ಆ್ಯಪ್ನಗರ

Reels on Hampi Monuments: ಹಂಪಿ ಸ್ಮಾರಕಗಳ ಅಸುರಕ್ಷತೆಗೆ ಯುನೆಸ್ಕೋ ಬೇಸರ; ಸ್ಮಾರಕದ ಮೇಲೆ ರೀಲ್ಸ್‌, ಸಮೀಪದಲ್ಲೇ ಅಕ್ರಮ ಕಟ್ಟಡ ನಿರ್ಮಾಣವೂ ಕಾರಣ!

Hampi Monuments Insecurity : ಹಂಪಿಯಲ್ಲಿ ಇತ್ತೀಚೆಗೆ ಸ್ಮಾರಕಗಳ ಸಮೀಪ ಸಿಲೆಂಡರ್‌ ಸ್ಪೋಟ, ಮದ್ಯಪಾನ, ರೀಲ್ಸ್‌ ಮಾಡುವ ಘಟನೆ ವರದಿಯಾಗಿದ್ದವು. ಸದ್ಯ ಹಂಪಿ ಸ್ಮಾರಕಗಳ ರಕ್ಷಣೆ ಕುರಿತು ಯುನೆಸ್ಕೋ ಅಸಮಾಧಾನಗೊಂಡಿದೆ.

Edited by ಜಯಪ್ರಕಾಶ್‌ ಬಿರಾದಾರ್‌ | Vijaya Karnataka 14 Mar 2023, 7:53 pm

ಹೈಲೈಟ್ಸ್‌:

  • ವಿಶ್ವ ಪಾರಂಪರಿಕ ತಾಣಗಳ ಪ್ರದೇಶದಲ್ಲಿಅನಧಿಕೃತ ಕಟ್ಟಡ ನಿರ್ಮಾಣ, ಸಂರಕ್ಷಣೆಗೆ ಧಕ್ಕೆ ಸೇರಿ ಇತರ ವಿಷಯಗಳ ಬಗ್ಗೆ ಯುನೆಸ್ಕೋ ಅಸಮಾಧಾನ.
  • ಹಂಪಿಯಲ್ಲಿ ನಿಷೇಧಿತ ವಲಯದಲ್ಲಿಅಕ್ರಮ ಕಟ್ಟಡಗಳ ನಿರ್ಮಾಣ ಕುರಿತ ಮಾಹಿತಿಯನ್ನು ಯುನೆಸ್ಕೋ ಪಡೆದಿದೆ
  • ಶೀಘ್ರವೇ ಹಂಪಿಗೆ ಭೇಟಿ ನೀಡುವ ಸಾಧ್ಯತೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಹಂಪಿ
ಹಂಪಿ ಕಲ್ಲಿನ ರಥ, ಸ್ಮಾರಕಗಳ ಮೇಲೆ ಯುವಕ ನೃತ್ಯ
ಜಯಪ್ಪ ರಾಥೋಡ್‌
ವಿಜಯನಗರ (ಹೊಸಪೇಟೆ): ವಿಶ್ವ ಪಾರಂಪರಿಕ ತಾಣಗಳ ಪ್ರದೇಶದಲ್ಲಿಅನಧಿಕೃತ ಕಟ್ಟಡ ನಿರ್ಮಾಣ, ಸಂರಕ್ಷಣೆಗೆ ಧಕ್ಕೆ ಸೇರಿ ಇತರ ವಿಷಯಗಳ ಬಗ್ಗೆ ಅಸಮಾಧಾನಗೊಂಡಿರುವ ಯುನೆಸ್ಕೋ, ಶೀಘ್ರವೇ ಹಂಪಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲ ಸಮೀಪದ ಹೋಟೆಲ್‌ವೊಂದರಲ್ಲಿ ಕೆಲವು ತಿಂಗಳ ಹಿಂದೆ ಸಿಲಿಂಡರ್‌ ಸ್ಫೋಟಗೊಂಡಿತ್ತು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸದಿದ್ದರೂ ಸ್ಮಾರಕಗಳ ಸಂರಕ್ಷಣೆ ಮಾಡಬೇಕಾದ ಇಲಾಖೆಗಳ ಮೌನ ಹಾಗೂ ನಿಷೇಧಿತ ವಲಯವಾಗಿದ್ದರೂ ಅದೇ ಸ್ಥಳದಲ್ಲಿ ಮತ್ತೆ ಕಟ್ಟಡ ನಿರ್ಮಿಸುತ್ತಿರುವುದನ್ನು ಯುನೆಸ್ಕೋ ಗಂಭೀರವಾಗಿ ಪರಿಗಣಿಸಿದೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಹಂಪಿ ಮತ್ತು ಆನೆಗೊಂದಿ ಸೇರಿ ಸುತ್ತಲಿನ ಪಂಪಾ ಸರೋವರದಲ್ಲಿಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅಂಜನಾದ್ರಿ ರಸ್ತೆ ಅಭಿವೃದ್ಧಿ, ಬುಕ್ಕಸಾಗರದಲ್ಲಿ ಕ್ವಾರಿ ಹಾಗೂ ಹಂಪಿಯಲ್ಲಿ ನಿಷೇಧಿತ ವಲಯದಲ್ಲಿಅಕ್ರಮ ಕಟ್ಟಡಗಳ ನಿರ್ಮಾಣ ಕುರಿತ ಮಾಹಿತಿಯನ್ನು ಯುನೆಸ್ಕೋ ಪಡೆದಿದೆ.

Instagram Influencer Arrest: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ ರೀಲ್ಸ್‌ ರಾಜ ದೀಪಕ್‌ಗೌಡ ಬಂಧನ

ಭದ್ರತಾ ವೈಫಲ್ಯ

ಭದ್ರತಾ ವೈಫಲ್ಯದಿಂದ ವಿಶ್ವ ವಿಖ್ಯಾತ ಹಂಪಿಯಲ್ಲಿಇತ್ತೀಚೆಗೆ ಕೆಲವು ಅವಘಡಗಳು ಬೆಳಕಿಗೆ ಬಂದಿವೆ. ಯುನೆಸ್ಕೋ ಮೇಲಿಂದ ಮೇಲೆ ನೀಡಿದ ಎಚ್ಚರಿಕೆಯನ್ನು ಸ್ಥಳೀಯ ಇಲಾಖೆಗಳು ಪಾಲಿಸುತ್ತಿಲ್ಲಎಂಬ ಆರೋಪವಿದೆ. ಪುರಂದರದಾಸರ ಮಂಟಪದಲ್ಲಿ ಕೆಲವು ವಿದೇಶಿಗರಿಂದ ಮದ್ಯಪಾನ, ಸ್ಮಾರಕದ ಮೇಲೆ ಯುವಕನೊಬ್ಬನ ನೃತ್ಯ, ವಿರೂಪಾಕ್ಷೇಶ್ವರ ದೇಗುಲದ ಬಳಿ ಹೋಟೆಲ್‌ನಲ್ಲಿ ಸಿಲಿಂಡರ್‌ ಸ್ಫೋಟ ಸೇರಿ ಇನ್ನೂ ಕೆಲವು ಘಟನೆಗಳು ಹಂಪಿ ಸಂರಕ್ಷಣೆಯ ಬಗ್ಗೆ ಅನುಮಾನ ಮೂಡಿಸಿವೆ.

ಭಾರತೀಯ ಪುರಾತತ್ವ ಇಲಾಖೆಯಿಂದ ಈ ಕುರಿತು ಯುನೆಸ್ಕೋ ಮಾಹಿತಿ ಕೋರಿದೆ. ಇಲಾಖೆ ನಿರ್ದೇಶಕರು ಇತ್ತೀಚೆಗೆ ಹಂಪಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಇದೇ ಮಾಹಿತಿಯನ್ನು ಯುನೆಸ್ಕೋಗೆ ಕಳಿಸಲಿದ್ದಾರೆ. ಮಾಹಿತಿ ಪರಿಶೀಲಿಸಿದ ನಂತರ ಯುನೆಸ್ಕೋ ತಂಡ ಶೀಘ್ರವೇ ಹಂಪಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪುರಾತತ್ವ ಇಲಾಖೆಗೆ ನಿರ್ದೇಶಕರು ಈಗಾಗಲೇ ಭೇಟಿ

ಈ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಮಾತನಾಡಿ, ಹಂಪಿ ಪರಂಪರೆ ತಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆ ಹಾಗೂ ಕಟ್ಟಡಗಳ ನಿರ್ಮಾಣ ಕುರಿತು ಯುನೆಸ್ಕೋ, ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ಕೇಳಿದೆ. ಹವಾಮಾನ ವ್ಯಾಪ್ತಿಯ ಪ್ರದೇಶಲ್ಲಿ ಕಟ್ಟಡ ನಿರ್ಮಾಣ, ದುರಸ್ತಿ ಕೆಲಸಗಳು ಎಎಸ್‌ಐ ಅನುಮತಿ ಪಡೆದು ಮಾಡಲಾಗುತ್ತಿದೆಯಾ ಎಂದು ಕೇಳಿತ್ತು. ಈ ಕುರಿತು ಇಲಾಖೆಯ ನಿರ್ದೇಶಕರು ಈಗಾಗಲೇ ಭೇಟಿ ನೀಡಿ ಹೋಗಿದ್ದಾರೆ ಎಂದು ತಿಳಿಸಿದರು.


ಇತ್ತೀಚೆಗೆ ರೀಲ್ಸ್‌ ಮಾಡಿದ್ದ ದೀಪಕ್‌ ಗೌಡ

ದೀಪಕ್‌ ಗೌಡ ಎಂಬ ಯುವಕನೊಬ್ಬ ಹಂಪಿ ಸ್ಮಾರಕಗಳ ಮೇಲೆ ರೀಲ್ಸ್‌ ಮಾಡಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಹಂಪಿ ಸ್ಮಾರಕಗಳ ರಕ್ಷಣೆ ಬಗ್ಗೆ ಸಾರ್ವಜನಿಕರು ಬೇಸರವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ಪೊಲೀಸ್‌ ಠಾಣೆಗ ದೂರು ನೀಡಿದ್ದರು. ಪೊಲೀಸರು ಬಂಧಿಸಿದ್ದರು.
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ