ಆ್ಯಪ್ನಗರ

ಯಲ್ಲಾಪುರ ಶಿಕ್ಷಕರ ದಿನಾಚರಣೆ

ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿಗುರುವಾರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿ ಮಾತನಾಡಿ, ಈ ಶತಮಾನವು ಯೋಗ್ಯತೆ ಹಾಗೂ ವಿದ್ಯೆಯಿಂದ ಬದುಕುವ ಶತಮಾನವಾಗಿದೆ. ಇಂದಿನ ಕಾಲಘಟ್ಟದಲ್ಲಿವಿದ್ಯೆಗೆ ವಿಶೇಷ ಮಹತ್ವವಿದೆ. ಹೀಗಾಗಿ ವಿದ್ಯೆ ಕಲಿಸುವ ಶಿಕ್ಷಕರ ಮೇಲೂ ವಿಶೇಷ ಜವಾಬ್ದಾರಿ ಇದೆ. ಗುರುವಿನ ಕೃಪೆ ಇಲ್ಲದಿದ್ದರೆ ಯಾರೂ ಏನನ್ನೂ ಸಾಧಿಸಲಾಗದು,ಗುರುವಿನ ಕಾರುಣ್ಯ ಹಾಗೂ ನಿಶ್ಚಿತವಾದ ಗುರಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯವಿದೆ. ಉತ್ತರಕನ್ನಡ ಜಿಲ್ಲೆಯ ಶಿಕ್ಷಕರಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲಿಗುರುವೃಂದದವರ ಶ್ರಮ ಇದೆ ಎನ್ನುವುದನ್ನು ಮರೆಯಬಾರದು. ಬೇರೆಲ್ಲಉದ್ಯೋಗಕ್ಕಿಂತ ಶಿಕ್ಷಕ ವೃತ್ತಿ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಬಾಳನ್ನು ಬೆಳಗಿ, ಉತ್ತಮ, ಸುಸಂಸ್ಕೃತ ಸಮಾಜ ಕಟ್ಟುವ ಕೆಲಸ ಶಿಕ್ಷಕರಿಂದ ಆಗುತ್ತಿದೆ ಎಂದರು.

Vijaya Karnataka 6 Sep 2019, 5:00 am
ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿಗುರುವಾರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿ ಮಾತನಾಡಿ, ಈ ಶತಮಾನವು ಯೋಗ್ಯತೆ ಹಾಗೂ ವಿದ್ಯೆಯಿಂದ ಬದುಕುವ ಶತಮಾನವಾಗಿದೆ. ಇಂದಿನ ಕಾಲಘಟ್ಟದಲ್ಲಿವಿದ್ಯೆಗೆ ವಿಶೇಷ ಮಹತ್ವವಿದೆ. ಹೀಗಾಗಿ ವಿದ್ಯೆ ಕಲಿಸುವ ಶಿಕ್ಷಕರ ಮೇಲೂ ವಿಶೇಷ ಜವಾಬ್ದಾರಿ ಇದೆ. ಗುರುವಿನ ಕೃಪೆ ಇಲ್ಲದಿದ್ದರೆ ಯಾರೂ ಏನನ್ನೂ ಸಾಧಿಸಲಾಗದು,ಗುರುವಿನ ಕಾರುಣ್ಯ ಹಾಗೂ ನಿಶ್ಚಿತವಾದ ಗುರಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯವಿದೆ. ಉತ್ತರಕನ್ನಡ ಜಿಲ್ಲೆಯ ಶಿಕ್ಷಕರಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲಿಗುರುವೃಂದದವರ ಶ್ರಮ ಇದೆ ಎನ್ನುವುದನ್ನು ಮರೆಯಬಾರದು. ಬೇರೆಲ್ಲಉದ್ಯೋಗಕ್ಕಿಂತ ಶಿಕ್ಷಕ ವೃತ್ತಿ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಬಾಳನ್ನು ಬೆಳಗಿ, ಉತ್ತಮ, ಸುಸಂಸ್ಕೃತ ಸಮಾಜ ಕಟ್ಟುವ ಕೆಲಸ ಶಿಕ್ಷಕರಿಂದ ಆಗುತ್ತಿದೆ ಎಂದರು.
Vijaya Karnataka Web yallapur teachers day
ಯಲ್ಲಾಪುರ ಶಿಕ್ಷಕರ ದಿನಾಚರಣೆ


ಬೆಳಗಾವಿ ವಿಭಾಗದ ಶೈಕ್ಷಣಿಕ ಇಲಾಖೆಯ ಜಂಟಿ ಆಯುಕ್ತ ಪ್ರಸನ್ನಕುಮಾರ ಮಾತನಾಡಿ, ಉತ್ತರಕನ್ನಡ ಜಿಲ್ಲೆಯ ವಿಧ್ಯಾರ್ಥಿಗಳು ಶೈಕ್ಷಣಿಕವಾಗಿ ದೊಡ್ಡ ಸಾಧನೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಇದಕ್ಕೆ ಈ ಭಾಗದ ಶಿಕ್ಷಕರ ಮಾರ್ಗದರ್ಶನವೇ ಕಾರಣ. ಈ ಭಾಗದಲ್ಲಿಪಾರಂಪರಿಕವಾಗಿ ಶೈಕ್ಷಣಿಕ ವಾತಾವರಣ ಇದೆ. ಇದು ಸಾಧನೆ ಮಾಡಲು ಪೂರಕವಾಗಿದೆ ಎಂದರು

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಹಾಗೂ ಪ್ರಸಕ್ತ ಸಾಲಿನಲ್ಲಿನಿವೃತ್ತರಾದ ಶಿಕ್ಷಕರನ್ನು, ನಲಿ-ಕಲಿ ಸಾಧನೆ ಮಾಡಿದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾ.ಪಂ.ಅಧ್ಯಕ್ಷೆ ಭವ್ಯಾ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಎಲ್‌.ಹೆಗಡೆ ಕುಮಟಾ ವಿಶೇಷ ಉಪನ್ಯಾಸ ನೀಡಿದರು.

ತಹಸೀಲ್ದಾರ್‌ ಡಿ.ಜಿ.ಹೆಗಡೆ, ಪ್ರಮುಖರಾದ ನಾಗರಾಜ ನಾರ್ವೇಕರ್‌, ತಾ.ಪಂ. ಇ.ಓ. ಜಗದೀಶ ಕಮ್ಮಾರ, ಸುಜಾತಾ ಸಿದ್ದಿ, ಎಮ್‌.ಆರ್‌.ಹೆಗಡೆ ಕುಂಬ್ರಿಗುಡ್ಡೆ, ನಾರಾಯಣ ನಾಯಕ, ಪ್ರಕಾಶ ನಾಯಕ, ಮುಂತಾದವರು ಪಾಲ್ಗೊಂಡಿದ್ದರು.

ಶ್ರೀಧರ ಹೆಗಡೆ,ಚಂದ್ರಹಾಸ ನಾಯಕ ನಿರೂಪಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಎನ್‌.ಆರ್‌.ಹೆಗಡೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ