ಶಿರಸಿ : ಪ್ರಸಿದ್ಧ ಪ್ರವಾಸಿ ತಾಣ ಶಿರಸಿಗೆ ಸಂಪರ್ಕ ಕಲ್ಪಿಸುವ ಹೊರ ಊರಿನ ಎಲ್ಲರಸ್ತೆ ಮಾರ್ಗಗಳು ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಯುವ ಬ್ರಿಗೇಡ್ನಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಶಿರಸಿಯು ಪ್ರಮುಖ ವ್ಯವಹಾರ ಕ್ಷೇತ್ರವಾಗಿದ್ದು, ಪಕ್ಕದ ಊರುಗಳಿಂದ ದಿನವೂ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಶಿರಸಿ-ಕುಮಟಾ ರಸ್ತೆ, ಶಿರಸಿ-ಹುಬ್ಬಳ್ಳಿ ರಸ್ತೆಯೆಲ್ಲಕೆಟ್ಟು ಹೋಗಿದೆ. ಕೆಲವೆಡೆ 1 ಅಡಿಗಿಂತಲೂ ಹೆಚ್ಚಿನ ಹೊಂಡಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಶಿರಸಿಯಿಂದ ಹೊರ ಊರಿಗೆ ಹೆಚ್ಚಿನ ಚಿಕಿತ್ಸೆಗೆಂದು ತೆರಳುವ ರೋಗಿಗಳಿಗೆ ದಾರಿ ಮಧ್ಯದಲ್ಲಿಯೇ ಅಪಾಯದ ಸಾಧ್ಯತೆಗಳು ಎದುರಾಗುತ್ತವೆ. ಸರಕಾರದಿಂದ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿಯಾದ ಬಗ್ಗೆ ವರದಿಯಾಗಿದ್ದರೂ ಈವರೆಗೆ ಯಾವ ರಸ್ತೆ ದುರಸ್ತಿ ಕಾರ್ಯವೂ ನಡೆಯುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯ ಕಾರಣದಿಂದಾದರೂ ರಸ್ತೆ ದುರಸ್ತಿ ಕಾರ್ಯ ಶೀಘ್ರದಲ್ಲಿಪ್ರಾರಂಭಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿಪ್ರಸಾದ, ರವೀಂದ್ರ, ಪವನ್, ಪ್ರಸೀದ್, ಆದಿತ್ಯ, ವಿನಯ್ ಉಪಸ್ಥಿತರಿದ್ದರು.
ರಸ್ತೆಗಳ ದುರಸ್ತಿಗೆ ಯುವಬ್ರಿಗೇಡ್ ಆಗ್ರಹ
ಶಿರಸಿ : ಪ್ರಸಿದ್ಧ ಪ್ರವಾಸಿ ತಾಣ ಶಿರಸಿಗೆ ಸಂಪರ್ಕ ಕಲ್ಪಿಸುವ ಹೊರ ಊರಿನ ಎಲ್ಲರಸ್ತೆ ಮಾರ್ಗಗಳು ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಯುವ ಬ್ರಿಗೇಡ್ನಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಶಿರಸಿಯು ಪ್ರಮುಖ ವ್ಯವಹಾರ ಕ್ಷೇತ್ರವಾಗಿದ್ದು, ಪಕ್ಕದ ಊರುಗಳಿಂದ ದಿನವೂ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಶಿರಸಿ-ಕುಮಟಾ ರಸ್ತೆ, ಶಿರಸಿ-ಹುಬ್ಬಳ್ಳಿ ರಸ್ತೆಯೆಲ್ಲಕೆಟ್ಟು ಹೋಗಿದೆ. ಕೆಲವೆಡೆ 1 ಅಡಿಗಿಂತಲೂ ಹೆಚ್ಚಿನ ಹೊಂಡಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಶಿರಸಿಯಿಂದ ಹೊರ ಊರಿಗೆ ಹೆಚ್ಚಿನ ಚಿಕಿತ್ಸೆಗೆಂದು ತೆರಳುವ ರೋಗಿಗಳಿಗೆ ದಾರಿ ಮಧ್ಯದಲ್ಲಿಯೇ ಅಪಾಯದ ಸಾಧ್ಯತೆಗಳು ಎದುರಾಗುತ್ತವೆ. ಸರಕಾರದಿಂದ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿಯಾದ ಬಗ್ಗೆ ವರದಿಯಾಗಿದ್ದರೂ ಈವರೆಗೆ ಯಾವ ರಸ್ತೆ ದುರಸ್ತಿ ಕಾರ್ಯವೂ ನಡೆಯುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯ ಕಾರಣದಿಂದಾದರೂ ರಸ್ತೆ ದುರಸ್ತಿ ಕಾರ್ಯ ಶೀಘ್ರದಲ್ಲಿಪ್ರಾರಂಭಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿಪ್ರಸಾದ, ರವೀಂದ್ರ, ಪವನ್, ಪ್ರಸೀದ್, ಆದಿತ್ಯ, ವಿನಯ್ ಉಪಸ್ಥಿತರಿದ್ದರು.
Vijaya Karnataka 4 Nov 2019, 5:00 am