ವಿಜಾಪುರ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾನೂ ಕೂಡ ಪ್ರಬಲ ಆಕಾಂಕ್ಷಿ ಎಂದು ಮಾಜಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಹೇಳಿದ್ದಿಷ್ಟು: ಕೆಜೆಪಿ ಬಿಜೆಪಿಗೆ ವಿಲೀನಗೊಂಡ ತಕ್ಷಣವೇ ನಾನು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಗೆ 1.20 ಲಕ್ಷ ಮತ ಲಭಿಸಿವೆ. ಹೀಗಾಗಿ ಬಿಜೆಪಿಗೆ ಕೆಜೆಪಿ ಕಾರ್ಯಕರ್ತರನ್ನು ಸೇರಿಸಲು ಬೃಹತ್ ಸಮಾವೇಶ ನಡೆಸಬೇಕೆಂದು ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿನಂತಿಸಲಾಗಿದೆ.
ಬಿಜೆಪಿಗೆ ಮತ್ತೆ ಸೇರಿದ ಮೇಲೆ ಕೋರ್ ಕಮಿಟಿ ಸಭೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ವಿಜಾಪುರ ಸೇರಿದಂತೆ 8 ಲೋಕಸಭೆ ಕ್ಷೇತ್ರಗಳಲ್ಲಿ ಪುನಃ ಸಮೀಕ್ಷೆ ಮಾಡಿಸಿ ಪಕ್ಷದ ಕಾರ್ಯಕರ್ತರು ಹಾಗೂ ಜನತೆಯ ಅಭಿಮತ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಅದರಂತೆ ಸಮೀಕ್ಷೆ ಕೂಡ ನಡೆದಿದೆ. ಸಭೆಯಲ್ಲಿ ನನ್ನ ಸ್ಪರ್ಧೆ ಬಗ್ಗೆಯೂ ಪ್ರಸ್ತಾಪವಾಗಿ ಡಿ.ವಿ.ಸದಾನಂದಗೌಡ, ಅನಂತಕುಮಾರ ಸೇರಿದಂತೆ ಎಲ್ಲ ನಾಯಕರು ಸಮ್ಮತಿ ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷನಾಗಿ ದುಡಿದ್ದೇನೆ. ಅಲ್ಲದೆ, ನಾಗಠಾಣ ಕ್ಷೇತ್ರದ ಶಾಸಕನಾಗಿದ್ದಾಗ ರಾಜ್ಯದಲ್ಲೇ ಅತಿ ಹೆಚ್ಚು ಬಾಂದಾರಗಳು, ರಸ್ತೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅವಕಾಶ ಕೊಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಸಂಸದ ರಮೇಶ ಜಿಗಜಿಣಗಿಯವರು ತಮಗೆ ಟಿಕೆಟ್ ನೀಡಲು ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲೇ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಕೋರ್ ಕಮಿಟಿ ಸಭೆಯಲ್ಲಿ ನಾನು ಇದ್ದೆ. ಯಡಿಯೂರಪ್ಪನವರು ಹಾಗೆ ಹೇಳೇ ಇಲ್ಲ ಎಂದು ವಿಠ್ಠಲ ಕಟಕದೊಂಡ ಉತ್ತರಿಸಿದರು.
ಮುಖಂಡರಾದ ರಾಜೇಂದ್ರಗೌಡ ರಾಯಗೊಂಡ, ಸಂಗರಾಜ ದೇಸಾಯಿ, ರವಿ ಖಾನಾಪುರ ಉಪಸ್ಥಿತರಿದ್ದರು.
ನಮ್ಮ ಹಕ್ಕು ಕೊಡಿಸಿ :
ನೆರೆಯ ಗುಲ್ಬರ್ಗಕ್ಕೆ ಕಲಂ 371ರನ್ವಯ ವಿಶೇಷ ಸೌಲಭ್ಯ ಸಿಗಲಿವೆ. ವಿಜಾಪುರ ಜಿಲ್ಲೆ ಕೂಡ ಅತೀ ಹಿಂದುಳಿದಿದೆ. ಈ ಜಿಲ್ಲೆ ಸೇರಿಸಬೇಕೆಂದು ಲೋಕಸಭೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತಲಿಲ್ಲ. ವಿಶೇಷ ಸೌಲಭ್ಯ ನಮಗೂ ಬೇಕೆಂಬ ಹೋರಾಟದ ಕಿಚ್ಚು ಹಚ್ಚಿಸಲಿಲ್ಲ ಎಂದು ಕಟಕದೊಂಡ ಯಾರ ಹೆಸರನ್ನೂ ಪ್ರಸ್ತಾಪಿಸದೆ ಆರೋಪಿಸಿದರು.
ಕೃಷ್ಣಾ ಮತ್ತು ಭೀಮಾನದಿ ಜಿಲ್ಲೆಗೆ 2 ಕಣ್ಣುಗಳಂತಿದ್ದರೂ ಮಹಾರಾಷ್ಟ್ರ ಹೆಚ್ಚು ನೀರು ಸಂಗ್ರಹಿಸಿ, ಬಳಸುತ್ತಿದೆ. ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಲ್ಲಿ ಜೂನ್ ತಿಂಗಳಲ್ಲಿ ಆಂಧ್ರಕ್ಕೆ 8-10 ಟಿಎಂಸಿ ನೀರು ಬೇಕೆಂದು ಸೂಚಿಸಿದ್ದು ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಭೀಮಾ ನದಿಯಿಂದ ನಮಗೆ ಸಿಗಬೇಕಾದ 15 ಟಿಎಂಸಿ ನೀರು ಸಿಕ್ಕಿಲ್ಲ. ಭೀಮಾನದಿಯ ತಿರುವು ಕಾರ್ಯ ನಡೆದಿದ್ದು, ಕರ್ನಾಟಕ ಭಾಗದ ನದಿ ಬತ್ತಿ ಹೋಗುತ್ತಿದೆ ಎಂದು ದೂರಿದರು.
ನಮ್ಮ ಜಿಲ್ಲೆಯವರೇ ಆದ ಎಂ.ಬಿ.ಪಾಟೀಲರು ನೀರಾವರಿ ಹೋರಾಟದಿಂದಲೇ ನೀರಾವರಿ ಸಚಿವರಾಗಿರುವುದು ಸಂತಸ. ಈ ಹಿಂದೆ ಯರನಾಳ ಶ್ರೀಗಳ ನೇತೃತ್ವದಲ್ಲಿ ಅವರು ನೀರಾವರಿಗೆ ಸಂಬಂಧಿಸಿದಂತೆ 12 ಬೇಡಿಕೆಗಳನ್ನು ಸಲ್ಲಿಸಿದ್ದರು. ಈಗ ಅವರು ನಮ್ಮ ಹಕ್ಕು ಕೊಡಿಸಬೇಕು ಎಂದು ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಹೇಳಿದ್ದಿಷ್ಟು: ಕೆಜೆಪಿ ಬಿಜೆಪಿಗೆ ವಿಲೀನಗೊಂಡ ತಕ್ಷಣವೇ ನಾನು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಗೆ 1.20 ಲಕ್ಷ ಮತ ಲಭಿಸಿವೆ. ಹೀಗಾಗಿ ಬಿಜೆಪಿಗೆ ಕೆಜೆಪಿ ಕಾರ್ಯಕರ್ತರನ್ನು ಸೇರಿಸಲು ಬೃಹತ್ ಸಮಾವೇಶ ನಡೆಸಬೇಕೆಂದು ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿನಂತಿಸಲಾಗಿದೆ.
ಬಿಜೆಪಿಗೆ ಮತ್ತೆ ಸೇರಿದ ಮೇಲೆ ಕೋರ್ ಕಮಿಟಿ ಸಭೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ವಿಜಾಪುರ ಸೇರಿದಂತೆ 8 ಲೋಕಸಭೆ ಕ್ಷೇತ್ರಗಳಲ್ಲಿ ಪುನಃ ಸಮೀಕ್ಷೆ ಮಾಡಿಸಿ ಪಕ್ಷದ ಕಾರ್ಯಕರ್ತರು ಹಾಗೂ ಜನತೆಯ ಅಭಿಮತ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಅದರಂತೆ ಸಮೀಕ್ಷೆ ಕೂಡ ನಡೆದಿದೆ. ಸಭೆಯಲ್ಲಿ ನನ್ನ ಸ್ಪರ್ಧೆ ಬಗ್ಗೆಯೂ ಪ್ರಸ್ತಾಪವಾಗಿ ಡಿ.ವಿ.ಸದಾನಂದಗೌಡ, ಅನಂತಕುಮಾರ ಸೇರಿದಂತೆ ಎಲ್ಲ ನಾಯಕರು ಸಮ್ಮತಿ ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷನಾಗಿ ದುಡಿದ್ದೇನೆ. ಅಲ್ಲದೆ, ನಾಗಠಾಣ ಕ್ಷೇತ್ರದ ಶಾಸಕನಾಗಿದ್ದಾಗ ರಾಜ್ಯದಲ್ಲೇ ಅತಿ ಹೆಚ್ಚು ಬಾಂದಾರಗಳು, ರಸ್ತೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅವಕಾಶ ಕೊಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಸಂಸದ ರಮೇಶ ಜಿಗಜಿಣಗಿಯವರು ತಮಗೆ ಟಿಕೆಟ್ ನೀಡಲು ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲೇ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಕೋರ್ ಕಮಿಟಿ ಸಭೆಯಲ್ಲಿ ನಾನು ಇದ್ದೆ. ಯಡಿಯೂರಪ್ಪನವರು ಹಾಗೆ ಹೇಳೇ ಇಲ್ಲ ಎಂದು ವಿಠ್ಠಲ ಕಟಕದೊಂಡ ಉತ್ತರಿಸಿದರು.
ಮುಖಂಡರಾದ ರಾಜೇಂದ್ರಗೌಡ ರಾಯಗೊಂಡ, ಸಂಗರಾಜ ದೇಸಾಯಿ, ರವಿ ಖಾನಾಪುರ ಉಪಸ್ಥಿತರಿದ್ದರು.
ನಮ್ಮ ಹಕ್ಕು ಕೊಡಿಸಿ :
ನೆರೆಯ ಗುಲ್ಬರ್ಗಕ್ಕೆ ಕಲಂ 371ರನ್ವಯ ವಿಶೇಷ ಸೌಲಭ್ಯ ಸಿಗಲಿವೆ. ವಿಜಾಪುರ ಜಿಲ್ಲೆ ಕೂಡ ಅತೀ ಹಿಂದುಳಿದಿದೆ. ಈ ಜಿಲ್ಲೆ ಸೇರಿಸಬೇಕೆಂದು ಲೋಕಸಭೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತಲಿಲ್ಲ. ವಿಶೇಷ ಸೌಲಭ್ಯ ನಮಗೂ ಬೇಕೆಂಬ ಹೋರಾಟದ ಕಿಚ್ಚು ಹಚ್ಚಿಸಲಿಲ್ಲ ಎಂದು ಕಟಕದೊಂಡ ಯಾರ ಹೆಸರನ್ನೂ ಪ್ರಸ್ತಾಪಿಸದೆ ಆರೋಪಿಸಿದರು.
ಕೃಷ್ಣಾ ಮತ್ತು ಭೀಮಾನದಿ ಜಿಲ್ಲೆಗೆ 2 ಕಣ್ಣುಗಳಂತಿದ್ದರೂ ಮಹಾರಾಷ್ಟ್ರ ಹೆಚ್ಚು ನೀರು ಸಂಗ್ರಹಿಸಿ, ಬಳಸುತ್ತಿದೆ. ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಲ್ಲಿ ಜೂನ್ ತಿಂಗಳಲ್ಲಿ ಆಂಧ್ರಕ್ಕೆ 8-10 ಟಿಎಂಸಿ ನೀರು ಬೇಕೆಂದು ಸೂಚಿಸಿದ್ದು ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಭೀಮಾ ನದಿಯಿಂದ ನಮಗೆ ಸಿಗಬೇಕಾದ 15 ಟಿಎಂಸಿ ನೀರು ಸಿಕ್ಕಿಲ್ಲ. ಭೀಮಾನದಿಯ ತಿರುವು ಕಾರ್ಯ ನಡೆದಿದ್ದು, ಕರ್ನಾಟಕ ಭಾಗದ ನದಿ ಬತ್ತಿ ಹೋಗುತ್ತಿದೆ ಎಂದು ದೂರಿದರು.
ನಮ್ಮ ಜಿಲ್ಲೆಯವರೇ ಆದ ಎಂ.ಬಿ.ಪಾಟೀಲರು ನೀರಾವರಿ ಹೋರಾಟದಿಂದಲೇ ನೀರಾವರಿ ಸಚಿವರಾಗಿರುವುದು ಸಂತಸ. ಈ ಹಿಂದೆ ಯರನಾಳ ಶ್ರೀಗಳ ನೇತೃತ್ವದಲ್ಲಿ ಅವರು ನೀರಾವರಿಗೆ ಸಂಬಂಧಿಸಿದಂತೆ 12 ಬೇಡಿಕೆಗಳನ್ನು ಸಲ್ಲಿಸಿದ್ದರು. ಈಗ ಅವರು ನಮ್ಮ ಹಕ್ಕು ಕೊಡಿಸಬೇಕು ಎಂದು ಆಗ್ರಹಿಸಿದರು.