ಆ್ಯಪ್ನಗರ

ಶಿರಸಿ: ಪಾಶ ಹಿಡಿದು ಓಡಾಡಿದ ಯಮರಾಜ, ಹೆಲ್ಮೆಟ್‌ ಧರಿಸಿ ಬೈಕ್‌ ಓಡಿಸುವಂತೆ ಜಾಗೃತಿ ಸಂದೇಶ

ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಕಾರ್ಯಕ್ರಮ ಇಂಥ ವಿಶೇಷ ಸನ್ನಿವೇಶ ತೆರೆದಿಟ್ಟಿತು. ಹೆಲ್ಮೆಟ್‌ ಇಲ್ಲದೇ ತೆರಳುತ್ತಿರುವವರನ್ನು ಅಡ್ಡಗಟ್ಟಿ ನಿಂತ ಯಮರಾಜ ಪಾತ್ರಧಾರಿ ಪಾಶ ಹಾಕಲು ಮುಂದಾಗುತ್ತಾರೆ.

Vijaya Karnataka 23 Nov 2020, 11:17 pm
ಶಿರಸಿ: ಬೈಕ್‌ ನಿಲ್ಲಿಸು...ನಾನು ಯಮರಾಜ...ಹೆಲ್ಮೆಟ್‌ ಇಲ್ಲದೇ ವಾಹನ ಚಲಾಯಿಸುತ್ತಿರುವೇಯಾ..? ಸಂಚಾರಿ ನಿಯಮ ಉಲ್ಲಂಘನೆ ಅಪರಾಧವಲ್ಲವೇ ? ಹೆಲ್ಮೇಟ್‌ ಇಲ್ಲದೇ ಚಲಾಯಿಸಿದರೆ ಅಪಘಾತ ಖಚಿತ ಎಂಬ ಅರಿವಿಲ್ಲವೇ ? ..ನಿನಗೆ ನಿನ್ನ ಜೀವ ಬೇಕಾಗಿಲ್ಲವೇ..? ನಿನ್ನನ್ನು ಯಮಲೋಕಕ್ಕೆ ಕರೆದೊಯ್ಯುವೆನು ಹೊರಡು....
Vijaya Karnataka Web 23SRS18_26
ಶಿರಸಿಯಲ್ಲಿಹೆಲ್ಮೆಟ್‌ ಧರಿಸಿ ಬೈಕ್‌ ಓಡಿಸುವ ಜಾಗೃತಿಯಲ್ಲಿ ಯಮರಾಜ ಪಾತ್ರಧಾರಿ.


ಈ ಡೈಲಾಗ್‌ ಎಲ್ಲೋ ವೇದಿಕೆ ಪ್ರದರ್ಶನದಲ್ಲಿ ಕೇಳಿದ್ದಲ್ಲ, ಹೇಳಿದ್ದಲ್ಲ, ಅದು ನಗರದ ರಸ್ತೆಯಲ್ಲಿ ಸೋಮವಾರ ಕಂಡುಬಂದ ದೃಶ್ಯ.

ಹೌದು, ತಲೆಯ ಮೇಲೊಂದು ಕಿರೀಟ, ಕೈಯಲ್ಲೊಂದು ಗದೆ, ಯಮಪಾಶ ಹಿಡಿದು ಓಡಾಡಿದ ಯಮರಾಜ ಪಾತ್ರಧಾರಿ ಹೆಲ್ಮೆಟ್‌ ಇಲ್ಲದೇ ಸಂಚರಿಸುವವರಿಗೆ ಜಾಗೃತಿಯ ಸಂದೇಶ ಸಾರಿದರು.

ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಕಾರ್ಯಕ್ರಮ ಇಂಥ ವಿಶೇಷ ಸನ್ನಿವೇಶ ತೆರೆದಿಟ್ಟಿತು. ಹೆಲ್ಮೆಟ್‌ ಇಲ್ಲದೇ ತೆರಳುತ್ತಿರುವವರನ್ನು ಅಡ್ಡಗಟ್ಟಿ ನಿಂತ ಯಮರಾಜ ಪಾತ್ರಧಾರಿ ಯಮಪಾಶ ಹಾಕಲು ಮುಂದಾಗುತ್ತಾರೆ. ಆಗ ಪೊಲೀಸರು ಸ್ವಲ್ಪ ತಡಿ ಯಮರಾಜ ಇವರೆಲ್ಲಾ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ನಾವು ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡುತ್ತಾರೆ. ಜತೆಯಲ್ಲಿ ಹೆಲ್ಮೆಟ್‌ ತೋಡಿಸುತ್ತಾರೆ. ಈ ಜಾಗೃತಿ ಸನ್ನಿವೇಶ ಬಿಂಬಿಸುವ ಮೂಲಕ ಪೊಲೀಸ್‌ ಇಲಾಖೆ ಸವಾರರ ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ