ವಿಜಯನಗರ (ಹೊಸಪೇಟೆ): ವಿಶ್ವವಿಖ್ಯಾತ ಹಂಪಿಯ ಯುವಕನನ್ನು ವಿದೇಶಿ ಕನ್ಯೆ ವರಿಸಿದ್ದಾಳೆ. ವಿದೇಶಿ ಕನ್ಯೆ ಕೆಮಿಲ್ ಜತೆ ಹಂಪಿ ಯುವಕ ಅನಂತರಾಜು ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿದ್ದು, ಶುಕ್ರವಾರ ಬೆಳಗ್ಗೆ 9.25ಕ್ಕೆ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಭಾರತೀಯ ಸಂಪ್ರದಾಯದಂತೆ ಸಪ್ತಪದಿ ತುಳಿದ ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದ ಹಂಪಿಯ ಜನತಾ ಪ್ಲಾಟ್ ನಿವಾಸಿ ಅಂಜೀನಪ್ಪ ಅವರ ಪುತ್ರ ಅನಂತರಾಜು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆ ನಡೆದಿದ್ದು, ಸರಿ ಸುಮಾರು ನಾಲ್ಕೈದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಶುಕ್ರವಾರ ವಿವಾಹ ಜೀವನಕ್ಕೆ ಕಾಲಿರಿಸಿದೆ.
ಬೆಲ್ಜಿಯಂ ಕನ್ಯೆ ಕೆಮಿಲ್ ಅವರು ಸೋಷಿಯಲ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದು, ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬ ಅನಂತರಾಜು ಪ್ರಮಾಣಿಕತೆಗೆ ಮನಸೋತಿತ್ತು. ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ ಆಗಿರುವ ಕೆಮಿಲ್ ಮತ್ತು ಅನಂತರಾಜು ಜೋಡಿ ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹ ಆಗಬೇಕಿತ್ತು. ಆದರೆ, ಕೊರೊನಾ ಮಾಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು.
ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಅಂದುಕೊಂಡಿದ್ದ ಕೆಮಿಲ್ ಕುಟುಂಬ ಶುಕ್ರವಾರ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆಗೆ ಒಪ್ಪಿ, ಗುರುವಾರ ಸಂಜೆ ನಿಶ್ಚಿತಾರ್ಥ ಮಾಡಿಕೊಟ್ಟಿತ್ತು. ಈ ಹಿಂದೆಯೂ ಕೂಡ ಹಂಪಿಯಲ್ಲಿ ಅನೇಕ ವಿದೇಶಿಗರು ಸ್ಥಳೀಯರನ್ನು ವರಿಸಿದ ಉದಾಹರಣೆಗಳು ಇದೆ.
ಹಂಪಿಗೆ ವಿದೇಶಿಗರ ಭೇಟಿಯೇ ಹೆಚ್ಚು!
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಗೆ ಪ್ರತಿ ವರ್ಷ ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಶಿಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವವರಲ್ಲಿ ವಿದೇಶಿಗರೇ ಹೆಚ್ಚು. ಹೀಗೆ ಬಂದ ವಿದೇಶಿಗರಿಗೆ ಸ್ಥಳೀಯ ಯುವಕರು ಗೈಡ್ಗಳಾಗಿ, ಚಾಲಕರಾಗಿ ಅವರು ಇದ್ದಷ್ಟು ದಿನ ಹಂಪಿಯನ್ನು ತೋರಿಸುತ್ತಾರೆ. ಈ ವೇಳೆ ಪ್ರೇಮಾಂಕುರವಾಗಿ ವಿದೇಶಿಗರು ಸ್ಥಳೀಯರನ್ನು ವಿವಾಹವಾಗಿರುವುದು ಕಂಡುಬಂದಿದೆ.
ವಿಶ್ವವಿಖ್ಯಾತ ಹಂಪಿ!ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಹಂಪಿ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಮೀಪದಲ್ಲಿರುವ ಐತಿಹಾಸಿಕ ಸ್ಥಳ ಇದಾಗಿದೆ. ಬೆಂಗಳೂರಿನಿಂದ 340 ಕಿಮೀ, ಮೈಸೂರಿನಿಂದ 425 ಕಿಮೀ ದೂರದಲ್ಲಿ ಹಂಪಿ ಇದೆ. 1336 ರಿಂದ 1565ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಒಡೆಯರಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದು ಜನಪ್ರಿಯವಾಗಿದ್ದ ಸ್ಥಳಗಳಲ್ಲಿ ವಜ್ರಾಭರಣಗಳನ್ನು ಮಾರಾಟ ಮಾಡುತ್ತಿದ್ದರಂತೆ. ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಾಲಯ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಸ್ತಂಭಗಳು, ವಿಶ್ವ ವಿಖ್ಯಾತ ಕಲ್ಲಿನ ರಥ, ಸಾಸಿವೆ ಕಾಳು ಗಣಪತಿ, ಕಮಲ್ ಮಹಲ್, ಉಗ್ರ ನರಸಿಂಹ, ಬಡವಿ ಲಿಂಗ ಇನ್ನು ಅನೇಕ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.
ಬೆಲ್ಜಿಯಂ ಕನ್ಯೆ ಕೆಮಿಲ್ ಅವರು ಸೋಷಿಯಲ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದು, ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬ ಅನಂತರಾಜು ಪ್ರಮಾಣಿಕತೆಗೆ ಮನಸೋತಿತ್ತು. ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ ಆಗಿರುವ ಕೆಮಿಲ್ ಮತ್ತು ಅನಂತರಾಜು ಜೋಡಿ ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹ ಆಗಬೇಕಿತ್ತು. ಆದರೆ, ಕೊರೊನಾ ಮಾಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು.
ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಅಂದುಕೊಂಡಿದ್ದ ಕೆಮಿಲ್ ಕುಟುಂಬ ಶುಕ್ರವಾರ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆಗೆ ಒಪ್ಪಿ, ಗುರುವಾರ ಸಂಜೆ ನಿಶ್ಚಿತಾರ್ಥ ಮಾಡಿಕೊಟ್ಟಿತ್ತು. ಈ ಹಿಂದೆಯೂ ಕೂಡ ಹಂಪಿಯಲ್ಲಿ ಅನೇಕ ವಿದೇಶಿಗರು ಸ್ಥಳೀಯರನ್ನು ವರಿಸಿದ ಉದಾಹರಣೆಗಳು ಇದೆ.
ಹಂಪಿಗೆ ವಿದೇಶಿಗರ ಭೇಟಿಯೇ ಹೆಚ್ಚು!
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಗೆ ಪ್ರತಿ ವರ್ಷ ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಶಿಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವವರಲ್ಲಿ ವಿದೇಶಿಗರೇ ಹೆಚ್ಚು. ಹೀಗೆ ಬಂದ ವಿದೇಶಿಗರಿಗೆ ಸ್ಥಳೀಯ ಯುವಕರು ಗೈಡ್ಗಳಾಗಿ, ಚಾಲಕರಾಗಿ ಅವರು ಇದ್ದಷ್ಟು ದಿನ ಹಂಪಿಯನ್ನು ತೋರಿಸುತ್ತಾರೆ. ಈ ವೇಳೆ ಪ್ರೇಮಾಂಕುರವಾಗಿ ವಿದೇಶಿಗರು ಸ್ಥಳೀಯರನ್ನು ವಿವಾಹವಾಗಿರುವುದು ಕಂಡುಬಂದಿದೆ.
ವಿಶ್ವವಿಖ್ಯಾತ ಹಂಪಿ!ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಹಂಪಿ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಮೀಪದಲ್ಲಿರುವ ಐತಿಹಾಸಿಕ ಸ್ಥಳ ಇದಾಗಿದೆ. ಬೆಂಗಳೂರಿನಿಂದ 340 ಕಿಮೀ, ಮೈಸೂರಿನಿಂದ 425 ಕಿಮೀ ದೂರದಲ್ಲಿ ಹಂಪಿ ಇದೆ. 1336 ರಿಂದ 1565ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಒಡೆಯರಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದು ಜನಪ್ರಿಯವಾಗಿದ್ದ ಸ್ಥಳಗಳಲ್ಲಿ ವಜ್ರಾಭರಣಗಳನ್ನು ಮಾರಾಟ ಮಾಡುತ್ತಿದ್ದರಂತೆ. ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಾಲಯ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಸ್ತಂಭಗಳು, ವಿಶ್ವ ವಿಖ್ಯಾತ ಕಲ್ಲಿನ ರಥ, ಸಾಸಿವೆ ಕಾಳು ಗಣಪತಿ, ಕಮಲ್ ಮಹಲ್, ಉಗ್ರ ನರಸಿಂಹ, ಬಡವಿ ಲಿಂಗ ಇನ್ನು ಅನೇಕ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.