ದೇವರಹಿಪ್ಪರಗಿ: ಪಟ್ಟಣದಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಎಲ್ಲ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ 1ನೇ ವಾರ್ಡ್ನ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪಪಂಗೆ ಬೀಗ ಜಡಿದರು.
ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. 1ನೇ ವಾರ್ಡ್ಗೆ ಒಂದು ತಿಂಗಳಿಂದ ನೀರು ಬಂದಿಲ್ಲ. ವಾರ್ಡ್ದಲ್ಲಿನ ಕೊಳವೆ ಬಾವಿ ಒಣಗಿ ಹೋಗಿವೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ರಾಜು ಮೆಟಗಾರ ಮಾತನಾಡಿ, ಪಪಂ ಮುಖ್ಯಾಧಿಕಾರಿಗಳು ಒಂದನೇ ವಾರ್ಡ್ನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಜತೆಗೆ ಒಳಚರಂಡಿಗಳು ತುಂಬಿ ಹೋಗಿವೆ. ಸ್ವಚ್ಛತೆ ಮರಿಚೀಕೆಯಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಲೀಂ ನದಾಫ್, ಅಪ್ಪು ಮನಿಯಾರ್, ಕಾಸು ಕೋರಿ, ಆನಂದ ಸದ್ಯನಮಠ, ಶಿವು ಡೋಣೂರ, ಅಪ್ಪಾಜಿ ಬಾಣಕರ, ಫಾತೀಮಾ ಮೇಸ್ತ್ರಿ, ನಸೀಮಾ ಬಾಗವಾನ, ಲತಾ ಬಾಸೂತಕರ, ಪದ್ಮಾ ಬಾಸೂತಕರ, ಸೋನಂ ಕಸಾಬ ಸೇರಿದಂತೆ ಮತ್ತಿತರರಿದ್ದರು.
....
ಮಳೆ ಅಭಾವದಿಂದ ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆ ಬಾವಿಗಳು ಒಣಗುತ್ತಿವೆ. ಹೀಗಾಗಿ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದೆ. ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಜತೆಗೆ ಹಂತಹಂತವಾಗಿ ಪಟ್ಟಣದ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು.
ಎಲ್.ಡಿ.ಮುಲ್ಲಾ, ಮುಖ್ಯಾಧಿಕಾರಿ ಪಪಂ