ಆ್ಯಪ್ನಗರ

14ರಂದು ಸಿಂದಗಿ ಬಂದ್‌

ಸಿಂದಗಿ: ತಾಲೂಕಿನ ಜಲಪೂರ ದಲಿತನ ಮೇಲೆ ನಡೆದ ಹಲ್ಲೆ , ಬೆಕಿನಾಳ ಗ್ರಾಮದ ದಲಿತ ಮಹಿಳೆ ಹತ್ಯಾಚಾರ ಪ್ರಕರಣ ಖಂಡನೀಯ. ದಲಿತರ ಮೇಲೆ ನಿರಂತರ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಕಠಿಣ ಕ್ರಮ ಜರುಗಿಸುತ್ತಿಲ್ಲ. ಈ ಪ್ರಕರಣಗಳನ್ನು ಸಿಒಡಿಗೆ ವಹಿಸುವಂತೆ ಒತ್ತಾಯಿಸಿ ಆ.14ರಂದು ಸಿಂದಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಾಜ್ಯ ದಸಂಸ ಸಂಚಾಲಕ ರಮೇಶ ಆಸಂಗಿ ತಿಳಿಸಿದರು.

Vijaya Karnataka 12 Aug 2018, 5:00 am
ಸಿಂದಗಿ: ತಾಲೂಕಿನ ಜಲಪೂರ ದಲಿತನ ಮೇಲೆ ನಡೆದ ಹಲ್ಲೆ , ಬೆಕಿನಾಳ ಗ್ರಾಮದ ದಲಿತ ಮಹಿಳೆ ಹತ್ಯಾಚಾರ ಪ್ರಕರಣ ಖಂಡನೀಯ. ದಲಿತರ ಮೇಲೆ ನಿರಂತರ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಕಠಿಣ ಕ್ರಮ ಜರುಗಿಸುತ್ತಿಲ್ಲ. ಈ ಪ್ರಕರಣಗಳನ್ನು ಸಿಒಡಿಗೆ ವಹಿಸುವಂತೆ ಒತ್ತಾಯಿಸಿ ಆ.14ರಂದು ಸಿಂದಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಾಜ್ಯ ದಸಂಸ ಸಂಚಾಲಕ ರಮೇಶ ಆಸಂಗಿ ತಿಳಿಸಿದರು.
Vijaya Karnataka Web 14
14ರಂದು ಸಿಂದಗಿ ಬಂದ್‌


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ದಲಿತ ದೌರ್ಜನ್ಯ ಕಾಯ್ದೆಯನ್ನು ಮತ್ತಷ್ಟು ಕಠಿಣ ಹಾಗೂ ಗಟ್ಟಿಗೊಳಿಸಬೇಕಿದೆ ಎಂದರು.

ಜಲಪುರ ಗ್ರಾಮದ ಗುರಪ್ಪ ಹರಿಜನ ಕೊಲೆ ಪ್ರಕರಣ ಮತ್ತು ಬೆಕಿನಾಳ ಗ್ರಾಮದ ಮಹಿಳೆ ಮೇಲೆ ನಡೆದ ದೌರ್ಜನ್ಯ ಹಾಗೂ ಕೊಲೆ ಪ್ರಕರಣದಲ್ಲಿ ಡಿಸಿ ಹಾಗೂ ಎಸ್ಪಿ ಅವರನ್ನು ಆರೋಪಿಗಳನ್ನಾಗಿಸಬೇಕು. ಇಂತಹ ಘಟನೆಗಳು ಪುನಃ ಮರುಕಳಿಸದಂತೆ ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಬೇಕು. ನಾವು ಇತರ ವರ್ಗಗಳೊಂದಿಗೆ ಸೌಹಾರ್ದವಾಗಿ ಬದುಕಬೇಕೆಂಬ ಸದಾಶಯ ಹೊಂದಿದ್ದೇವೆ ಎಂದರು.

ದಸಂಸ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ, ಕಾರ್ಯಕಾರಿ ಸದಸ್ಯ ಅಶೋಕ ಚಲವಾದಿ ಹಾಗೂ ನಗರ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ, ದಲಿತರ ದೌರ್ಜನ್ಯ ಎಲ್ಲೆ ಮೀರಿದೆ. ಅಲ್ಲದೇ ದಲಿತರ ಪ್ರಕರಣಗಳಲ್ಲಿ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ. ಸರಕಾರ ಹಾಗೂ ಪೊಲೀಸ್‌ ಇಲಾಖೆಗಳು ದಲಿತ ಕಾಳಜಿ ತೋರುವ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ಬಂದ್‌ ದಿನ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಖುದ್ದಾಗಿ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಈ ಬಂದ್‌ ಕೇವಲ ದಲಿತರಿಗಾಗಿ ಅಲ್ಲ. ಎಲ್ಲ ಸಮಾಜದ ಮೇಲೆ ನಡೆಯುವ ದೌರ್ಜನ್ಯ ಖಂಡಿಸುವ ಸಲುವಾಗಿ ಎಂದರು.

ಶರಣು ಸಿಂಧೆ, ಪರಶುರಾಮ ದಿಂಡವಾರ, ಹಣಮಂತ ಆಲಮೇಲ, ಮಂಜುನಾಥ ಯಂಟಮಾನ, ಜೈಭೀಮ ತಳಕೇರಿ, ಶರಣು ಚಲವಾದಿ, ಶಿವಪುತ್ರ ಮೇಲಿನಮನಿ, ಮಲ್ಲು ಬನಸೋಡೆ, ಎಸ್‌.ಎಸ್‌.ಚಡಚಣ, ರವಿ ನಡುವಿನಕೇರಿ, ಧರೆಪ್ಪ ಮುಂದೋಲಿ, ಶಿವಾನಂದ ಹಾಲಕವಡೆ, ಬಸವರಾಜ ಇಂಗಳಿ, ರಾಜು ದೊಡಮನಿ, ದೇವಿಂದ್ರ ಬನಸೋಡೆ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ