ನಾವೆಲ್ಲ ಕಷ್ಟದಲ್ಲಿದ್ದಾಗ ನೀವ್ಯಾರೂ ಬರಲ್ಲ!
ಮಂಡಗೋಡ (ಉತ್ತರ ಕನ್ನಡ) : ನೀವು ಚುನಾವಣೆ ಬಂದಾಗ ಓಟು ಕೇಳಲು ಬರುತ್ತೀರಿ. ನಾವೆಲ್ಲ ಸಂಕಷ್ಟದಲ್ಲಿದ್ದಾಗ ನೀವು ಯಾರೂ ಬರುವುದಿಲ್ಲ ಎಂದು ತಾಲೂಕಿನ ಚಿಗಳ್ಳಿ ಗ್ರಾಮದ ರೈತರು ಸಂಸದ ಅನಂತಕುಮಾರ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು.
Vijaya Karnataka 14 Aug 2019, 5:00 am
ಮಂಡಗೋಡ (ಉತ್ತರ ಕನ್ನಡ) : ನೀವು ಚುನಾವಣೆ ಬಂದಾಗ ಓಟು ಕೇಳಲು ಬರುತ್ತೀರಿ. ನಾವೆಲ್ಲ ಸಂಕಷ್ಟದಲ್ಲಿದ್ದಾಗ ನೀವು ಯಾರೂ ಬರುವುದಿಲ್ಲ ಎಂದು ತಾಲೂಕಿನ ಚಿಗಳ್ಳಿ ಗ್ರಾಮದ ರೈತರು ಸಂಸದ ಅನಂತಕುಮಾರ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು.
ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಆದ ಬೆಳೆ ಹಾನಿ ಪರಿಶೀಲಿಸಲು ಸಂಸದರು ಶಿರಸಿಯಿಂದ ಮುಂಡಗೋಡ ತಾಲೂಕಿಗೆ ಬಂದಿದ್ದರು. ಇದೇ ವೇಳೆ ಚಿಗಳ್ಳಿ ಜಲಾಶಯ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ವೀಕ್ಷಿಸಲು ಸಂಸದರು ಬರುತ್ತಿದ್ದಂತೆ ರೈತರು, ''ಜಲಾಶಯ ಬಳಿ ಹೋಗೋಣ. ಅಲ್ಲಿ ಗದ್ದೆಗಳು ಹಾಳಾಗಿರುವುದನ್ನು ನೋಡಿ'' ಎಂದು ಕೇಳಿಕೊಂಡರು.
ಆಗ ಸಂಸದರು, ''ನಾನು ಇಲ್ಲಿಗಿಂತ ಹೆಚ್ಚು ಹಾನಿಯಾದ ಸ್ಥಳಕ್ಕೆ ಹೋಗಬೇಕಾಗಿದೆ. ಈಗ ಅಲ್ಲಿಗೆ ಬರಲು ಸಾಧ್ಯವಿಲ್ಲ'' ಎಂದು ಅಲ್ಲಿಂದ ವಾಹನವೇರಿ ಹೊರಡಲು ಸಿದ್ಧವಾದ ಸಂಸದರನ್ನು ರೈತರು ತಡೆದು ತರಾಟೆಗೆ ತೆಗೆದುಕೊಂಡರು. ಆಗ ಸಂಸದರು ಮೂಕ ಪ್ರೇಕ್ಷ ಕರಂತೆ ಮೌನವಾಗಿ ನಿಂತಿದ್ದರು.
ನಂತರ ಪೊಲೀಸರು ಹಾಗೂ ಪಕ್ಷ ದ ಮುಖಂಡರು ರೈತರನ್ನು ಸಮಾಧಾನ ಮಾಡಲು ಹರಸಾಹಸಪಟ್ಟರು.
ವಾಹನದಲ್ಲಿ ನಿಮ್ಮನ್ನು ಕರೆದೊಯ್ಯಬೇಕಾ? : ಇದಕ್ಕೂ ಮೊದಲು ಕಾತೂರ ಸನಿಹದ ಮುಡಸಾಲಿ ಕ್ರಾಸ್ನಲ್ಲಿಯೂ ಸಹ ರೈತರು ಸಂಸದರನ್ನು ತಡೆದು, ''ನಮ್ಮ ಗ್ರಾಮದಲ್ಲಿ ಆಗಿರುವ ಹಾನಿ ನೋಡಲು ಬನ್ನಿ. ಮುಡಸಾಲಿ ಗ್ರಾಮಕ್ಕೆ ಎರಡು ಕಡೆಗಳಿಂದ ಹಳ್ಳದ ನೀರು ಬಂದು ನಾವು ನಾಲ್ಕೈದು ದಿನ ಗ್ರಾಮದಿಂದ ಹೊರ ಬರಲು ಆಗಲಿಲ್ಲ. ಸ್ಥಳಕ್ಕೆ ಬಂದು ನಮ್ಮ ಪರಿಸ್ಥಿತಿ ನೋಡಿ'' ಎಂದು ಪಟ್ಟು ಹಿಡಿದರು. ಈ ವೇಳೆ ಸಂಸದ ಹೆಗಡೆ, ''ವಾಹನದಲ್ಲಿ ನಿಮ್ಮನ್ನು ಹತ್ತಿಸಿಕೊಂಡು ಹೋಗಬೇಕಾ?'' ಎಂದರು. ನಂತರ ಸನವಳ್ಳಿ ಯರೇಬೈಲ್, ಶಿಡ್ಲಗುಂಡಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಆದ ಬೆಳೆ ಹಾನಿ ಪರಿಶೀಲಿಸಲು ಸಂಸದರು ಶಿರಸಿಯಿಂದ ಮುಂಡಗೋಡ ತಾಲೂಕಿಗೆ ಬಂದಿದ್ದರು. ಇದೇ ವೇಳೆ ಚಿಗಳ್ಳಿ ಜಲಾಶಯ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ವೀಕ್ಷಿಸಲು ಸಂಸದರು ಬರುತ್ತಿದ್ದಂತೆ ರೈತರು, ''ಜಲಾಶಯ ಬಳಿ ಹೋಗೋಣ. ಅಲ್ಲಿ ಗದ್ದೆಗಳು ಹಾಳಾಗಿರುವುದನ್ನು ನೋಡಿ'' ಎಂದು ಕೇಳಿಕೊಂಡರು.
ಆಗ ಸಂಸದರು, ''ನಾನು ಇಲ್ಲಿಗಿಂತ ಹೆಚ್ಚು ಹಾನಿಯಾದ ಸ್ಥಳಕ್ಕೆ ಹೋಗಬೇಕಾಗಿದೆ. ಈಗ ಅಲ್ಲಿಗೆ ಬರಲು ಸಾಧ್ಯವಿಲ್ಲ'' ಎಂದು ಅಲ್ಲಿಂದ ವಾಹನವೇರಿ ಹೊರಡಲು ಸಿದ್ಧವಾದ ಸಂಸದರನ್ನು ರೈತರು ತಡೆದು ತರಾಟೆಗೆ ತೆಗೆದುಕೊಂಡರು. ಆಗ ಸಂಸದರು ಮೂಕ ಪ್ರೇಕ್ಷ ಕರಂತೆ ಮೌನವಾಗಿ ನಿಂತಿದ್ದರು.
ನಂತರ ಪೊಲೀಸರು ಹಾಗೂ ಪಕ್ಷ ದ ಮುಖಂಡರು ರೈತರನ್ನು ಸಮಾಧಾನ ಮಾಡಲು ಹರಸಾಹಸಪಟ್ಟರು.
ವಾಹನದಲ್ಲಿ ನಿಮ್ಮನ್ನು ಕರೆದೊಯ್ಯಬೇಕಾ? : ಇದಕ್ಕೂ ಮೊದಲು ಕಾತೂರ ಸನಿಹದ ಮುಡಸಾಲಿ ಕ್ರಾಸ್ನಲ್ಲಿಯೂ ಸಹ ರೈತರು ಸಂಸದರನ್ನು ತಡೆದು, ''ನಮ್ಮ ಗ್ರಾಮದಲ್ಲಿ ಆಗಿರುವ ಹಾನಿ ನೋಡಲು ಬನ್ನಿ. ಮುಡಸಾಲಿ ಗ್ರಾಮಕ್ಕೆ ಎರಡು ಕಡೆಗಳಿಂದ ಹಳ್ಳದ ನೀರು ಬಂದು ನಾವು ನಾಲ್ಕೈದು ದಿನ ಗ್ರಾಮದಿಂದ ಹೊರ ಬರಲು ಆಗಲಿಲ್ಲ. ಸ್ಥಳಕ್ಕೆ ಬಂದು ನಮ್ಮ ಪರಿಸ್ಥಿತಿ ನೋಡಿ'' ಎಂದು ಪಟ್ಟು ಹಿಡಿದರು. ಈ ವೇಳೆ ಸಂಸದ ಹೆಗಡೆ, ''ವಾಹನದಲ್ಲಿ ನಿಮ್ಮನ್ನು ಹತ್ತಿಸಿಕೊಂಡು ಹೋಗಬೇಕಾ?'' ಎಂದರು. ನಂತರ ಸನವಳ್ಳಿ ಯರೇಬೈಲ್, ಶಿಡ್ಲಗುಂಡಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.