ಯಲ್ಲಾಪುರ : ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ಇತ್ತೀಚೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಇವುಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ಎಲ್ಲೆಡೆ ಫಾಗಿಂಗ್ ಮಾಡಿದೆ. ಪಟ್ಟಣದ ವಿವಿಧ ಭಾಗಗಳ ರಸ್ತೆಗಳ ಅಂಚಿನಲ್ಲಿರುವ ಚರಂಡಿಗಳಲ್ಲಿ ವಿಪರೀತ ಕಸ-ಕಡ್ಡಿ, ಗಲೀಜು ತುಂಬಿದ್ದು ಇದರಿಂದಲೇ ಸೊಳ್ಳೆಗಳು ಜಾಸ್ತಿ. ಆದ್ದರಿಂದ ಚರಂಡಿಗಳ ಸ್ವಚ್ಛತೆಗೆ ಪಟ್ಟಣ ಪಂಚಾಯಿತಿ ಮುಂದಾಗಿದೆ.
ಗುರುವಾರ ಮತ್ತು ಶುಕ್ರವಾರ ಪಟ್ಟಣದ ವಿವಿಧ ವಾರ್ಡುಗಳ ರಸ್ತೆಯಂಚಿನ ಚರಂಡಿಗಳನ್ನು ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ವರದಿಗೆ ಸ್ಪಂದನೆ : ಪಟ್ಟಣದಲ್ಲಿ ಸೊಳ್ಳೆ ಕಾಟ ಹೆಚ್ಚಿರುವ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆ ಮೇ 14ರಂದು 'ಸೊಳ್ಳೆ ಕಾಟ, ನೆಮ್ಮದಿಗೆ ಭಂಗ' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತಿರುವ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ.
ವರದಿಗೆ ಶ್ಲಾಘನೆ: ಸೊಳ್ಳೆಗಳ ಕಾಟವನ್ನು ನಿಯಂತ್ರಿಸಿ ಜನರಿಗೆ ನೆಮ್ಮದಿಯನ್ನು ನೀಡಬೇಕೆಂಬ ಕಳಕಳಿಯ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ವರದಿಗೆ ಸ್ಪಂದಿಸಿ ತಕ್ಷ ಣ ಸೊಳ್ಳೆಗಳ ನಿಯಂತ್ರಣಕ್ಕೆ ಕಾರ್ಯೋನ್ಮುಖರಾದ ಅಧಿಕಾರಿಗಳನ್ನು ಜನರು ಅಭಿನಂದಿಸಿದ್ದಾರೆ.
ತಹಸೀಲ್ದಾರ್ ಶಂಕರ್ ಜಿ.ಎಸ್ ಪತ್ರಿಕೆ ಜತೆ ಮಾತನಾಡಿ, ಪತ್ರಿಕೆಯ ಸಾರ್ವಜನಿಕ ಕಳಕಳಿಯ ವರದಿಯು ಶ್ಲಾಘನೀಯವಾಗಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಯಿತು. ಅವರ ಆದೇಶದಂತೆ ಗುರುವಾರದಿಂದಲೇ ಪಟ್ಟಣದ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಿಸಿ ಸಭೆಯಲ್ಲೂ ಪ್ರಸ್ತಾಪ: ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಕ್ಕೆ ಬಂದಿತು.
ಗುರುವಾರ ಮತ್ತು ಶುಕ್ರವಾರ ಪಟ್ಟಣದ ವಿವಿಧ ವಾರ್ಡುಗಳ ರಸ್ತೆಯಂಚಿನ ಚರಂಡಿಗಳನ್ನು ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ವರದಿಗೆ ಸ್ಪಂದನೆ : ಪಟ್ಟಣದಲ್ಲಿ ಸೊಳ್ಳೆ ಕಾಟ ಹೆಚ್ಚಿರುವ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆ ಮೇ 14ರಂದು 'ಸೊಳ್ಳೆ ಕಾಟ, ನೆಮ್ಮದಿಗೆ ಭಂಗ' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತಿರುವ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ.
ವರದಿಗೆ ಶ್ಲಾಘನೆ: ಸೊಳ್ಳೆಗಳ ಕಾಟವನ್ನು ನಿಯಂತ್ರಿಸಿ ಜನರಿಗೆ ನೆಮ್ಮದಿಯನ್ನು ನೀಡಬೇಕೆಂಬ ಕಳಕಳಿಯ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ವರದಿಗೆ ಸ್ಪಂದಿಸಿ ತಕ್ಷ ಣ ಸೊಳ್ಳೆಗಳ ನಿಯಂತ್ರಣಕ್ಕೆ ಕಾರ್ಯೋನ್ಮುಖರಾದ ಅಧಿಕಾರಿಗಳನ್ನು ಜನರು ಅಭಿನಂದಿಸಿದ್ದಾರೆ.
ತಹಸೀಲ್ದಾರ್ ಶಂಕರ್ ಜಿ.ಎಸ್ ಪತ್ರಿಕೆ ಜತೆ ಮಾತನಾಡಿ, ಪತ್ರಿಕೆಯ ಸಾರ್ವಜನಿಕ ಕಳಕಳಿಯ ವರದಿಯು ಶ್ಲಾಘನೀಯವಾಗಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಯಿತು. ಅವರ ಆದೇಶದಂತೆ ಗುರುವಾರದಿಂದಲೇ ಪಟ್ಟಣದ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಿಸಿ ಸಭೆಯಲ್ಲೂ ಪ್ರಸ್ತಾಪ: ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಕ್ಕೆ ಬಂದಿತು.