ವಿಜಯಪುರ: ಸಾಲಬಾಧೆ ತಾಳದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಿಂದಗಿ ತಾಲೂಕಿನ ಮುಳಸಾವಳಗಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ವಿರೂಪಾಕ್ಷ ಶರಣಪ್ಪ ನಾಗರಳ್ಳಿ (42) ಆತ್ಮಹತ್ಯೆಗೀಡಾದ ರೈತ. ಕೃಷಿಗಾಗಿ ನಾನಾ ಬ್ಯಾಂಕ್ಗಳಲ್ಲಿ 4 ಲಕ್ಷ ಹಾಗೂ ಗ್ರಾಮದಲ್ಲಿ 4 ಲಕ್ಷ ರೂ. ಕೈಸಾಲ ಮಾಡಿದ್ದ. ಆದರೆ ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರುಪಾವತಿಗೆ ಚಿಂತಿತನಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ದೇವರಹಿಪ್ಪರಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.