ಆ್ಯಪ್ನಗರ

ಭಾಸ್ಕರ ಜೋಶಿಗೆ ‘ಯಕ್ಷಸಿರಿ’ ಪ್ರಶಸ್ತಿ

ಸಿದ್ದಾಪುರ : ಯಕ್ಷಗಾನ ಕಲಾಕ್ಷೇತ್ರದಲ್ಲಿಕಳೆದ 4 ದಶಕಗಳಿಂದ ಸ್ತ್ರೀವೇಷಧಾರಿಯಾಗಿ ಮನೆಮಾತಾಗಿರುವ ಹಿರಿಯ ಸ್ತ್ರೀವೇಷಧಾರಿ ತಾಲೂಕಿನ ಭಾಸ್ಕರ ಜೋಶಿ ಶಿರಳಗಿಯವರಿಗೆ ಡಿ.9ರಂದು ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿಕರ್ನಾಟಕ ಯಕ್ಷಗಾನ ಕಲಾ ಅಕಾಡೆಮಿಯಿಂದ 'ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Vijaya Karnataka 9 Dec 2019, 5:00 am
ಸಿದ್ದಾಪುರ : ಯಕ್ಷಗಾನ ಕಲಾಕ್ಷೇತ್ರದಲ್ಲಿಕಳೆದ 4 ದಶಕಗಳಿಂದ ಸ್ತ್ರೀವೇಷಧಾರಿಯಾಗಿ ಮನೆಮಾತಾಗಿರುವ ಹಿರಿಯ ಸ್ತ್ರೀವೇಷಧಾರಿ ತಾಲೂಕಿನ ಭಾಸ್ಕರ ಜೋಶಿ ಶಿರಳಗಿಯವರಿಗೆ ಡಿ.9ರಂದು ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿಕರ್ನಾಟಕ ಯಕ್ಷಗಾನ ಕಲಾ ಅಕಾಡೆಮಿಯಿಂದ 'ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
Vijaya Karnataka Web yakshasiri telephone award for bhaskara joshi
ಭಾಸ್ಕರ ಜೋಶಿಗೆ ‘ಯಕ್ಷಸಿರಿ’ ಪ್ರಶಸ್ತಿ


ಸಚಿವ ಸಿ.ಟಿ.ರವಿ, ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಸಂಸದರಾದ ಶೋಭಾ ಕರಂದ್ಲಾಚೆ, ಜೈರಾಮ ರಮೇಶ, ಸಂಸದ ಎಚ್‌.ಆರ್‌.ಪ್ರಜ್ವಲ್‌ ರೇವಣ್ಣ, ಶಾಸಕರಾದ ಆಯನೂರು ಮಂಜುನಾಥ, ಡಿ.ಎಸ್‌.ಸುರೇಶ, ಎಂ.ಕೆ.ಪ್ರಾಣೇಶ, ಬೆಳ್ಳಿ ಪ್ರಕಾಶ, ಟಿ.ಡಿ.ರಾಜೇಗೌಡ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ, ಜಿಲ್ಲಾಧಿಕಾರಿ ಬಗಾದಿ ಗೌತಮ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿಪ್ರಶಸ್ತಿ ಪ್ರದಾನ ನಡೆಯಲಿದೆ.

ದೇಶ ವಿದೇಶಗಳಲ್ಲಿಯಕ್ಷಗಾನಗಳಲ್ಲಿಪಾತ್ರ ನಿರ್ವಹಣೆ ಮಾಡಿರುವ ಜೋಶಿಯವರು ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರೀ, ಪಂಚಲಿಂಗೇಶ್ವರ, ಪೆರ್ಡೂರ ಹೀಗೆ ವಿವಿಧ ಮೇಳಗಳಲ್ಲಿಪ್ರಮುಖ ಸ್ತ್ರೀ ವೇಷಧಾರಿಯಾಗಿ ಪಾತ್ರನಿರ್ವಹಿಸಿದವರು. ಈ ಹಿಂದೆ ಶ್ರೀಯುತರಿಗೆ 'ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ಇವರು ಪ್ರದಾನ ಮಾಡುವ 'ಪಾತಾಳ ಪ್ರಶಸ್ತಿ' ಶ್ರೀಕ್ಷೇತ್ರ ಭುವನಗಿರಿಯ ಭುವನೇಶ್ವರೀ ದೇವಾಲಯದ ಮಾತೃವಂದನಾ ಸಮಿತಿಯಿಂದ 'ಶ್ರೀಮಾತಾ ಗೌರವ ಅನುಗ್ರಹ' ಗೌರವ ಸನ್ಮಾನ ಸಂದಿದೆ. ಸಿದ್ದಾಪುರದ ಸಂಸ್ಕೃತಿ ಸಂಪದ ಸಂಘಟನೆಯು ಹುಟ್ಟಿದೂರಿನಲ್ಲಿಯೇ ಅವರನ್ನು ಗೌರವಿಸಿ ಸನ್ಮಾನಿಸಿದೆ. ಹಣಜೀಬೈಲ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಜೋಶಿಯವರನ್ನು ಗೌರವಿಸಲಾಗಿದೆ. ಇದೀಗ 'ಯಕ್ಷಸಿರಿ' ರಾಜ್ಯ ಪ್ರಶಸ್ತಿಯು ಭಾಸ್ಕರ ಜೋಶಿಯವರ ಮುಡಿಗೆ ಏರುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ