ಆ್ಯಪ್ನಗರ

ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಸವಾರರಿಬ್ಬರು ಸಾವು

ಬೈಕ್‌ನಲ್ಲಿ ಕುಳಿತಿದ್ದ ಸವಾರರಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದಾಗಿ ಗಂಭೀರ ಗಾಯಗೊಂಡ ವ್ಯಕ್ತಿಗಳಿಬ್ಬರು ಮೃತಪಟ್ಟ ಘಟನೆ ಮಿರಗಿ ಬಳಿ ಸಂಭವಿಸಿದೆ.

ವಿಕ ಸುದ್ದಿಲೋಕ 24 Mar 2016, 8:26 pm
ವಿಜಯಪುರ: ಬೈಕ್‌ನಲ್ಲಿ ಕುಳಿತಿದ್ದ ಸವಾರರಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದಾಗಿ ಗಂಭೀರ ಗಾಯಗೊಂಡ ವ್ಯಕ್ತಿಗಳಿಬ್ಬರು ಮೃತಪಟ್ಟ ಘಟನೆ ಮಿರಗಿ ಬಳಿ ಸಂಭವಿಸಿದೆ.
Vijaya Karnataka Web
ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಸವಾರರಿಬ್ಬರು ಸಾವು


ಸಿಂದಗಿಯ ವಿನೋದ ಮಾಹುರ (18) ಹಾಗೂ ಅ್ಜಲ್‌ಪುರದ ಶಿವರಾಜ ಅಪ್ಪಾಸಾಬ ನಾಮಗೊಂಡ (18) ಮೃತಪಟ್ಟವರು. ವಿಜಯಪುರ ಘಟಕ ನಂ.2ರ ಚಾಲಕ ಲಕ್ಷ್ಮಣ ರೋಡಗಿ ಆರೋಪಿ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸಾವು: ಬೈಕ್ ಸ್ಕಿಡ್ ಆಗಿದ್ದರಿಂದ ಹಿಂದೆ ಕುಳಿತಿದ್ದ ಮಹಿಳೆ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಾಗಠಾಣ-ಜಂಬಗಿ ರಸ್ತೆಯಲ್ಲಿ ನಡೆದಿದೆ.

ನಾಗಠಾಣದ ಸಾಹೇಬ್ಬಿ ನಬಿಸಾಬ ವಂದಾಲ (42) ಮೃತಪಟ್ಟ ಮಹಿಳೆ. ನಬಿಸಾಬ ವಂದಾಲ ಬೈಕ್ ಸವಾರ. ಈತ ನಾಗಠಾಣದಿಂದ ಜಂಬಗಿ ಕಡೆಗೆ ಪತ್ನಿಯೊಂದಿಗೆ ಹೊರಟಿದ್ದಘಿ. ಮಾರ್ಗ ಮಧ್ಯೆದಲ್ಲಿ ಬೈಕ್‌ಗೆ ನಾಯಿ ಅಡ್ಡ ಬಂತು. ಆ ಶ್ವಾನದ ಜೀವ ಕಾಪಾಡಬೇಕೆಂಬ ಕಾರಣಕ್ಕೆ ಸವಾರ ಏಕಾಏಕಿ ಬ್ರೇಕ್ ಹಾಕಿದ. ಬೈಕ್ ಸ್ಕಿಡ್ ಆಯಿತು. ಆಗ ಹಿಂದೆ ಕುಳಿತಿದ್ದ ಪತ್ನಿ ಸಾಹೇಬ್ಬಿ ಕೆಳಕ್ಕೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆದಲ್ಲಿ ಸಾಹೇಬ್ಬಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಕಾಣೆ: ಬಹಿರ್ದೆಸೆಗೆ ಹೋಗಿದ್ದ ಯುವತಿಯೊಬ್ಬರು ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದಿಂದ ಕಾಣೆಯಾಗಿದ್ದಾರೆ. ಗ್ರಾಮದ ಕಸ್ತೂರಿಬಾಯಿ ಪರಸಪ್ಪ ಮುರಾಳ (22) ಕಾಣೆಯಾದವರು. ಜ.6ರಂದು ಬೆಳಗ್ಗೆ 11ಗಂಟೆಗೆ ಹೊರಗೆ ಹೋದವಳು ಇಲ್ಲಿಯವರೆಗೂ ಮನೆಗೆ ಮರಳಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುದ್ದೇಬಿಹಾಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ