ಆ್ಯಪ್ನಗರ

ಸ್ಪರ್ಧಾ ಮನೋಭಾವನೆಯಿಂದ ಅಭ್ಯಾಸ ಮಾಡಿ

ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ವಿದ್ಯಾಭ್ಯಾಸ ಮಾಡಿ ಮುಂದೆ ಬರಬೇಕು. ಓದಿನಲ್ಲಿ ಸದಾ ಮುಂದಿದ್ದು, ಹೆಚ್ಚಿನ ಅಂಕ ಗಳಿಸುವತ್ತ ಲಕ್ಷೃವಿಟ್ಟು ಗುರಿ ಮುಟ್ಟಬೇಕು. ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ತಿಳಿಸಿದರು.

ವಿಕ ಸುದ್ದಿಲೋಕ 24 Mar 2016, 8:40 pm
ದೇವರಹಿಪ್ಪರಗಿ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ವಿದ್ಯಾಭ್ಯಾಸ ಮಾಡಿ ಮುಂದೆ ಬರಬೇಕು. ಓದಿನಲ್ಲಿ ಸದಾ ಮುಂದಿದ್ದು, ಹೆಚ್ಚಿನ ಅಂಕ ಗಳಿಸುವತ್ತ ಲಕ್ಷೃವಿಟ್ಟು ಗುರಿ ಮುಟ್ಟಬೇಕು. ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ತಿಳಿಸಿದರು.
Vijaya Karnataka Web
ಸ್ಪರ್ಧಾ ಮನೋಭಾವನೆಯಿಂದ ಅಭ್ಯಾಸ ಮಾಡಿ


ಸಮೀಪದ ಜಾಲವಾದ ಗ್ರಾಮದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣವು ಒಂದು ತಪಸ್ಸು ಇದ್ದಂತೆ ಅದನ್ನು ಪಡೆಯುವವರೆಗೆ ಸಾಧನೆ ಮಾಡುತ್ತಲೇ ಇರಬೇಕು. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಬದುಕು ಕಟ್ಟಿಕೊಳ್ಳಬೇಕು. ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಸ್ವಾವಲಂಬಿ ಜೀವನ ಸಾಗಿಸಲು ಉತ್ತಮ ಶಿಕ್ಷಣ ಪಡೆದು ಹೆತ್ತ ಮನೆ, ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಅಂತರಾಷ್ಟ್ರೀಯ ಕಲಾವಿದ ರಾವುತ್ ತಳಕೇರಿ, ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮದ್ಯೆ ಜೀವನ ನಡೆಸದೆ ಪುರುಷನಿಗೆ ಸರಿ ಸಮನಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಮೂಢನಂಬಿಕೆ, ಕೆಟ್ಟ ಸಂಪ್ರದಾಯಗಳಿಗೆ ಜೋತು ಬೀಳದೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಸಮಾಜಮುಖಿಯಾಗಿ ಬದುಕು ಸಾಗಿಸಬೇಕು. ಅದಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಸಿದ್ಧರಾಗಬೇಕು ಎಂದರು.

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಹೇಶ ಪೊದ್ದಾರ, ತಾಲೂಕು ವಿಸ್ತರಣಾಕಾರಿ ಎಸ್.ಆರ್.ರಾಠೋಡ, ವಸತಿ ನಿಲಯದ ನಿಲಯ ಪಾಲಕಿ ನಫೀಸುನ್ನೀಸಾಬೇಗಂ ಮಾತನಾಡಿದರು. ವೇದಿಕೆಯ ಮೇಲೆ ದೇವರಹಿಪ್ಪರಗಿ ವಸತಿ ನಿಲಯದ ನಿಲಯ ಪಾಲಕ ಎಂ.ಎಂ.ದೇದಾರ, ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಪರತಕಾತೂನ ಅತನೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ರಾಜೇಶ್ವರಿ ಚೌಹಾಣ್ ಸ್ವಾಗತಿಸಿದರು. ಜ್ಯೋತಿ ರಾಠೋಡ ನಿರೂಪಿಸಿದರು. ತೃಪ್ತಿ ಕನ್ನೊಳ್ಳಿ ವಂದಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪಾಲಕರು, ವಸತಿ ನಿಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ