ಆ್ಯಪ್ನಗರ

ವಿಜಯನಗರ: ಯಾರಿಗೆ ಒಲಿಯುತ್ತೆ ಟಿಕೆಟ್‌..? ಸಚಿವ ಆನಂದ್‌ ಸಿಂಗ್‌ ನಡೆ ನಿಗೂಢ..!

ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಇರುವಾಗಲೇ ವಿಜಯನಗರ ಕ್ಷೇತ್ರದಲ್ಲಿ ಹಲವು ಮುಖಂಡರು ಕ್ಷೇತ್ರ ಪರ್ಯಟನೆ ನಡೆಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಮತ್ತೆ ವಲಸಿಗರ ಪಾಲಾಗಲಿದೆಯೇ? ಅಥವಾ ಸ್ಥಳೀಯರ ಪಾಲಾಗಲಿದೆಯೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಆನಂದ್‌ ಸಿಂಗ್‌ ಅವರು ಕಾಂಗ್ರೆಸ್‌ ಸೇರಿ ವಿಜಯಶಾಲಿಯಾಗಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ಅವರು ಪಕ್ಷಾಂತರ ಮಾಡಿದರು. 2019ರಲ್ಲಿ ಬಿಜೆಪಿಗೆ ಮರಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸದ್ಯ ಸಚಿವರಾಗಿರುವ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

Vijaya Karnataka 29 Jul 2022, 9:05 am

ಹೈಲೈಟ್ಸ್‌:

  • ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಆಂತರಿಕ ಸಮೀಕ್ಷೆ
  • ಭಿನ್ನಾಭಿಪ್ರಾಯದಿಂದ ದೂರವಿರಲು ಹಿರಿಯರ ಸೂಚನೆ
  • 'ಕೈ' ಟಿಕೆಟ್ ಯಾರ ಪಾಲಾಗಲಿದೆ ಎಂಬ ಬಗ್ಗೆ ಚರ್ಚೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Anand singh
ಸಾಂದರ್ಭಿಕ ಚಿತ್ರ
ಜಯಪ್ಪ ರಾಥೋಡ್‌
ವಿಜಯನಗರ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಇರುವಾಗಲೇ ವಿಜಯನಗರ ಕ್ಷೇತ್ರದಲ್ಲಿ ಹಲವು ಮುಖಂಡರು ಕ್ಷೇತ್ರ ಪರ್ಯಟನೆ ನಡೆಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಮತ್ತೆ ವಲಸಿಗರ ಪಾಲಾಗಲಿದೆಯೇ? ಅಥವಾ ಸ್ಥಳೀಯರ ಪಾಲಾಗಲಿದೆಯೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಆನಂದ್‌ ಸಿಂಗ್‌ ಅವರು ಕಾಂಗ್ರೆಸ್‌ ಸೇರಿ ವಿಜಯಶಾಲಿಯಾಗಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ಅವರು ಪಕ್ಷಾಂತರ ಮಾಡಿದರು. 2019ರಲ್ಲಿ ಬಿಜೆಪಿಗೆ ಮರಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸದ್ಯ ಸಚಿವರಾಗಿರುವ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಂತೆ ಸಚಿವ ಸಿಂಗ್‌ ಅವರು, ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡುವ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಕಾರ್ಯಕಾರಿಣಿ ಸಭೆ: ಚುನಾವಣಾ ರಣತಂತ್ರದ ಚರ್ಚೆ; ನಡ್ಡಾ ನೀಡಲಿರುವ ಸಲಹೆ ಸೂಚನೆಗಳೇನು?
2004ರಲ್ಲಿ ಪಕ್ಷೇತರ ಅಭ್ಯರ್ಥಿ ಎಚ್‌.ಆರ್‌.ಗವಿಯಪ್ಪ ಅವರು 7,725 ಮತಗಳ ಅಂತರದಿಂದ ಜಯಗಳಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಗುಜ್ಜಲ್‌ ಜಯಲಕ್ಷ್ಮೀ ಅವರು ಜಯ ಸಾಧಿಸಿದ್ದು ಬಿಟ್ಟರೆ, 2008, 2013, 2018, 2019ರಲ್ಲಿ ನಡೆದ ಚುನಾವಣೆಗಳಲ್ಲಿ ಆನಂದ್‌ ಸಿಂಗ್‌ ಅವರು ಸತತ ಗೆಲುವು ಕಾಪಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕಿಂತಲೂ ವೈಯಕ್ತಿಕ ವರ್ಚಸ್ಸಿಗೆ ಹೆಚ್ಚಿನ ಬೆಲೆಯಿದೆ ಎಂಬ ಮಾತು ಜನಜನಿತವಾಗಿದೆ.

ಆಕಾಂಕ್ಷಿಗಳ ವಿಭಿನ್ನ ಚಟುವಟಿಕೆ:

ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ 2018ರಲ್ಲಿ ಆನಂದ್‌ ಸಿಂಗ್‌ ಕಾಂಗ್ರೆಸ್‌ ಸೇರಿದ್ದರಿಂದ ಗವಿಯಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. 2019ರ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ ಬಿಜೆಪಿಯಿಂದ ಸ್ಪರ್ಧಿಸಿದಾಗ ಗವಿಯಪ್ಪ ತಟಸ್ಥರಾಗಿದ್ದರು. ಈ ಚುನಾವಣೆಯಲ್ಲಿ ವೆಂಕಟರಾವ್‌ ಘೋರ್ಪಡೆ ಅವರನ್ನು ಕಾಂಗ್ರೆಸ್‌ ಕೊನೆಯ ಕ್ಷಣದ ಅಭ್ಯರ್ಥಿಯಾಗಿ ಘೋಷಿಸಿತ್ತು. ಆಗ ವಲಸೆ ಅಭ್ಯರ್ಥಿ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಈಗಲೂ ಸ್ಥಳೀಯವಾಗಿ ಕಾಂಗ್ರೆಸ್‌ಗೆ ಗಟ್ಟಿ ನಾಯಕತ್ವ ಇಲ್ಲದ ಆರೋಪ ಹಿನ್ನೆಲೆ ಬೇರೆ ಜಿಲ್ಲೆಯವರು ಟಿಕೆಟ್‌ ನಿರೀಕ್ಷೆಯೊಂದಿಗೆ ವಲಸೆ ಮುಂದುವರಿದಿದೆ.

ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್‌ ಅವರು, ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ಎಂಬ ಮಾತು ಕಾಂಗ್ರೆಸ್‌ ವಲಯದಿಂದ ಕೇಳಿಬಂದಿದೆ. ನಾನಾ ಆಕಾಂಕ್ಷಿಗಳು ಈಗಾಗಲೇ ಹಳ್ಳಿ-ಹಳ್ಳಿಗಳಲ್ಲಿ ಹಬ್ಬ, ಮದುವೆ ಸಮಾರಂಭ ಹಾಗೂ ಯುವಕರಿಗೆ ಕ್ರಿಕೆಟ್‌ ಟೂರ್ನಮೆಂಟ್‌ ಆಯೋಜನೆ ಸೇರಿ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಎಚ್‌.ಆರ್‌. ಗವಿಯಪ್ಪ, ಸಚಿವರ ಪುತ್ರ ಸಿದ್ದಾರ್ಥ್ ಸಿಂಗ್‌, ರಾಜಶೇಖರ ಹಿಟ್ನಾಳ್‌, ಇಮಾಮ್‌ ನಿಯಾಜಿ ಅವರು ಕ್ಷೇತ್ರ ಪರ್ಯಟನೆಯಲ್ಲಿ ಮುಂದಿದ್ದಾರೆ.

Vice President Election: ಇದು ಪ್ರತೀಕಾರದ ಸಮಯವಲ್ಲ: ಮಮತಾಗೆ ಮಾರ್ಗರೇಟ್ ಆಳ್ವ ಮನವಿ
ಕೈಪಡೆಯ ಒಗ್ಗಟ್ಟಿನ ಮಂತ್ರ:

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷ ಆಂತರಿಕ ಸಮೀಕ್ಷೆ ನಡೆಸಿದೆ. ಅತಿ ಹೆಚ್ಚು ಜನಪ್ರಿಯತೆ ಹೊಂದಿರುವವರಿಗೆ ಟಿಕೆಟ್‌ ನೀಡಲು ಚಿಂತನೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್‌ ಸಿಗಲೂಬಹುದು ಎನ್ನಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಈ ಬಾರಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಪಕ್ಷದಲ್ಲಿ ಒಡಕು, ಭಿನ್ನಾಭಿಪ್ರಾಯಗಳನ್ನು ಬಿಟ್ಟು ಯಾರಿಗೇ ಟಿಕೆಟ್‌ ನೀಡಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಅವರ ಗೆಲುವಿಗೆ ಶ್ರಮಿಸುವ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಆಂತರಿಕ ಸಮೀಕ್ಷೆ ನಡೆಸುತ್ತಿದೆ. ಅತಿ ಹೆಚ್ಚಿನ ಜನಪ್ರಿಯತೆ ಹೊಂದಿದವರಿಗೆ ಟಿಕೆಟ್‌ ಕೊಡಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಹೇಳಿದ್ರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ