾನುವಾರ ನಡೆಯಿತು.

Vijaya Karnataka 9 Dec 2019, 5:00 am
ಕುಮಟಾ : ಹತ್ತಿರದ ಮಲ್ಲಾಪುರ ಗುರುಪ್ರಸಾದ್‌ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆ ಶಾಲೆಯ ಸಭಾಭವನದಲ್ಲಿಭಾನುವಾರ ನಡೆಯಿತು.
Vijaya Karnataka Web yakshagana needs organizers to stay
ಅದ್ಧೂರಿ ಸುವರ್ಣ ಮಹೋತ್ಸವಕ್ಕೆ ನಿರ್ಣಯ


50 ವರ್ಷಗಳ ಹಿಂದೆ ಶಿಕ್ಷಣದ ಜ್ಯೋತಿಯನ್ನು ಬೆಳಗಿಸಿ, ಜ್ಞಾನದ ಬೆಳಕು ಚೆಲ್ಲಿದ, ಅದೆಷ್ಟೋ ಜನರ ಪಾಲಿಗೆ ಬಡತನದ ಬೇಗೆಯಿಂದ ಹೊರ ತೆಗೆದು ಭವಿಷ್ಯವನ್ನು ಕಟ್ಟಿಕೊಟ್ಟ ಈ ಶಾಲೆ ಸುರ್ವಣ ಮಹೋತ್ಸವ ಹೊಸ್ತಿಲೆಡೆ ದಾಪುಗಾಲು ಇಟ್ಟಿರುವ ಹಿನ್ನೆಲೆಯಲ್ಲಿ2 ದಿನಗಳ ಕಾಲ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲು ನಿರ್ಣಯಿಸಲಾಗಿದೆ. ಭಾನುವಾರ ನಡೆದ ಸಭೆಯಲ್ಲಿಸುವರ್ಣ ಸಂಭ್ರಮಕ್ಕೆ ವಿಶೇಷ ಮೆರಗು ನೀಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.

ಗುರುಪ್ರಸಾದ ಶಿಕ್ಷಣ ಸಂಸ್ಥೆಗೆ ಆಶಿರ್ವಾದದ ಬಲ ನೀಡಿ ಹಣಕಾಸಿನ ನೆರವಿನ ಮೂಲಕ ಸಂಸ್ಥೆಯನ್ನು ಸಶಕ್ತ ಸಬಲವನ್ನಾಗಿ ನಡೆಸುತ್ತಿರುವ ಚಿತ್ರಾಪುರ ಮಠದ ಶ್ರೀ ಸದ್ಯೊಜಾತ್‌ ಸ್ವಾಮೀಜಿಯವರನ್ನು ಅಹ್ವಾನಿಸಿ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲು ನಿಶ್ಚಯಿಸಲಾಯಿತು. ಸಂಸ್ಥೆಯಲ್ಲಿಶಿಕ್ಷಣ ಪಡೆದು ಸಾಧನೆ ಮಾಡಿ ವಿವಿಧ ಕ್ಷೇತ್ರದಲ್ಲಿಉತ್ತುಂಗಕ್ಕೇರಿದ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲು ನಿರ್ಣಯಿಸಲಾಯಿತು. ಕಾರ್ಯಕ್ರಮದಲ್ಲಿಘೋಷ್ಠಿ, ಪ್ರಬಂಧ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ಗುರುಪ್ರಸಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ಮಲ್ಲಾಪುರ, ಉಪಾಧ್ಯಕ್ಷ ಅರುಣ ಉಭಯಕರ್‌, ಸದಸ್ಯರಾದ ವಿ.ಎಸ್‌. ಅಡಿ, ಮುಖ್ಯಾಧ್ಯಾಪಕ ಎಂ.ಟಿ.ಗೌಡಾ ವೇದಿಕೆಯಲ್ಲಿಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಪ್ರೊ. ಪ್ರಕಾಶ ಪಂಡಿತ, ಜಿ.ವಿ.ನಾಯ್ಕ ಇದ್ದರು. ಹಳೇಯ ವಿದ್ಯಾರ್ಥಿಗಳಾದ ರಾಜು ನಾಯ್ಕ, ಜಿ.ಐ.ಹೆಗಡೆ, ಎಂ.ಟಿ.ಕುಕ್ಕಳ್ಳಿ, ಆನಂದು ನಾಯ್ಕ, ಶಫಿ ಮುಲ್ಲಾಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ