ಆ್ಯಪ್ನಗರ

ಕಿಸಾನ್‌ ಸಮ್ಮಾನಗೆ 2 ಲಕ್ಷ ರೈತರ ನೋಂದಣಿ

ವಿಜಯಪುರ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂ. ಪಡೆಯಲು ಜಿಲ್ಲೆಯ 3,62,979 ರೈತರಲ್ಲಿ ಒಟ್ಟು 2,34,973 ರೈತರು ಸ್ವಯಂ ಘೋಷಣೆ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

Vijaya Karnataka 5 Jul 2019, 5:00 am
ವಿಜಯಪುರ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂ. ಪಡೆಯಲು ಜಿಲ್ಲೆಯ 3,62,979 ರೈತರಲ್ಲಿ ಒಟ್ಟು 2,34,973 ರೈತರು ಸ್ವಯಂ ಘೋಷಣೆ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.
Vijaya Karnataka Web 2 lakh farmers registered for kisan samman
ಕಿಸಾನ್‌ ಸಮ್ಮಾನಗೆ 2 ಲಕ್ಷ ರೈತರ ನೋಂದಣಿ


ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ 19188, ಬಸವನಬಾಗೇವಾಡಿ ತಾಲೂಕಿನ 23895, ವಿಜಯಪುರ ತಾಲೂಕಿನ 20297, ಚಡಚಣ ತಾಲೂಕಿನ 18006, ದೇವರಹಿಪ್ಪರಗಿ ತಾಲೂಕಿನ 15305, ಇಂಡಿ ತಾಲೂಕಿನ 36118, ಕೊಲ್ಹಾರ ತಾಲೂಕಿನ 8998, ಮುದ್ದೇಬಿಹಾಳ ತಾಲೂಕಿನ 19830, ನಿಡಗುಂದಿ ತಾಲೂಕಿನ 6941, ಸಿಂದಗಿ ತಾಲೂಕಿನ 32024, ತಾಳಿಕೋಟೆ ತಾಲೂಕಿನ 16145 ಹಾಗೂ ತಿಕೋಟಾ ತಾಲೂಕಿನ 18226 ರೈತರು ಸೇರಿದಂತೆ ಜಿಲ್ಲೆಯ ಒಟ್ಟು 2,34,973 ರೈತರು ತಮ್ಮ ಸ್ವಯಂ ಘೋಷಣೆಯನ್ನು ಸಲ್ಲಿಸಿ ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

ಅರ್ಹ ರೈತರ ಮಾಹಿತಿಯನ್ನು ಸ್ವಯಂ ಘೋಷಣೆಗೆ ಆಧರಿಸಿ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು, ರೈತರು ತಾವು ನೀಡಿರುವ ಸ್ವಯಂ ಘೋಷಣೆಯನ್ನು ತಂತ್ರಾಂಶದಲ್ಲಿ ಅಳವಡಿಸಿರುವ ಕುರಿತು hಠಿಠಿp://್ಛ್ಟ್ಠಜಿಠಿspಞk.ka್ಟ್ಞaಠಿaka.ಜಟv.ಜ್ಞಿ/ಞಜಿs್ಟಛಿpಟ್ಟಠಿ/್ಚhಛ್ಚಿksಠಿaಠ್ಠಿs.asp್ಡ ವೆಬ್‌ಸೈಟ್‌ನಲ್ಲಿ ತಮ್ಮ ಆಧಾರ ಸಂಖ್ಯೆ ಅಥವಾ ಪಿಎಂಕೆಐಡಿ ಸಂಖ್ಯೆ ನಮೂದಿಸುವ ಮೂಲಕ ಖಾತ್ರಿಪಡಿಸಿಕೊಳ್ಳಬಹುದಾಗಿದೆ.

ಕ್ಷೇತ್ರಮಟ್ಟ ಸಿಬ್ಬಂದಿ ಬಹುತೇಕ ಅರ್ಹ ರೈತರ ಸ್ವಯಂ ಘೋಷಣೆ ಸಲ್ಲಿಸಿದ್ದು, ಇನ್ನೂ ಉಳಿದವರೆಲ್ಲ ಈ ಯೋಜನೆಯ ಲಾಭ ಪಡೆಯಲು ಅನರ್ಹರೆಂದು ತಿಳಿಸಿದ್ದಾರೆ. ಕಾರಣಾಂತರಗಳಿಂದ ಅರ್ಹ ರೈತರು ಸ್ವಯಂ ಘೋಷಣೆ ಸಲ್ಲಿಸಿರದಿದ್ದರೆ ಜು.5ರೊಳಗೆ ಬ್ಯಾಂಕ್‌ ಪಾಸ್‌ಬುಕ್‌, ಆಧಾರ ಕಾರ್ಡ್‌, ಝರಾಕ್ಸ್‌ನೊಂದಿಗೆ ಸ್ವಯಂ ಘೋಷಣೆಯನ್ನು ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಪಂ ಅಥವಾ ಸಾಮಾನ್ಯ ಸೇವಾ ಕೇಂದ್ರ ಅಥವಾ ನಾಡಕಚೇರಿಗಳಲ್ಲಿ ಸಲ್ಲಿಸಿ ಈ ಯೋಜನೆ ಲಾಭ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ