ಆ್ಯಪ್ನಗರ

2 ತಿಂಗಳು ಉಚಿತ ಮೇವು ಪೂರೈಕೆಗೆ : ಸುನಿಲಗೌಡ ಆಗ್ರಹ

ವಿಜಯಪುರ : ಪ್ರವಾಹಯದಿಂದಾಗಿ ಅಪಾರ ಮೇವು ಹಾನಿಯಾಗಿದ್ದು , 2 ತಿಂಗಳ ಕಾಲ ಜಾನುವಾರುಗಳಿಗೆ ಉಚಿತ ಮೇವು ಪೂರೈಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಸುನಿಲಗೌಡ ಪಾಟೀಲ ಸರಕಾರಕ್ಕೆ ಆಗ್ರಹಿಸಿದ್ದಾರೆ.

Vijaya Karnataka 14 Aug 2019, 5:00 am
ವಿಜಯಪುರ : ಪ್ರವಾಹಯದಿಂದಾಗಿ ಅಪಾರ ಮೇವು ಹಾನಿಯಾಗಿದ್ದು , 2 ತಿಂಗಳ ಕಾಲ ಜಾನುವಾರುಗಳಿಗೆ ಉಚಿತ ಮೇವು ಪೂರೈಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಸುನಿಲಗೌಡ ಪಾಟೀಲ ಸರಕಾರಕ್ಕೆ ಆಗ್ರಹಿಸಿದ್ದಾರೆ.
Vijaya Karnataka Web 2 months free supply of forage sunil gowda
2 ತಿಂಗಳು ಉಚಿತ ಮೇವು ಪೂರೈಕೆಗೆ : ಸುನಿಲಗೌಡ ಆಗ್ರಹ


ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರಗಳಿಗೆ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಪ್ರವಾಹದಿಂದ ಬೆಳೆಹಾನಿಯಾದ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ಧನ ವಿತರಿಸಬೇಕು. ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕು, ಸಂತ್ರಸ್ತರಿಗೆ ನಿರ್ಮಿಸುವ ಬಡಾವಣೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

----------------------

1 ಲಕ್ಷ ಮೊತ್ತದ ಬ್ಲ್ಯಾಂಕೆಟ್‌ ಸಲ್ಲಿಕೆ

ಬಾಣಂತಿಯರಿಗೆ ತೊಟ್ಟಿಲು ವಿತರಣೆ

ವಿಕ ಸುದ್ದಿಲೋಕ ವಿಜಯಪುರ

ನೆರೆ ಸಂತ್ರಸ್ತರಿಗೆ ನೆರವಾಗಲು ವಿಧಾನ ಪರಿಷತ್‌ ಸದಸ್ಯ ಸುನಿಲಗೌಡ ಪಾಟೀಲ ಜಿಲ್ಲಾಡಳಿತಕ್ಕೆ 1 ಲಕ್ಷ ರೂ. ಮೊತ್ತದ ಬ್ಲ್ಯಾಂಕೆಟ್‌ ಹಾಗೂ ಕೆಲವು ಕಾಳಜಿ ಕೇಂದ್ರಗಳಲ್ಲಿನ ಬಾಣಂತಿಯರಿಗೆ ತೊಟ್ಟಿಲು ವಿತರಿಸಿದರು.

ಮಂಗಳವಾರ ಜಿಲ್ಲಾಡಳಿತಕ್ಕೆ ಬ್ಲ್ಯಾಂಕೆಟ್‌ ನೀಡಿದ ಅವರು, ಸಂತ್ರಸ್ತರು ಮತ್ತೆ ತಮ್ಮ ಮನೆಗೆ ಮರಳುವಾಗ ಅವರಿಗೆ ಜೀವನ ನಡೆಸಲು ಕನಿಷ್ಠ ವಸ್ತುಗಳ ಅಗತ್ಯವಿದೆ. ಜಿಲ್ಲಾಡಳಿತ ಸಂತ್ರಸ್ತ ಕುಟುಂಬಳಿಗೆ ಕಿಟ್‌ ನೀಡಲು ಚಿಂತನೆ ನಡೆಸಿದೆ. ಹೀಗಾಗಿ ಬ್ಲ್ಯಾಂಕಟ್‌ ನೀಡಿದ್ದೇನೆ ಎಂದರು.

ಬಾಣಂತಿಯರಿಗೆ ತೊಟ್ಟಿಲು : ಸುನಿಲಗೌಡ ಪಾಟೀಲ ಅವಳಿ ಜಿಲ್ಲೆಯ ಕೆಲವು ಕಾಳಜಿ ಕೇಂದ್ರಗಳಲ್ಲಿರುವ ಬಾಣಂತಿಯರಿಗೆ ತೊಟ್ಟಿಲು ನೀಡಿದರು.

ಮುದ್ದೇಬಿಹಾಳ ತಾಲೂಕಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದಾಗ, 15 ದಿನಗಳ ಕೂಸು ಹಾಗೂ ಒಂದೂವರೆ ತಿಂಗಳ ಕೂಸು ನೆಲದ ಮೇಲೆ ಮಲಗಿದ್ದು , ಕಂಡುಬಂತು. ಹೀಗಾಗಿ ಅಲ್ಲಿನ ಕಾಳಜಿ ಕೇಂದ್ರಗಳಲ್ಲಿರುವ ಹಸುಗೂಸುಗಳಿಗೆ 4 ತೊಟ್ಟಿಲುಗಳನ್ನು ಕಳುಹಿಸಿಕೊಡಲಾಗಿದೆ ಎಂದು ಸುನಿಲಗೌಡ ಪಾಟೀಲ ತಿಳಿಸಿದರು.

ಬುಧವಾರ ಜಮಖಂಡಿ ತಾಲೂಕಿನ ಕಾಳಜಿ ಕೇಂದ್ರಗಳಿಗೂ 14 ತೊಟ್ಟಿಲುಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಸುನಿಲಗೌಡ ಪಾಟೀಲರ ಪುತ್ರಿ ಸಾನ್ವಿ ಪಾಟೀಲ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗೆದ್ದ 5 ಸಾವಿರ ನಗದು ಬಹುಮಾನವನ್ನು ಬಾಣಂತರಿಯರಿಗೆ ತೊಟ್ಟಿಲು ವಿತರಣೆಗೆ ನೀಡಿದರು.

ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಮುಖಂಡರಾರ ಸಿದ್ದಣ್ಣ ಸಕ್ರಿ, ಸಂಗಮೇಶ ಬಬಲೇಶ್ವರ, ಡಾ.ಮಹಾಂತೇಶ ಬಿರಾದಾರ, ಸಚಿನ್‌ ಮಂಗಳವೇಡೆ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ