ಆ್ಯಪ್ನಗರ

ಯೋಧ ಕಾಣೆ

ಬಸವನಬಾಗೇವಾಡಿ : ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ, ಯೋಧ ಭೀಮರಾಯ ಸುಬ್ಬಪ್ಪ (ಸುಭಾಸ) ಮಾದರ (25) ಮನೆಯಿಂದ ಕಾಣೆಯಾಗಿದ್ದಾನೆ.

Vijaya Karnataka 10 Aug 2018, 5:00 am
ಬಸವನಬಾಗೇವಾಡಿ : ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ, ಯೋಧ ಭೀಮರಾಯ ಸುಬ್ಬಪ್ಪ (ಸುಭಾಸ) ಮಾದರ (25) ಮನೆಯಿಂದ ಕಾಣೆಯಾಗಿದ್ದಾನೆ.
Vijaya Karnataka Web
ಯೋಧ ಕಾಣೆ


ರಾಜಸ್ತಾನದಲ್ಲಿ 5 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ವಾರಗಳ ಹಿಂದೆ ಸ್ವಗ್ರಾಮ ಬಸವನಬಾಗೇವಾಡಿ ತಾಲೂಕಿನ ಬೂದಿಹಾಳಕ್ಕೆ ಬಂದಿದ್ದ. ಜು.25ರಂದು ಮನೆಯಿಂದ ಬೈಕ್‌ ತೆಗೆದುಕೊಂಡು ಹೋದವ ಮರಳಿ ಬಂದಿಲ್ಲ ಎಂದು ಯೋಧನ ತಂದೆ ಸುಭಾಸ ಬಸವನಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಂದು ಬಣ್ಣದ ಅಂಗಿ, ನಾಶಿ ಬಣ್ಣದ ಪ್ಯಾಂಟ್‌ ಧರಿಸಿದ್ದಾನೆ. 5 ಫೂಟ್‌ 9 ಇಂಚ್‌ ಎತ್ತರವಾಗಿದ್ದಾನೆ. ಯೋಧನ ದೀಢಿರ್‌ ಕಣ್ಮರೆ ಬಂಧುಗಳಿಗೆ ಆತಂಕ ತಂದಿದೆ. ಏತನ್ಮಧ್ಯೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ