Please enable javascript.ಮಹಾಪುರುಷರ ಬಗ್ಗೆ ಹಗುರ ಮಾತು ಸಲ್ಲ : ವಾಲೀಕಾರ - ಮಹಾಪುರುಷರ ಬಗ್ಗೆ ಹಗುರ ಮಾತು ಸಲ್ಲ : ವಾಲೀಕಾರ - Vijay Karnataka

ಮಹಾಪುರುಷರ ಬಗ್ಗೆ ಹಗುರ ಮಾತು ಸಲ್ಲ : ವಾಲೀಕಾರ

Vijaya Karnataka Web 6 Apr 2015, 7:04 pm
Subscribe

ಮಹಾಪುರುಷರ ಕುರಿತು ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ಮಾನವತಾ ಹಾಗೂ ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲೀಕಾರ ಹೇಳಿದರು.

ಮಹಾಪುರುಷರ ಬಗ್ಗೆ ಹಗುರ ಮಾತು ಸಲ್ಲ : ವಾಲೀಕಾರ
ವಿಜಯಪುರ: ಮಹಾಪುರುಷರ ಕುರಿತು ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ಮಾನವತಾ ಹಾಗೂ ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲೀಕಾರ ಹೇಳಿದರು.

ತಾಲೂಕಿನ ಮದಭಾವಿ ಗ್ರಾಮದಲ್ಲಿ ಶ್ರೀ ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಮಹಾಪುರುಷರ ಕೊಡುಗೆ ಅನನ್ಯ. ಅಂಥ ಕೆಲ ಮಹಾನ್ ಪುರುಷರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೆಲವರು ಹಗುರವಾಗಿ ಮಾತನಾಡಿ, ವಿವಾದ ಸೃಷ್ಟಿಸುತ್ತಿದ್ದಾರೆ. ಪುಕ್ಕಟ್ಟೆ ಪ್ರಚಾರಕ್ಕೋಸ್ಕರ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಕೈಬಿಡಬೇಕೆಂದರು.

ಬಬಲೇಶ್ವರ ಶಾಂತವೀರ ಪಪೂ ಕಾಲೇಜ್‌ನ ಪ್ರೊ. ಮಹಾದೇವ ರೆಬಿನಾಳ ಮಾತನಾಡಿ, ರಾಮಾಯಣ ಭಾರತೀಯ ಮಹಾಗ್ರಂಥ. ಲಕ್ಷ್ಮಣ ಯುದ್ಧ್ದದಲ್ಲಿ ಮರಣ ಹೊಂದಿದಾಗ ಹನುಮಾನ ಪರ್ವತದಲ್ಲಿರುವ ಸಂಜೀವಿನ ಕಡ್ಡಿ ತರಲು ಹೇಳಿದಾಗ ಇಡೀ ಪರ್ವತವನ್ನು ಎತ್ತಿ ತಂದ ಧೀರನೇ ಹನುಮ. ರಾಮನ ನಾಮವೇ ಹನುಮಾನನ ಉಸಿರು. ಹನುಮಂತನ ಪೂಜೆಯಿಂದ ಸರ್ವ ಸಂಕಷ್ಟಗಳು ನಾಶವಾಗುತ್ತವೆ. ಆಂಜನೇಯ, ಮಾರುತಿ, ವಾಯುಪುತ್ರ, ಅಂಜನಾಸುತ, ಜಿತೇಂದ್ರಿಯ, ಹನುಮ ಮುಂತಾದ ಹೆಸರುಗಳಿಂದ ಭಕ್ತರು ಇವರನ್ನು ಭಕ್ತಿಯಿಂದ ಸ್ಮರಿಸುತ್ತಾರೆ ಎಂದರು.

ಹನುಮಾನ ದೇವಾಲಯದ ಪಾಂಡುರಂಗಾಚಾರ್ಯ ಸಾನ್ನಿಧ್ಯ ವಹಿಸಿ, ದೇವಸ್ಥಾನದ ಖರ್ಚು ಮತ್ತು ವೆಚ್ಚಗಳನ್ನು ಹೇಳಿ ದಾನಿಗಳನ್ನು ಸ್ಮರಿಸಿಕೊಂಡರು. ತಾಪಂ ಮಾಜಿ ಉಪಾಧ್ಯಕ್ಷ ರಾಮನಗೌಡ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಅಚನೂರ, ಮೀರಾಸಾಬ ಮುಲ್ಲಾ, ಅಶೋಕ ತೊರವಿ, ಆನಂದ ಕುಲಕರ್ಣಿ, ಪ್ರಶಾಂತ ಚೌಧರಿ, ರಾಜು ಇಂಚಗೇರಿ, ಎಸ್.ಬಿ. ಬಿರಾದಾರ ಮತ್ತಿತರರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ