ಆ್ಯಪ್ನಗರ

4 ದಿನಗಳಾದರೂ ಸಿಗದ ಚಿರತೆ ಸುಳಿವು

ವಿಜಯಪುರ: ತಾಳಿಕೋಟೆ ಸಮೀಪದ ಬಿಳೇಬಾವಿ ಗ್ರಾಮದ ಹಳ್ಳದಲ್ಲಿ ಕುರಿಗಾಹಿ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿರುವ ಚಿರತೆ ಸುಳಿವು 4ನೇ ದಿನದ ಕಾರ್ಯಾಚರಣೆಯಲ್ಲೂ ಸಿಕ್ಕಿಲ್ಲ.

Vijaya Karnataka 14 Jul 2018, 5:00 am
ವಿಜಯಪುರ: ತಾಳಿಕೋಟೆ ಸಮೀಪದ ಬಿಳೇಬಾವಿ ಗ್ರಾಮದ ಹಳ್ಳದಲ್ಲಿ ಕುರಿಗಾಹಿ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿರುವ ಚಿರತೆ ಸುಳಿವು 4ನೇ ದಿನದ ಕಾರ್ಯಾಚರಣೆಯಲ್ಲೂ ಸಿಕ್ಕಿಲ್ಲ.
Vijaya Karnataka Web 4
4 ದಿನಗಳಾದರೂ ಸಿಗದ ಚಿರತೆ ಸುಳಿವು


ಚಿರತೆ ಪ್ರತ್ಯಕ್ಷವಾದಾಗಿನಿಂದ ಬಿಳೇಬಾವಿ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ ಭಯ ಆವರಿಸಿದೆ. ಈ ನಡುವೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿದಿದೆ. ಆದರೂ ಚಿರತೆ ಪ್ರತ್ಯಕ್ಷವಾದ ಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲೀಗ ಅದರ ಇರುವಿಕೆ ಸುಳಿವು ಸಿಕ್ಕಿಲ್ಲ.

ಶಹಾಪೂರ ಅರಣ್ಯ ಪ್ರದೇಶದಿಂದ ಚಿರತೆ ಆಹಾರ ಹುಡುಕಿ ಈ ಭಾಗಕ್ಕೆ ಬಂದಿರಬಹುದು. ಜನರನ್ನು ಕಂಡು ತನ್ನ ಪ್ರಾಣ ರಕ್ಷಣೆಗೆ ಅದು ದಾಳಿ ನಡೆಸಿರಬಹುದು. ನಂತರ ಮನುಷ್ಯರ ಚಲನವಲನ ಗಮನಿಸಿ ವಾಪಸ್‌ ಹೋಗಿರಬಹುದು. ಇಲ್ಲಿಯ ತನಕ ಅದರ ಸುಳಿವು ಸಿಕ್ಕಿಲ್ಲ. ಆದರರೂ ಸುತ್ತಲಿನ ಗ್ರಾಮಸ್ಥರ ಆತಂಕ ನಿವಾರಿಸಲು ಕೆಲ ದಿನ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಇನ್ನೊಂದೆಡೆ ಮುದ್ದೇಬಿಹಾಳ ವ್ಯಾಪ್ತಿಯ ಅರಣ್ಯ ಇಲಾಖೆ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದರೂ ಚಿರತೆ ಪತತೆಯಾಗಿಲ್ಲ . ಜತೆಗೆ ಹೆಜ್ಜೆ ಗುರುತೂ ಕಂಡಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ