Please enable javascript.ನವರಸಪುರ ಉತ್ಸವ: ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಚರ್ಚೆ - ನವರಸಪುರ ಉತ್ಸವ: ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಚರ್ಚೆ - Vijay Karnataka

ನವರಸಪುರ ಉತ್ಸವ: ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಚರ್ಚೆ

Vijaya Karnataka Web 10 Feb 2015, 6:12 pm
Subscribe

ನವರಸಪುರ ಉತ್ಸವ ಕುರಿತಂತೆ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಸಮಾಲೋಚನೆ ನಡೆಸಿದರು.

ನವರಸಪುರ ಉತ್ಸವ: ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಚರ್ಚೆ
ವಿಜಯಪುರ: ನವರಸಪುರ ಉತ್ಸವ ಕುರಿತಂತೆ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಸಮಾಲೋಚನೆ ನಡೆಸಿದರು.

ಉತ್ಸವದ ಸ್ಥಳ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಐತಿಹಾಸಿಕ ಸ್ಥಳಗಳಾದ ಬಾರಾಕಮಾನ್, ಇಬ್ರಾಹಿಂರೋಜಾ ಸೇರಿದಂತೆ ನಾನಾ ಸ್ಮಾರಕಗಳಲ್ಲಿ ಕಾರ್ಯಕ್ರಮ ಆಯೋಜನೆ, ಮಡಿಕೆ ಪತ್ರಗಳ ತಯಾರಿಕೆ, ವಿಚಾರ ಸಂಕಿರಣ ಮತ್ತು ಸ್ಮರಣ ಸಂಚಿಕೆ ವಿಷಯಗಳು, ನಾನಾ ಸಾಹಸ ಕ್ರೀಡೆಗಳು, ವಿಶೇಷ ಕ್ರೀಡೆಗಳ ಆಯೋಜನೆ, ನಾನಾ ಸಮಿತಿಗಳಲ್ಲಿ ತಾಲೂಕುಗಳಿಂದ ಪ್ರತಿನಿಧಿಗಳ ಸೇರ್ಪಡೆ ಸೇರಿದಂತೆ ನಾನಾ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ರಿಯಾಜ್ ಫಾರೂಖಿ, ಮಲ್ಲಮ್ಮ ಯಾಳವಾರ, ರೇಷ್ಮಾ ಪಡೇಕನೂರ, ಇಂದುಮತಿ ಲಮಾಣಿ, ಶಶಿಕಲಾ ಕುಲ್ಲೊಳ್ಳಿ, ಡಿ. ಎಸ್. ಗುಡ್ಡೋಡಗಿ, ಡಿ.ಎಸ್.ಪಾಟೀಲ, ಯಶೋಧಾ ಗುಜ್ಜರ, ಅಮರೇಶ ಯಾತಗಲ್, ರಂಗಕರ್ಮಿ ಡಿ.ಎಚ್.ಕೊಲ್ಹಾರ, ಸುಲೇಮಾನ ಖುಮಾರ ಮತ್ತಿತರರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ